ತೆಕ್ಕಟ್ಟೆ :ಧಾರ್ಮಿಕ ಪ್ರವಚನಕ್ಕೂ, ಭಕ್ತಿ ಭಾವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಸಾಮ್ಯತೆ ಇದೆ: ಶ್ರೀ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು

ಕುಂದಾಪುರ ಮಿರರ್ ಸುದ್ದಿ…

ಕೋಟ: ಯಾತ್ರ ಸ್ಥಳಗಳು ಒಂದೊಕ್ಕೊಂದು ವಿಭಿನ್ನವಾಗಿದೆ. ತೀರ್ಥಕ್ಷೇತ್ರದ ಯಾತ್ರೆಯಿಂದ ಪುರಾಣ ಕಥೆಗಳ ಮೌಲ್ಯವನ್ನು ಅರಿಯುವುದಕ್ಕೆ ಸಾಧ್ಯವಾಗುತ್ತದೆ. ಪ್ರಸ್ತುತ ಕಾಲಘಟ್ಟಕ್ಕೆ ಪೂರಕವಾಗಿ ಪುರಾಣ ಕಥೆಗಳು ಹೆಣೆದಿರುತ್ತದೆ. ಈಗಿನ ವಿದ್ಯಾಮಾನಗಳಿಗೂ ಪುರಾಣಗಳಿಗೂ ಹೆಚ್ಚು ಸಂಬಂಧವಿರುವ ಹಲವು ಕಥೆಗಳು ತೀರ್ಥಕ್ಷೇತ್ರದ ಕಥೆಗಳಿಂದ ಲಭ್ಯವಾಗುತ್ತದೆ. ಯಾತ್ರಾ ದಿನದ ಅನುಭವದ ಸವಿಸ್ತಾರವಿರುವ ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೂ ಪುರಾಣ ಕಥನದ ಭಕ್ತಿ ಭಾವಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮವೂ ಹೆಚ್ಚು ಸಾಮ್ಯತೆ ಇದೆ ಎಂದು ಶ್ರೀ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀ ಪಾದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆಯ ಸಂಯೋಜನೆಯಲ್ಲಿ ‘ಸಿನ್ಸ್ 1999 ಶ್ವೇತಯಾನ’ದ 28ನೇಯ ಕಾರ್ಯಕ್ರಮವಾಗಿ ಮೇ 16ರಂದು ಕುಂದಾಪುರ ಹಂಗಳೂರು ಶ್ರೀ ರಾಮಚಂದ್ರ ವರ್ಣರ ಮನೆಯಲ್ಲಿ ವಿಶ್ವವಲ್ಲಭ ತೀರ್ಥ ಶ್ರೀ ಪಾದರ ಪ್ರವಚನ ಹಾಗೂ ಯಶಸ್ವೀ ಕಲಾವೃಂದದ ಯಕ್ಷಗಾನವೈಭವ ಕಾರ್ಯಕ್ರಮದಲ್ಲಿ ಶ್ರೀ ಸ್ವಾಮೀಜಿ ಮಾತನ್ನಾಡಿದರು.

ಉದ್ಯಮಿ ರಾಮಚಂದ್ರ ವರ್ಣ, ಗುರುಗಳಾದ ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ ಯಲ್ಲಾಪುರ, ಸುದೀಪ ಉರಾಳ, ದರ್ಶನ್ ಗೌಡ, ಪಂಚಮಿ ವೈದ್ಯ, ಕಿಶನ್ ಕುಂದಾಪುರ, ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *

More posts

Exit mobile version