ಬೈಂದೂರು :ರಾಜ್ಯದಲ್ಲಿ ಕುಟುಂಬ ರಾಜಕಾರಣ ಮುಕ್ತ ಮಾಡುವುದೇ ನನ್ನ ಗುರಿ – ಈಶ್ವರಪ್ಪ

0
343

ಕುಂದಾಪುರ ಮಿರರ್ ಸುದ್ದಿ…

ಬೈಂದೂರು: ರಾಜ್ಯದಲ್ಲಿ ಯಡಿಯೂರಪ್ಪನವರ ಕುಟುಂಬ ರಾಜಕಾರಣ ನಡೆಯುತ್ತಿದೆ. ಅವರು ಅವರ ಮಕ್ಕಳು ಮಾತ್ರ ರಾಜಕಾರಣದಲ್ಲಿ ಇರಬೇಕು ಎನ್ನುವ ಇರಾದೆ ನಿಷ್ಠವಂತ ಕಾರ್ಯಕರ್ತರು, ಹಿಂದುತ್ವದ ಪರ ಹೋರಾಟ ಮಾಡುವವರಿಗೆ ನೋವು ತಂದಿದೆ. ರಾಜ್ಯದಲ್ಲಿ ಕುಟುಂಬ ರಾಜಕೀಯದಿಂದ ಕರ್ನಾಟಕ ಬಿಜೆಪಿ ಮುಕ್ತವಾಗಬೇಕು ಆ ಹಿನ್ನಲೆಯಲ್ಲಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದರು ಶಿವಮೊಗ್ಗ ಲೋಕಸಭಾ ಕ್ಷೇತ್ರದದಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಹೇಳಿದರು.

ರಾಷ್ಟ್ರಭಕ್ತರ ಬಳಗ ಬೈಂದೂರು ವತಿಯಿಂದ ಉಪ್ಪುಂದ ಪರಿಚಯ ಸಭಾಂಗಣದಲ್ಲಿ ನಡೆದ ಬೈಂದೂರು ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಹಿಂದುತ್ವದ ಪರವಾಗಿ ಹೋರಾಟ ಮಾಡಿ, ಪಕ್ಷ ಸಂಘಟನೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿದ ನನಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸ್ಥಿತಿ ಬಂದಿದೆ. ಇದರಿಂದ ರಾಜ್ಯದಲ್ಲಿ ಲಕ್ಷಾಂತರ ಮಂದಿ ಕಾರ್ಯಕರ್ತರು ಕೂಡಾ ನೋವು ಅನುಭವಿಸುತ್ತಿದ್ದಾರೆ. ಬೇರೆ ವಿಧಿ ಇಲ್ಲದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಅಭ್ಯರ್ಥಿಗಳ ಘೋಷಣೆಯ ಕೊನೆಯ ತನಕವೂ ಟಿಕೆಟು ನೀಡುವ ಭರವಸೆಯನ್ನು ಸ್ವತಃ ಯಡಿಯೂರಪ್ಪ ಅವರೇ ನೀಡಿದ್ದರು. ಸ್ವತಃ ತಾನೇ ಬಂದು ನಿಮ್ಮ ಮಗನ ಪರವಾಗಿ ಪ್ರಚಾರ ಮಾಡುವುದಾಗಿ ತಿಳಿಸಿದ್ದರು. ನಾನು ಅದನ್ನು ನಂಬಿಕೊಂಡೆ. ಮೋಸದ ರಾಜಕಾರಣ ಮಾಡುತ್ತಿದ್ದಾರೆ. ಈಗ ನನಗೆ ಪ್ರಾಮಾಣಿಕ ಕಾರ್ಯಕರ್ತರೇ ಬೆಂಬಲಕ್ಕೆ ನಿಂತಿದ್ದಾರೆ. ಎಂದರು.
ಕರ್ನಾಟಕದಲ್ಲಿಂದು ಬಿಜೆಪಿಯ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ಇಂಥ ಪರಿಸ್ಥಿತಿ ಬಿಜೆಪಿಗೆ ಬಂದಿರುವುದು ದುರ್ದೈವ. ಬಿಜೆಪಿಯ ಶುದ್ಧೀಕರಣದ ಉದ್ದೇಶದಿಂದಲೇÀ ನಾನು ಸ್ಪರ್ಧೆ ಮಾಡುತ್ತೇನೆ.

ಯಡಿಯೂರಪ್ಪ ಆಪ್ತರಿಗೆ ಕಾರ್ಯಕರ್ತರ ವಿರೋಧ ಇದ್ದರೂ ಕೂಡಾ ಟಿಕೆಟು ಸಿಗುತ್ತದೆ. ಪಕ್ಷಕ್ಕಾಗಿ, ಹಿಂದುತ್ವಕ್ಕಾಗಿ ಹೋರಾಟ ಮಾಡಿದವರನ್ನು ಮೂಲೆಗುಂಪು ಮಾಡಲಾಗುತ್ತದೆ. ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಕೊಡದೆ ಕುಟುಂಬ ರಾಜಕಾರಣವನ್ನು ಮುಂದುವರಿಸಲಾಗುತ್ತಿದೆ. ಈ ಚುನಾವಣೆಯಲ್ಲಿ ಗೆದ್ದು ರಾಜ್ಯದಲ್ಲಿ ಕುಟುಂಭ ರಾಜಕಾರಣವನ್ನು ಮುಕ್ತ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಗೊಳಿಸುತ್ತೇನೆ ಎಂದರು.
ಎಪ್ರಿಲ್ 12ರಂದು ನಾಮಪತ್ರಲ್ಲಿಕೆ ಮಾಡಲಿದ್ದೇನೆ. ಆ ದಿನ 15-20 ಸಾವಿರ ಜನ ರ್ಯಾಲಿಯಲ್ಲಿ ಸೇರುವ ನಿರೀಕ್ಷೆ ಇದೆ ಎಂದರು.

ಕಾರ್ಯಕ್ರಮ ಸಂಚಾಲಕ ಶ್ರೀಧರ ಬಿಜೂರು ಮಾತನಾಡಿ, ಹಿಂದುಳಿದ ವರ್ಗದವರಿಗೆ ಒತ್ತು ನೀಡಿ ಅವರನ್ನು ನಾಯಕರನ್ನಾಗಿಸುವುದು ಯಾರಿಗೂ ಇಷ್ಟವಿಲ್ಲ. ನಾಯಕರ ಜೊತೆ ಗುರುತಿಸಿಕೊಂಡ ನಾಲ್ಕಾರು ಮಂದಿಗಷ್ಟೇ ಅವಕಾಶ ಸಿಗುತ್ತಿದೆ. ಸಾವಿರಾರು ಕೋಟಿ ಅನುದಾನಗಳು ಇವತ್ತು ನೇರ ಎಜೆನ್ಸಿಗಳ ಮೂಲಕ ಹೋಗುತ್ತಿದೆ. ಮೂರು ಚುನಾವಣೆಯಲ್ಲಿ ಬಿಜೆಪಿ ಸಂಸದರನ್ನು ಗೆಲ್ಲಿಸಿದ್ದೇವೆ. ಈ ಬಾರಿ ಮೋದಿ ಪೋಟೋ ಬಿಟ್ಟು ಬರಲಿ ಎಂದು ಸವಾಲು ಹಾಕಿದರು.

ಬಿಜೆಪಿ ಕಾರ್ಯಕರ್ತರ, ಹಿಂದು ಸಂಘಟನೆಗಳ ಸ್ವಾಭಿಮಾ£ಕ್ಕೆ ಧಕ್ಕೆಯಾಗಿದೆ. ಇವತ್ತು ಸಂಸದರ ಗುರುತು ಬೆರಣಿಕೆಯ ಜನರಿಗಷ್ಟೆ ಗೊತ್ತು. ಕಾರ್ಯಕರ್ತರ ಭಾವನೆಗಳಿಗೆ ಬೆಲೆಯೇ ಇಲ್ಲದಂತಾಗಿದೆ. ನೈಜ ಕಾರ್ಯಕರ್ತರ ಭಾವನೆಗಳಿಗೆ ಬೆಲೆ ಸಿಗಬೇಕು, ಹಿಂದುಳಿದ ವರ್ಗಗಳ ಮಕ್ಕಳಿಗೆ ಬೆಳೆಯುವ ಅವಕಾಶ ಸಿಗಬೇಕು ಎಂದರು.

ತಾ.ಪಂ.ಮಾಜಿ ಸದಸ್ಯ ನಾರಾಯಣ ಗುಜ್ಜಾಡಿ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದರು. ಯಶವಂತ ಗಂಗೊಳ್ಳಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸುವರ್ಣ ಪೂಜಾರಿ, ಗಣೇಶ ರಾವ್, ಗೋಪಾಲ ಗಾಣಿಗ, ಮಂಜುನಾಥ್ ರಾವ್, ವಿನಯ ನೈರಿ, ಪ್ರದೀಪ ಮೊದಲಾದವರು ಉಪಸ್ಥಿತರಿದ್ದರು‌

LEAVE A REPLY

Please enter your comment!
Please enter your name here