ಕುಂದಾಪುರ :ಜೇಸಿಐ ಭಾರತದ ಸೀನಿಯರ್ ಮೆಂಬರ್ಸ್ ಅಸೋಸಿಯೇಷನ್‌ನ ವಲಯ 15ರ ಅಧ್ಯಕ್ಷರಾಗಿ ಜೇಸಿ ಸತೀಶ್ ಪೂಜಾರಿ ಆಯ್ಕೆ

0
364

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಜೇಸಿಐ ಭಾರತದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ವಲಯ 15ರ ಸೀನಿಯರ್ ಮೆಂಬರ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಜೇಸಿಐ ಕಾರ್ಕಳ ರೂರಲ್‌ನ ಸ್ಥಾಪಕ ಜೇಸಿ ಸತೀಶ್ ಪೂಜಾರಿಯವರು ಆಯ್ಕೆಯಾಗಿದ್ದಾರೆ.

ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಅಧಿವೇಶನದಲ್ಲಿ ಅಧ್ಯಕ್ಷರಾಗಿ ಆಯ್ಕೆ ಆದ ಅವರಿಗೆ ರಾಷ್ಟ್ರೀಯ ಅಧ್ಯಕ್ಞ ಜೇಸಿ ಪ್ರಮೋದ್ ಕುಮಾರ್ ಅವರು ಪ್ರತಿಜ್ಞಾ ವಿಧಿ ಭೋದಿಸಿದರು. 2003ರಲ್ಲಿ ಜೇಸಿ ಸಂಸ್ಥೆಗೆ ಸೇರಿದ ಸತೀಶ್ ಅವರು ಜೇಸಿಯಲ್ಲಿ ಹಲವು ಹುದ್ದೆಗಳನ್ನಲಂಕರಿಸಿ ವಲಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದವರು. ಜೇಸಿಐ ಭಾರತ ಹೊಸದಾಗಿ ಆರಂಭಿಸಿರುವ ಹಿರಿಯ ಜೇಸಿ ಸದಸ್ಯರ ಸಂಸ್ಥೆಯಲ್ಲಿ ಎರಡನೇ ವಲಯಾಧ್ಯಕ್ಷರಾಗಿ ಕಾರ್ಕಳ ಕಲತ್ರಪಾದೆಯ ಸತೀಶ್ ಪೂಜಾರಿ ಅವರು ಕಾರ್ಯನಿರ್ವಹಿಸಲಿದ್ದಾರೆ.

LEAVE A REPLY

Please enter your comment!
Please enter your name here