ಕೋಟ :ಪತ್ರಿಕಾ ದಿನದ ಮಾಸಚಾರಣೆ, ಪತ್ರಕರ್ತ ರಾಜೇಶ್ ಗಾಣಿಗರಿಗೆ ಸನ್ಮಾನ

0
265

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಇಲ್ಲಿನ ರೋಟರಿ ಭವನದಲ್ಲಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮದ ವಾರದ ಸಭೆಯಲ್ಲಿ ನಮ್ಮ ರೋಟರಿ ನಮ್ಮ ಹೆಮ್ಮೆ ಶಿರ್ಷಿಕೆಯಡಿ ಪತ್ರಿಕಾ ದಿನದ ಮಾಸಚಾರಣೆ ಅಂಗವಾಗಿ ಪತ್ರಕರ್ತ ರಾಜೇಶ್ ಗಾಣಿಗರವರನ್ನು ಸನ್ಮಾನಿಸಲಾಯಿತು.

ಪತ್ರಿಕಾ ದಿನದ ಮಹತ್ವದ ಬಗ್ಗೆ ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷ ಡಾ.ಕೃಷ್ಣ ಕಾಂಚನ್ ಮಾತನಾಡಿದರು.

ರೋಟರಿ ಸಂಸ್ಥೆಯ ಸದಸ್ಯ ಮಾಧವ ಪೂಜಾರಿ ಸನ್ಮಾನ ಪತ್ರ ವಾಚಿಸಿದರು. ಸನ್ಮಾನ ಸ್ವೀಕರಿಸಿದ ರಾಜೇಶ್ ಗಾಣಿಗರವರು ಪತ್ರಿಕಾ ರಂಗದ ಪಾದರ್ಪಣೆ ಮತ್ತು ಜವಾಬ್ದಾರಿ ಬಗ್ಗೆ ಮಾತಾಡಿ ರೋಟರಿ ಬಗ್ಗೆ ಇರುವ ಗೌರವ ಪ್ರಸ್ತಾಪಿಸಿದರು. ಕಾರ್ಯದರ್ಶಿ ಚಂದ್ರ ಪೂಜಾರಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ರೋಟರಿ ಎಲ್ಲಾ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here