ಹೊಸಂಗಡಿ :ಸುಂಟರಗಾಳಿಗೆ ಮನೆ ಹಾನಿ: ಪ್ರಾಣಾಪಾಯದಿಂದ ಪಾರು

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಮಂಗಳವಾರ ಸಂಜೆ ಬೀಸಿದ ಸುಂಟರಗಾಳಿಗೆ ಹೊಸಂಗಡಿ ಗ್ರಾಮದ ಪ್ರೇಮ ಆಚಾರಿ ಎಂಬುವರ ವಾಸದ ಮನೆಯ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿದೆ.

ಸಂಜೆ ಸುಮಾರು 4 ಗಂಟೆಗೆ ಇದ್ದಕ್ಕಿದ್ದಂತೆ ಬಿರುಗಾಳಿ ಹಾಗೂ ಸಿಡಿಲಿ ಬಡಿದಿದೆ. ಮೇಲ್ಛಾವಣಿ ಹಾರಿ ಹೋದ ಪರಿಣಾಮ ಸುಮಾರು 50 ಸಾವಿರ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಸುಂಟರಗಾಳಿ ಸಂದರ್ಭ ಮನೆಯಲ್ಲಿದ್ದವರು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Comments

Leave a Reply

Your email address will not be published. Required fields are marked *

More posts

Exit mobile version