ಸಾಸ್ತಾನ ಮೆಸ್ಕಾಂ ಕಛೇರಿಯಲ್ಲಿ ವಿಶ್ವಪರಿಸರ ದಿನಾಚರಣೆ

ಕುಂದಾಪುರ ಮಿರರ್ ಸುದ್ದಿ…

ಕೋಟ: ವಿಶ್ವ ಪರಿಸರದ ದಿನದಂದು ಕೋಟ ಉಪವಿಭಾಗದ ಸಾಸ್ತಾನ ಮೆಸ್ಕಾಂ ಕಛೇರಿಯ ಪರಿಸರದಲ್ಲಿ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.

ಗಿಡವನ್ನು ನೆಟ್ಟು ಮಾತಾಡಿದ ಶಾಖಾಧಿಕಾರಿ ಮಹೇಶ ಅವರು ಗಿಡಗಳನ್ನು ನೆಟ್ಟು ಪರಿಸರವನ್ನು ಕಾಪಾಡಬೇಕು ನಾವು ನೆಡುವ ಒಂದೊಂದು ಗಿಡಗಳು ನಮ್ಮ ಸುತ್ತಮುತ್ತಲಿನ ವಾತಾವರಣವನ್ನೆ ಬದಲಾಯಿಸುತ್ತದೆ. ನಮ್ಮ ಆರೋಗ್ಯವನ್ನು ಕಾಪಾಡಲು ಗಿಡಗಳನ್ನು ನೆಡಬೇಕು ಹಾಗೂ ಹಸಿರು ಮನೆ ಪರಿಣಾಮ ತಗ್ಗಿಸಲು ಹೇರಳವಾಗಿ ಮರ ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೋಟ ಮೆಸ್ಕಾಂ ಪ್ರಾಥಮಿಕ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್ ವಿಠಲವಾಡಿ, ಕಾರ್ಯದರ್ಶಿ ಸುಕುಮಾರ ಶೆಟ್ಟಿ,ಮೆಸ್ಕಾಂನ ಮೆ.ಕ ದರ್ಜೆ 2 ಶಂಕರ್, ರಶೀದ್, ನೌಕರರಾದ ರಾಜು, ಸಂತೋಷ, ಅನಿಲ್,ಪ್ರಕಾಶ ಕರೆಯಪ್ಪ , ರಮೇಶ, ಕುಮಾರ, ಕ್ರಷ್ಣ, ಮಾನ್ಸೂನ್ ಗ್ಯಾಂಗ್ ರಾಘವೇಂದ್ರ, ನಿತೇಶ, ಸುರೇಶ, ದಿನೇಶ್ ಗುತ್ತಿಗೆದಾರಾದ ಈಶ್ವರ ನೈಲಾಡಿ ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *

More posts

Exit mobile version