ಮಾಸ್ಟರ್ ಅಥ್ಲೆಟಿಕ್ ಪಟುಗೆ ಶ್ರೀ ಕ್ಷೇತ್ರ ಅಮೃತೇಶ್ವರಿ ದೇವಸ್ಥಾನ ವತಿಯಿಂದ ಗೌರವ

0
486

ಕುಂದಾಪುರ ಮಿರರ್ ಸುದ್ದಿ…

ಕೋಟ: ಇತ್ತೀಚಿಗೆ ಮಲೇಷಿಯಾದಲ್ಲಿ ನಡೆದ ಜೋಹಾರ್ ಸಿಂಗಾಪುರ ಮಾಸ್ಟರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕೋಟದ ದಿನೇಶ್ ಗಾಣಿಗ ಒಂದು ಬೆಳ್ಳಿ, ಕಂಚಿನ ಪದಕ ವಿಜೇತರಾಗಿ ಶುಕ್ರವಾರ ಹುಟ್ಟೂರಿಗೆ ಮರಳಿದರು. ಈ ಹಿನ್ನಲ್ಲೆಯಲ್ಲಿ ಕೋಟ ಅಮೃತೇಶ್ವರಿ ದೇವಸ್ಥಾನದ ವತಿಯಿಂದ ಸ್ವಾಗತಿಸಿ ಶಾಲು ಹೋದಿಸಿ ಗೌರವ ಸಲ್ಲಿಸಿತು.

ಈ ಸಂದರ್ಭದಲ್ಲಿ ದೇವಳದ ಟ್ರಸ್ಟಿ ಚಂದ್ರ ಪೂಜಾರಿ, ಮಾಜಿ ಟ್ರಸ್ಟಿ ಚಂದ್ರ ಆಚಾರ್ಯ, ಪ್ರದಾನ ಅರ್ಚಕ ಪ್ರಕಾಶ್ ಜೋಗಿ, ಪಂಚವರ್ಣ ಸಂಸ್ಥೆಯ ಸ್ಥಾಪಾಕಧ್ಯಕ್ಷ ಸುರೇಶ್ ಗಾಣಿಗ, ಕೋಟ ಹಿ.ಜಾ.ವೇ ಮಾಜಿ ಅಧ್ಯಕ್ಷ ಸುರೇಶ್ ಸಮತಾ, ಕೋಟ ಆಟೋ ಚಾಲಕ ಸಂಘದ ಅಧ್ಯಕ್ಷ ಅಣ್ಣಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here