ನಾಗರಮಠ :ಮರಳುಗಾರಿಕೆ ನಡೆಸದಂತೆ ಶಾಸಕರಿಗೆ ಮನವಿ

0
673

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಬಾರಕೂರು ಗ್ರಾಮಪಂಚಾಯತ್ ವ್ಯಾಪ್ತಿಯ ಹೊಸಾಳ ನಾಗರಮಠ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸದಂತೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಇವರಿಗೆ ಹೊಸಾಳ ಮತ್ತು ನಾಗರಮಠ ಗ್ರಾಮಸ್ಥರು ಮನವಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಾರಕೂರು ಪಂಚಾಯತ್ ಸದಸ್ಯ ಪ್ರವೀಣ್ ನಾಗರಮಠ, ಸ್ಥಳೀಯರಾದ ಶ್ರೀನಿವಾಸ ಹೆಬ್ಬಾರ್, ನಾಗೇಶ್ ನಾಯಕ್, ಕೇಶವ ಕಾಮತ್, ಸುಧೀರ್ ಕಾಮತ್, ಅಶೋಕ್ ಕುಂದರ್, ಬಾಲಕೃಷ್ಣ ಹೆಗ್ಡೆ, ಪ್ರವೀಣ್ ಶೆಟ್ಟಿ ನಾಗರಮಠ, ಅಶೋಕ್ ಅಮೀನ್, ಚಂದ್ರ ಕುಂದರ್, ರಾಘ ಕಾಂಚನ್, ಆಶಾ, ವನಜ, ಅಣ್ಣಪ್ಪ ಕುಂದರ್, ಕೃಷ್ಣ ಎನ್ ಬಂಗೇರ, ಜಲಜ ಮರಕಾಲ್ತಿ, ಸೀತಾ ಪೂಜಾರಿ, ಬೈಕಡ್ತಿ ಮರಕಾಲ್ತಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here