ಬೈಂದೂರು :ಗಂಟಿಹೊಳೆ ಗೆಲುವಿಗೆ ಮುಗಿಲು ಮುಟ್ಟಿದ ಹರ್ಷೋದ್ಘಾರ – ಸಹಸ್ರಾರು ಕಾರ್ಯಕರ್ತರಿಂದ ಸ್ವಾಗತ

0
316

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬೈಂದೂರು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಗೋಧೂಳೀ ಮುಹೂರ್ತದಲ್ಲಿ ತನ್ನ ಸ್ವಕ್ಷೇತ್ರವಾದ ಬೈಂದೂರಿಗೆ ಆಗಮಿಸಿದ ಸಂದರ್ಭ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಸುಮಾರು ಸಂಜೆ 7 ಗಂಟೆಗೆ ತೆರೆದ ವಾಹನದಲ್ಲಿ ಉಡುಪಿಯಿಂದ ಗುರುರಾಜ್ ಶೆಟ್ಟಿ ಗೆ ಮಾರ್ಗದುದ್ಧಕ್ಕೂ ಬಿಜೆಪಿ ಕಾರ್ಯಕರ್ತರಿಂದ ಅಭೂತಪೂರ್ವ ಸ್ವಾಗತ ದೊರಕಿತು.

ಬೈಂದೂರು ವಿಧಾನಸಭಾ ಕ್ಷೇತ್ರದ ಗಡಿ ಭಾಗವಾದ ತಲ್ಲೂರಿನಲ್ಲಿ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಹೊತ್ತು ಸಂಚಾರದಲ್ಲಿ ತೊಡಕಾದ ಘಟನೆಯೂ ನಡೆಯಿತು.

LEAVE A REPLY

Please enter your comment!
Please enter your name here