ಕುಂದಾಪುರ :ರಾಜಕೀಯ ಗುರು ಎ.ಜಿ.ಕೊಡ್ಗಿ ಋಣ ತೀರಿಸಿದ ಹಾಲಾಡಿ

0
1053

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ರಾಜ್ಯ ಬಿಜೆಪಿಯಲ್ಲಿ ಕಗ್ಗಂಟಾಗಿದ್ದ ಅಭ್ಯರ್ಥಿ ಆಯ್ಕೆ ಪ್ತಕ್ರಿಯೆಯ ಬಳಿಕ ನಿರೀಕ್ಷೆಗೂ ಮೀರಿದ ಫಲಿತಾಂಶ ಹೊರಬೀಳುತ್ತಿದೆ.

ಕುಂದಾಪುರದ ಶಾಸಕ, ಕರಾವಳಿಯ ವಾಜಪೇಯಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ತನ್ನ ಚಕ್ರಾಧಿಪತ್ಯವನ್ನು ತನ್ನ ರಾಜಕೀಯ ಗುರು ದಿವಂಗತ ಎ.ಜಿ.ಕೊಡ್ಗಿಯವರ ಪುತ್ರ, ತನ್ನವರಾಜಕೀಯದ ಬಲಗೈ ಬಂಟ ಕಿರಣ್ ಕೊಡ್ಗಿಯವರಿಗೆ ಬಿಟ್ಟುಕೊಟ್ಟಿದ್ದಾರೆ.

ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರೇ ಸ್ವ ಇಚ್ಚೆಯಿಂದ ಕಿರಣ್ ಕೊಡ್ಗಿಯವರಿಗೆ ಅವಕಾಶ ನೀಡುವ ಮೂಲಕ ಎ.ಜಿ.ಕೊಡ್ಗಿಯವರ ಋಣ ತೀರಿಸುವ ಇಂಗಿತ ವ್ಯಕ್ತಪಡಿಸಿದ್ದು, ಬಿಜೆಪಿ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ.

ಇದರಿಂದ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಧಿಕೃತವಾಗಿ ಕಿರಣ್ ಕೊಡ್ಗಿಯವರ ಹೆಸರು ಘೋಷಣೆಯಾಗಲಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here