ಪಾಂಡೇಶ್ಚರ – ಬಾಂಧವ್ಯ ಬ್ಲಡ್ ನೆರವು ಯೋಜನೆಯಿಂದ ಏಳನೇ ಮನೆ ಹಸ್ತಾಂತರ

0
793

ಕುಂದಾಪುರ ಮಿರರ್ ಸುದ್ದಿ…

ಕೋಟ: ಬಾಂಧವ್ಯ ಬ್ಲಡ್ ಕರ್ನಾಟಕ ಹಾಗೂ ವಿವಿಧ ದಾನಿಗಳ ಸಹಕಾರದಿಂದ ಅಶಕ್ತ ಕುಟುಂಬವಾದ ಪಾಂಡೇಶ್ವರದ ಜ್ಯೋತಿ ಮರಕಾಲ ಇವರಿಗೆ ನೂತನ ಗೃಹ ನಿರ್ಮಿಸಿ ಅದನ್ನು ಸೋಮವಾರ ಹಸ್ತಾಂತರಿಸಲಾಯಿತು.

ಮನೆ ಹಸ್ತಾಂತರ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಪಾಂಡೇಶ್ಚರ ರಕ್ತೇಶ್ವರಿ ದೇವಳದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಟೌನ್ ಪೊಲೀಸ್ ಠಾಣೆಯ ಎ.ಎಸ್ ಐ ಜಯಕರ ಪೂಜಾರಿ ಐರೋಡಿ, ಪಂಚವರ್ಣ ಯುವಕ ಮಂಡಲದ ಇದರ ಉಪಾಧ್ಯ ಮನೋಹರ್ ಪೂಜಾರಿ, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ರಕ್ತೇಶ್ಚರಿ ಬಳಗದ ಅಧ್ಯಕ್ಷ ವಿ ನಾರಾಯಣ ಆಚಾರ್ಯ ,ಪಂಚಾಯತ್ ಸದಸ್ಯೆ ಸಂಧ್ಯಾ ಸುಬ್ರಹ್ಮಣ್ಯ ರಾವ್, ಸ್ಥಳೀಯರಾದ ಶೇಖರ್ ಪೂಜಾರಿ, ಶಿವ ಪೂಜಾರಿ, ಕೃಷ್ಣ ಮರಕಾಲ ಮತ್ತಿತರರು ಉಪಸ್ಥಿತರಿದ್ದರು.

ಬಾಂಧವ್ಯ ಬ್ಲಡ್ ಕರ್ನಾಟಕದ ಅಧ್ಯಕ್ಷ ದಿನೇಶ್ ಬಾಂಧವ್ಯ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಅಭಿಜಿತ್ ಪಾಂಡೇಶ್ಚರ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here