ಕುಂದಾಪುರ :ಕೆ.ಪಾಂಡುರಂಗ ಭಟ್ ಕೋಟೇಶ್ವರ ನಿಧನ

0
644

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಕೆನರಾ ಬ್ಯಾಂಕನ ನಿವ್ರೃತ್ತ ಮೆನೇಜರ್, ಹಿರಿಯ ಸಮಾಜ ಸೇವಕ, ಕೆ.ಪಾಂಡುರಂಗ ಭಟ್ (81) ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಂಗಳವಾರ ಜನವರಿ 2ರಂದು ನಿಧನರಾದರು. ಉತ್ತಮ ಜನಸೇವಕರಾಗಿದ್ದ ಅವರು ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ದಾನಿಯಾಗಿ ಹಲವು ಶಾಲೆಗಳಿಗೆ ಅಗತ್ಯ ಸೌಲಭ್ಯ ಒದಗಿಸುತ್ತಿದ್ದರು. ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದ ಶ್ರೀರಾಮ ಸೇವಾ ಸಂಘದ ಪದಾಧಿಕಾರಿಯಾಗಿ ಸಕ್ರಿಯರಾಗಿದ್ದರು. ಉತ್ತಮ ಕಲಾವಿದರಾಗಿದ್ದ ಇವರು, ಪತ್ನಿ, ಓರ್ವ ಪುತ್ರ , ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here