ಕಾರ್ಕಡ ಗೆಳೆಯರ ಬಳಗಕ್ಕೆ ಅಧ್ಯಕ್ಷರಾಗಿ ಕೆ.ತಾರಾನಾಥ್ ಹೊಳ್ಳ ಪುನರಾಯ್ಕೆ

0
621

ಕುಂದಾಪುರ ಮಿರರ್ ಸುದ್ದಿ…

ಕೋಟ: ಗೆಳೆಯರ ಬಳಗ ಕಾರ್ಕಡ ಇದರ ಅಧ್ಯಕ್ಷರಾಗಿ ಕೆ. ತಾರಾನಾಥ್ ಹೊಳ್ಳ ಪುನರಾಯ್ಕೆಗೊಂಡರು.

ಸಾಲಿಗ್ರಾಮದ ಪರಿಸರದಲ್ಲಿ ನಿರಂತರ 36ವರ್ಷಗಳ ಸಾಮಾಜಿಕ ಚಟುವಟಿಕೆ ನೀಡುತ್ತಿರುವ ಗೆಳೆಯರ ಬಳಗ ಸಂಸ್ಥೆ ಇತ್ತೀಚಿಗೆ ಕಾರ್ಕಡದಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳೀಸಿತು. ಇತರ ಪದಾಧಿಕಾರಿಗಳಾಗಿ ಕಾರ್ಯದರ್ಶಿಯಾಗಿ ನಾಗರಾಜ್ ಉಪಾಧ್ಯ, ಕೋಶಾಧಿಕಾರಿಯಾಗಿ ಕೆ.ಶೀನ, ಉಪಾಧ್ಯಕ್ಷರಾಗಿ ಶಶಿಧರ ಮಯ್ಯ, ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಚಂದ್ರಕಾಂತ್ ನಾಯರಿ, ಕೆ.ರಘು ಭಂಡಾರಿ, ಕೆ ಉದಯ್ ಐತಾಳ್, ಕೆ.ತಮ್ಮಯ್ಯ, ಶ್ರೀಕಾಂತ್ ಐತಾಳ್, ಜಗದೀಶ್ ಆಚಾರ್, ಶ್ರೀಪತಿ ಆಚಾರ್, ರಾಘವೇಂದ್ರ ದೇವಾಡಿಗ ಆಯ್ಕೆಯಾದರು.

LEAVE A REPLY

Please enter your comment!
Please enter your name here