ಕೋಟ :ಮಾಜಿ ಸಚಿವ ಕೋಟ ಮಂತ್ರಾಕ್ಷತೆಯಲ್ಲಿ ಭಾಗಿ ಕೋಟತಟ್ಟು ವಿವಿಧ ಭಾಗಗಳಲ್ಲಿ ಶ್ರೀ ರಾಮ ಮಂತ್ರಾಕ್ಷತೆ

0
425

ಕುಂದಾಪುರ ಮಿರರ್ ಸುದ್ದಿ…

ಕೋಟ: ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಕೋಟತಟ್ಟು ಪಡುಕರೆ, ಹಂದಟ್ಟು, ಚೆಚ್ಚಕೆರೆ ಸೇರಿದಂತೆ ವಿವಿಧ ಭಾಗಗಳಲ್ಲಿ ಶ್ರೀರಾಮ ಭಕ್ತರು ಮಂತ್ರಾಕ್ಷತೆಯನ್ನು ನೀಡಿ ಅದರ ಮಹತ್ವವನ್ನು ತಿಳಿಪಡಿಸಿದರು. ಕೋಟ ಗ್ರಾಮಪಂಚಾಯತ್, ಸಾಲಿಗ್ರಾಮ ಪಟ್ಟಣಪಂಚಾಯತ್, ಐರೋಡಿ ಗ್ರಾ.ಪಂ, ಕೋಡಿ ಗ್ರಾಮಪಂಚಾಯತ್ ವ್ಯಾಪ್ತಿ,ವಡ್ಡರ್ಸೆ ಗ್ರಾಮಪಂಚಾಯತ್ ಭಾಗಗಳಲ್ಲಿ ಮನೆ ಮನೆಗೆ ತೆರಳಿ ಮಂತ್ರಾಕ್ಷತೆ ನೀಡಿದರು.

ಕೋಟತಟ್ಟುವಿನಲ್ಲಿ ಮಾಜಿ ಸಚಿವ ಭಾಗಿ
ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಕೋಟತಟ್ಟು ಬಾರಿಕೆರೆ ವ್ಯಾಪ್ತಿಯಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಬಿಳಿ ಪಂಚೆ ಕೇಸರಿ ಶಾಲು ಧರಿಸಿ ಮನೆ ಮನೆಗೆ ತೆರಳಿ ಶ್ರೀ ರಾಮ ಮಂತ್ರಾಕ್ಷತೆ ನೀಡಿ ಅದರ ಮಹತ್ವ ಸಾರಿದರು. ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here