ಪಾರಂಪಳ್ಳಿ – ಶ್ರೀ ಮಹಾವಿಷ್ಣು ಭಜನಾ ಸಂಘ ಶತಮಾನೋತ್ಸವ ಸಂಭ್ರಮ, ಅಖಂಡ ಭಜನಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ

0
347

ಕುಂದಾಪುರ ಮಿರರ್ ‌ಸುದ್ದಿ…

ಕೋಟ: ಸಾಲಿಗ್ರಾಮದ ಪಾರಂಪಳ್ಳಿ ಶ್ರೀ ಮಹಾ ವಿಷ್ಣು ಭಜನಾ ಸಂಘ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಶ್ರೀ ರಾಮ ಭಜನಾ ಶತಮಾನೋತ್ಸವ, ಅಖಂಡ ಭಜನಾ ಸಪ್ತಾಹ, ಶ್ರೀ ರಾಮಭಜನಾ ವಸಂತೋತ್ಸವ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳು ಗುರುವಾರ ಚಾಲನೆಗೊಂಡಿತು.

ಅಖಂಡ ಭಜನೋತ್ಸವವನ್ನು ಮಹಾವಿಷ್ಣು ಭಜನಾ ಸಂಘದ ಅಧ್ಯಕ್ಷ ಪಿ ರಾಮಚಂದ್ರ ಉಪಾಧ್ಯಾಯ ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ಮಾ.22ರಿಂದ ಮೊದಲ್ಗೊಂಡು ಮಾ.29 ರವರೆಗೆ ಪ್ರತಿ ನಿತ್ಯ ಭಜನೆ 6-30 ರಿಂದ 9-30ರ ವರೆಗೆ ನಡೆಯುವ ಶ್ರೀ ರಾಮ ಭಜನೆ, ವಸಂತೋತ್ಸವ,ಶ್ರೀರಾಮನವಮಿ ಗುರುವಾರದಂದು ಮಾ.30ರಿಂದ ಎ.6ರ ವರೆಗೆ ಅಖಂಡ ಭಜನಾ ಸಪ್ತಾಹ ,ಮಹಾ ಅನ್ನಸಂತರ್ಪಣೆ, ದೀಪ ಸ್ಥಾಪನೆ, ಅಖಂಡ ಭಜನೆ ಆರಂಭಿಕ ದಿನದಿಂದ ರಾತ್ರಿ 10.30 ಗಂಟೆಗೆ ಮಹಾಮಂಗಳಾರತಿ ಮತ್ತು,ಶ್ರೀ ಮಹಾವಿಷ್ಣು ದೇವರಿಗೆ ಪಂಚಾಮೃತ ಅಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಭಜನಾ ಸಂಘದ ಗೌರವಾಧ್ಯಕ್ಷರಾದ ಯಜ್ಞನಾರಾಯಣ ಹೇರ್ಳೆ, ಶ್ರೀನಿವಾಸ ಹೇರ್ಳೆ ಉಪಾಧ್ಯಕ್ಷರಾದ ಪಿ.ವೈ ಕೃಷ್ಣಪ್ರಸಾದ್ ಹೇರ್ಳೆ, ಕಾರ್ಯದರ್ಶಿ ಸೀತಾರಾಮ್ ಐತಾಳ್, ಜೊತೆಕಾರ್ಯದರ್ಶಿ ಲಕ್ಷ್ಮೀನಾರಾಯಣ ಅಡಿಗ, ಕೋಶಾಧಿಕಾರಿ ಚಂದ್ರಶೇಖರ ಕಾರಂತ್, ಆಂತರಿಕ ಲೆಕ್ಕಪರಿಶೋಧಕ ಸಚಿನ್ ಹೇರ್ಳೆ ,ಕಾರ್ಯಕಾರಿ ಮಂಡಳಿಯ ಸದಸ್ಯರಾದ ಚಂದ್ರಶೇಖರ ಅಡಿಗ, ರಘು ಮಧ್ಯಸ್ಥ, ಸೂರ್ಯನಾರಾಯಣ ಹೇರ್ಳೆ, ಆನಂದರಾಮ ಹೇರ್ಳೆ,ರಾಘವೇಂದ್ರ ಹೊಳ್ಳ, ಜನಾರ್ದನ ಹೇರ್ಳೆ, ಶ್ರೀನಿವಾಸ್ ಉಪಾಧ್ಯಾಯ, ಸೂರ್ಯನಾರಾಯಣ ಉಪಾಧ್ಯಾಯ, ಶಶಾಂಕ್ ಐತಾಳ್, ರಾಧಕೃಷ್ಣ ಅಡಿಗ, ಪ್ರಶಾಂತ್ ಹೇರ್ಳೆ, ಮಾಲತಿ ಅಡಿಗ, ಅಧ್ಯಕ್ಷರು ಪದಾಧಿಕಾರಿಗಳು ಮ.ಮಹಿಳಾ ಭಜನಾ ಸಂಘ ಪಾರಂಪಳ್ಳಿ ಇತರರು ಉಪಸ್ಥಿತರಿದ್ದರು.

ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನೆರವೆರಿತು.

LEAVE A REPLY

Please enter your comment!
Please enter your name here