ಕುಂದಾಪುರ :ಉದ್ಯಮಿ ಕಟ್ಕೇರಿ ಜೆ.ಪಿ. ಶೆಟ್ಟಿಯರಿಗೆ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನ

0
178

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : 2023- 24 ಸಾಲಿನಲ್ಲಿ ಸರ್ವಿಸ್ ಆಕ್ಟಿವಿಟಿ ನಿಮಿತ್ತ ಸುಮಾರು 20 ಲಕ್ಷಕ್ಕಿಂತಲೂ ಅಧಿಕ ಮೊತ್ತವನ್ನು ಅಸಹಾಯಕರಿಗೆ ಹಾಗೂ ವಿದ್ಯಾಭ್ಯಾಸಕ್ಕೆ ವಿನಿಯೋಗಿಸಲು ಕಾಳವಾರ ವರದರಾಜ್ ಶೆಟ್ಟಿ ಅವರ ಫೌಂಡೇಶನ್ ನಿಂದ ಲಯನ್ಸ್ ಕ್ಲಬ್ ಕೋಟೇಶ್ವರಕ್ಕೆ ತರಿಸಿ ಕೊಟ್ಟಿರುವ ಲಯನ್ ಜಯಪ್ರಕಾಶ್ ಶೆಟ್ಟಿ ಕಟ್ಕೇರಿ ಇವರನ್ನು ಕೋಟೇಶ್ವರದ ಲಯನ್ಸ್ ಪದಗ್ರಹಣ ಸಮಾರಂಭದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಲ| ಜಯಕರ್ ಶೆಟ್ಟಿ ಇಂದ್ರಾಳಿ ಅವರು ಪದಗ್ರಹಣ ಮಾಡುವುದರ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. 2024 25 ನೇ ಸಾಲಿನ ಅಧ್ಯಕ್ಷರಾಗಿ ಲಯನ್ ಬಿ ಎಸ್ ವಿಶ್ವನಾಥ್ ಕೋಶಾಧಿಕಾರಿಯಾಗಿ ಲಯನ್ ಸೌಮ್ಯ ನಿತ್ಯಾನಂದ ಖಜಾಂಚಿ ಯಾಗಿ ವೆಂಕಟೇಶ್ ಬೆಟ್ಟಿನ್ ಅವರು ಪದಗ್ರಹಣ ಸ್ವೀಕರಿಸಿದರು.

LEAVE A REPLY

Please enter your comment!
Please enter your name here