ಕೋಟತಟ್ಟುಪಡುಕರೆ – ಪರಿಸರದ ಬಗ್ಗೆ ಇಂದೇ ಜಾಗೃತಗೊಳ್ಳದಿದ್ದರೆ ಮುಂದಿದೆ ಆಪತ್ತು, ಪರಿಸರದ ಬಗ್ಗೆ ಕಾಳಜಿ ವಹಿಸಲು ಕರೆ – ಪರಿಸರ ಇಲಾಖಾಧಿಕಾರಿ ಡಾ.ಕೆ.ಎಂ ರಾಜು

0
314

ಕುಂದಾಪುರ ಮಿರರ್ ‌ಸುದ್ದಿ…

ಕೋಟ: ಪರಿಸರದ ಒರ್ವ ಗಣ್ಯ ವ್ಯಕ್ತಿಯ ಹೆಸರಿನಲ್ಲಿ ಪರಿಸರ ಕಾಳಜಿಯ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಎಂದು ಉಡುಪಿ ಜಿಲ್ಲಾ ಪರಿಸರ ಇಲಾಖೆಯ ಅಧಿಕಾರಿ ಡಾ.ಕೆ.ಎಂ ರಾಜು ಹೇಳಿದರು.

ಬರೇ ಶ್ರೀಮಂತಿಕೆಯಿಂದ ವ್ಯಕ್ತಿ ನಿರ್ಮಾಣವಾಗಲು ಸಾಧ್ಯವಿಲ್ಲ ಬದಲಾಗಿ ಸಮಾಜಕ್ಕೆ ನಾವೆನು ನೀಡುತ್ತೆವೆ ಎನ್ನುವುದು ಅತೀ ಮುಖ್ಯವಾಗಿದೆ ಈ ದಿಸೆಯಲ್ಲಿ ಪಂಚವರ್ಣ ಮತ್ತು ಅದರ ಸಹಸಂಸ್ಥೆಗಳ ಕಾರ್ಯ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ.

ಎಂದರಲ್ಲದೆ ಪ್ರಕೃತಿಯನ್ನು ಹಾಳುಗೆಡವ ಮನಸ್ಥಿತಿ ಕ್ರೂರಕರವಾಗಿದೆ.ಪ್ರಸ್ತುತ ವಿದ್ಯಾಮಾನಗಳಲ್ಲಿ ಪ್ರಕೃತಿಯನ್ನು ಪ್ರೀತಿಸದೆ ಅದರ ಉಳಿವಿನ ಬಗ್ಗೆ ಚಿಂತಿಸದೆ ಇದ್ದರೆ ಮುಂದೊಂದು ದಿನ ನಮ್ಮಗೆ ಆಪತ್ತು ತಪ್ಪಿದಲ್ಲ,ಸ್ವಯಂ ಸೇವಕರಾಗಿ ಸಮಾಜದ ಪರಿವರ್ತನೆಯಲ್ಲಿ ಯುವ ಸಮುದಾಯದ ಪಾತ್ರ ಗಣನೀವಾದದ್ದು ಇದಕ್ಕೆ ಪಂಚವರ್ಣ ಸಂಸ್ಥೆಯೇ ಸಾಕ್ಷಿಯಾಗಿದೆ.ಸಂಘಸಂಸ್ಥೆಗಳಿಗಿದ್ದ ಪ್ರಜ್ಞೆ ಸ್ಥಳೀಯಾಡಳಿತಗಳಿಗೂ ಇರಬೇಕು ಎಲ್ಲೆಲ್ಲಿ ತ್ಯಾಜ್ಯ ಎಸೆಯುತ್ತಾರೆ ಅಲ್ಲಿ ಸಿಸಿ ಕ್ಯಾಮರ ಅಳವಡಿಸಿ ಕಸ ಎಸೆಯುವ ಕೈಗೆ ಬಾರಿ ದಂಡ ವಿಧಿಸಿ ಜಾಗೃತಿ ಮೂಡಿಸಬೇಕು, ದೇಶದ ಪ್ರಧಾನಿ ಕನಸಿನಂತೆ ಸ್ವಚ್ಛತೆ ಪ್ರತಿಯೊಬ್ಬನಿಗೂ ಪಾಠವಾಗಬೇಕು ತನ್ಮೂಲಕ ಪರಿಸರ ಪ್ರಜ್ಞೆ ಮೊಳಗಲಿ ನಿಮ್ಮ ಕಾಳಜಿಯ ಈ ಕಾರ್ಯಕ್ರಮಕ್ಕೆ ಮುಂದೊಂದು ದಿನ ಉಡುಪಿ ಜಿಲ್ಲಾಧ್ಯಂತ ಏಕ ಕಾಲದಲ್ಲಿ ಬೃಹತ್ ಆಂದೋಲನದ ಮೂಲಕ ಜನಜಾಗೃತಿ ಮೊಳಗಿಸುವ ಎಂದರು.

ಈ ಸಂದರ್ಭದಲ್ಲಿ ಪರಿಸರ ಜಾಗೃತಿ ಪ್ರತಿಜ್ಞಾ ವಿಧಿಯನ್ನು ಭೋಧಿಸಲಾಯಿತು.

ಪರಿಸರ ಇಲಾಖೆಯ ಉಪ ಅಧಿಕಾರಿ ಪ್ರಮೀಳಾ ಕೋಟದ ಜನತಾ ಫಿಶ್ ಮೀಲ್ ಮ್ಯಾನೇಜರ್ ಶ್ರೀನಿವಾಸ ಕುಂದರ್, ಪಂಚವರ್ಣಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್,ಹಂದಟ್ಟು ಮಹಿಳಾ ಬಳಗದ ಶಕೀಲ ಪೂಜಾರಿ, ಕೋಟತಟ್ಟು ಗ್ರಾಮಪಂಚಾಯತ್ ಸಂಜೀವಿನಿ ಒಕ್ಕೂಟದ ಸುಜಾತ ಉದಯ್ ತಿಂಗಳಾಯ,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ, ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here