ತ್ರಾಸಿ: ಶೋ ರೂಮ್ನಲ್ಲಿ ಬೆಂಕಿ ಅವಘಡ – ಕೋಟ್ಯಂತರ ರೂ. ನಷ್ಟ

0
805

Video :

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ತ್ರಾಸಿ ಸಮೀಪದ ಮುಳ್ಳಿಕಟ್ಟೆ ಶೋರೂಮ್ ಒಂದಕ್ಕೆ ತಡರಾತ್ರಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ನಷ್ಟವಾದ ಘಟನೆ ಭಾನುವಾರ ನಡೆದಿದೆ.

ತ್ರಾಸಿ ಸಮೀಪದ ಸುಧಾಕರ್ ಶೆಟ್ಟಿ ಮಾಲಕತ್ವದ ಅಂಬಾ ಟಿವಿ ಹಾಗೂ ಹೋಂ ಅಪ್ಲೈಯನ್ಸಸ್ ಶೋರೂಂ ನಲ್ಲಿ ರಾತ್ರಿ 9:30 ಸುಮಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು ಸಂಪೂರ್ಣ ಅಂಗಡಿ ಸುಟ್ಟು ಭಸ್ಮವಾಗಿದೆ. ಸುಮಾರು ಒಂದು ಕೋಟಿ ರೂಪಾಯಿಗೂ ಮಿಕ್ಕಿ ಸ್ವತ್ತುಗಳು ಸುಟ್ಟು ಹೋಗಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಅಂಗಡಿಯಲ್ಲಿದ್ದ 3 ಲಕ್ಷ ರೂಪಾಯಿ ನಗದು ಸಂಪೂರ್ಣ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ

ಬೆಂಕಿಯ ಚೆನ್ನಾಗಿ ಆಕಾಶಕ್ಕೆ ಚಾಚುತಿದಂತೆ ಸ್ಥಳೀಯರಿಂದ ಮಾಹಿತಿ ಪಡೆದ ಬೈಂದೂರು ಕುಂದಾಪುರ ಹಾಗೂ ಉಡುಪಿ ಅಗ್ನಿಶಾಮಕ ತಂಡ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿತು. ರಾತ್ರಿ ಸುಮಾರು 3:00 ತನಕ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ತಂಡ ಬೆಂಕಿ ನಂದಿಸುವಲ್ಲಿ ಸಫಲವಾಗಿದೆ ಅಗ್ನಿಶಾಮಕ ತಂಡಕ್ಕೆ ಸ್ಥಳೀಯರು ಸಹಕಾರ ನೀಡಿದರು.

ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here