ಹರ್ತಟ್ಟು- ನೂತನ ಪೌಳಿಲೋಕಾರ್ಪಣೆ ,ಅಷ್ಟಬಂಧ ಬ್ರಹ್ಮಕಲಶಕ್ಕೆ ಚಪ್ಪರ ಮುಹೂರ್ತ, ಮಾ.20ರಂದು ಹೊರಕಾಣಿಕೆ ಸಮರ್ಪಣೆ

0
357

ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ಕೋಟ ಗಿಳಿಯಾರು ಗ್ರಾಮದ ಹರ್ತಟ್ಟಿನ ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುತ್ತು ಪೌಳಿ ಲೋಕಾರ್ಪಣೆ ಶ್ರೀ ದೇವಳದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ಇದೇ ಬರುವ ಮಾರ್ಚ್ 23,24ರಂದು ಜರಗಲಿದೆ.ಆ ಪ್ರಯುಕ್ತ ಬುಧವಾರ ಶ್ರೀದೇವಳದಲ್ಲಿ ಚಪ್ಪರ ಮುಹೂರ್ತ ಕಾರ್ಯಕ್ರಮ ದೇವಳದ ಅರ್ಚಕ ಸುಧೀರ್ ಐತಾಳ್ ನೇತ್ರತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಗಾಣಿಗ, ಕಾರ್ಯದರ್ಶಿ ಹರೀಷ್ ದೇವಾಡಿಗ, ಕೋಶಾಧಿಕಾರಿ ಶ್ರೀಕಾಂತ್ ಶೆಣೈ, ತಿಮ್ಮ ಕಾಂಚನ್, ಆದಿತ್ಯ ಕೋಟ,ನಾಗರಾಜ ಗಾಣಿಗ, ಏಕದಂತ ಶಾಮಿಯಾನ ಮಾಲಿಕ ಅಯ್ಯಪ್ಪ ದೇವಾಡಿಗ,ಬಾಬು ಶೆಟ್ಟಿ,ಚಂದ್ರ ಹಾಡಿಕೆರೆ ಮತ್ತಿತರರು ಉಪಸ್ಥಿತರಿದ್ದರು.

ಸುತ್ತಮುತ್ತಲಿನ ಗ್ರಾಮಸ್ಥರು ಹೊರೆಕಾಣಿಕೆ ಸಮರ್ಪಿಸುವವರು ಮಾ.20ರ ದಿನ ನಿಗದಿಪಡಿಸಲಾಗಿದೆ.ಎಂದು ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಗಾಣಿಗ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here