ಉಡುಪಿ :ಜೇಸಿಐ ಕಲ್ಯಾಣಪುರಕ್ಕೆ ರಾಷ್ಟ್ರೀಯ ಪುರಸ್ಕಾರ

ಕುಂದಾಪುರ ಮಿರರ್ ಸುದ್ದಿ…

ಕೋಟ: ಬೆಂಗಳೂರಿನಲ್ಲಿ ನಡೆದ ಜೇಸಿಐ ಭಾರತದ ರಾಷ್ಟ್ರೀಯ ಸಮ್ಮೇಳನದಲ್ಲಿ 25 ಗಂಟೆಗಳ ನಿರಂತರ ಟ್ರೈನಿಂಗ್ ಮ್ಯಾರಥಾನ್, ಇಂಡಿಯನ್ ಬುಕ್ ಆಫ್ ರೆಕಾರ್ಡ್‍ನಲ್ಲಿ ದಾಖಲೆಯಾದ ತರಬೇತಿ ಕಾರ್ಯಕ್ರಮಕ್ಕೆ ಜೇಸಿಐ ಕಲ್ಯಾಣಪುರಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಈ ಸಂದರ್ಭದಲ್ಲಿ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಕಾರ್ತಿಕೇಯನ್ ಜೇಸಿಐ ಕಲ್ಯಾಣಪುರದ ಅಧ್ಯಕ್ಷೆ ಅನಿತಾ ನರೇಂದ್ರ ಕುಮಾರ್ ಇವರಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವಲಯ15ರ ವಲಯಧ್ಯಕ್ಷ ಪುರುಷೋತ್ತಮ ಶೆಟ್ಟಿ,ಜೇಸಿಐ ಇಂಡಿಯಾದ ನಿರ್ದೇಶಕರಾದ ಅಲನ್ ರೋಹನ್ ವಾಜ್, ಜೇಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ವಲಯ 15ರ 2024ರ ವಲಯಧ್ಯಕ್ಷ ಸೆನೇಟರ್ ಗಿರೀಶ್ ಎಸ್.ಪಿ, ಪೂರ್ವ ವಲಯಧ್ಯಕ್ಷೆ ಸೌಜನ್ಯ ಹೆಗ್ಡೆ,ಪೂರ್ವ ವಲಯ ಉಪಾಧ್ಯಕ್ಷ ಆಶಾ ಅಲನ್ ವಾಜ್, ಪೂರ್ವ ವಲಯ ಉಪಾಧ್ಯಕ್ಷೆ ಸೌಮ್ಯ ರಾಕೇಶ್ , ಪೂರ್ವ ವಲಯ ಉಪಾಧ್ಯಕ್ಷ ಜಬ್ಬಾರ್ ಸಾಹೇಬ್ ತರಬೇತಿಯ ಕಾರ್ಯಕ್ರಮದ ನಿರ್ದೇಶಕ ಚಿತ್ರ ಕುಮಾರ್,ಘಟಕದ ಅಧ್ಯಕ್ಷ ಭಾಗವಹಿಸಿ ಪ್ರಶಸ್ತಿಯನ್ನು ಪಡೆದರು.

Comments

Leave a Reply

Your email address will not be published. Required fields are marked *

More posts

Exit mobile version