ಬೆಳ್ವೆ :ಪ್ರತಿಯೊಬ್ಬರೂ ದೇಶದ ಅಭಿವೃದ್ಧಿ ಜೊತೆ ಹೆಜ್ಜೆ ಹಾಕಿದರೆ 2047ರಲ್ಲಿ ಭಾರತ ನಂ 1 ಆಗಲಿದೆ : ಶೋಭಾ ಕರಂದ್ಲಾಜೆ

0
332

Video :

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ವಿಕಸಿತ ಭಾರತ ಸಂಕ್ಲಪ ಯಾತ್ರೆ ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮ ಅಲ್ಲ. ಬದಲಾಗಿ ಸ್ವಾತಂತ್ರ್ಯ ಸಿಕ್ಕಿದ ನೂರು ವರ್ಷದೊಳಗೆ ಭಾರತ ನಂ 1 ಆಗಬೇಕಾದರೆ ಯಾವ ರೀತಿಯ ಅಭಿವೃದ್ಧಿಯಲ್ಲಿ ನಾವು ಸಾಗಬೇಕು ಎನ್ನು ಸಂಕಲ್ಪ ಯಾತ್ರೆ. ದೇಶದ ಪ್ರತಿಯೊಬ್ಬರೂ ಹೆಜ್ಜೆ ಹಾಕಿದರೆ ಭಾರತ ವಿಶ್ವದಲ್ಲಿ ನಂಬರ್ 1 ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಸೋಮವಾರ ಬೆಳ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. ದೇಶದ ಪ್ರತಿಯೊಬ್ಬರೂ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕಾಗಿದೆ. ಕೃಷಿಕರು ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸುವ ಕೆಲಸ ಮಾಡಿದರೆ, ಮನೆಯಲ್ಲಿ ಇರುವ ಮಹಿಳೆಯರು ತಮ್ಮ ಮನೆಯ ಮತ್ತು ಕುಟುಂಬದ ಸ್ವಚ್ಛತೆಯ ಬಗ್ಗೆ ನಿಗಾವಹಿಸಬೇಕು ಜೊತೆಗೆ ಸ್ವಂತ ಕಾಲ ಮೇಲೆ ನಿಲ್ಲುವುದನ್ನು ಕಲಿಯಬೇಕು. ದೇಶ ಅಭಿವೃದ್ಧಿಯಾಗಬೇಕಾದರೆ ಮೊದಲು ಮನೆ, ಕುಟುಂಬದ ಸ್ವಾವಲಂಬನೆಯಾಗಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಣಿಪಾಲ ಕೆನರಾ ಬ್ಯಾಂಕಿನ ಮಹಾಪ್ರಬಂಧಕ ಶ್ರೀಪಂಡಿತ್ ಎಂ.ಜಿ., ಸಹಾಯಕ ಪ್ರಬಂಧಕ ಶ್ರೀಜಿತ್ ಕೆ., ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಭಾಶಂಕರ್ ಪುರಾಣಿಕ, ಕೆವಿಕೆ ಬ್ರಹ್ಮಾವರದ ಡಾ. ನವೀನ್ ಕುಮಾರ್, ಉಡುಪಿ ಎನ್.ಐ.ಸಿ.ಯ ಮಂಜುನಾಥ್, ಮಂಗಳೂರು ಆಕಾಶವಾಣಿಯ ಮೋಹಿನಿ, ಎ.ಜಿ, ರಾಜೇಶ್ವರಿ ಮೊದಲಾದವರು ಇದ್ದರು.

LEAVE A REPLY

Please enter your comment!
Please enter your name here