ಪಡುಕೇರಿ ಯುವ ಮಿತ್ರ ವ್ರಂದ ವತಿಯಿಂದ ಕೆಸ್ರ ಗೆದ್ದಿಯಂಗ್ ಒಂದ್ ದಿನ ಕಾರ್ಯಕ್ರಮ

0
371

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕೆಸರು ಗದ್ದೆ ಕ್ರೀಡಾ ಕೂಟದ ಮೂಲಕ ನಮ್ಮ ದೇಹವನ್ನು ಮಣ್ಣಿನ ಜೊತೆಗೆ ಆಟ ಆಡುವ ಮೂಲಕ ನಮ್ಮ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ ಹಾಗೂ ಪರಸ್ಪರ ಸ್ನೇಹದ ವಾತಾವರಣ ಮೂಡುತ್ತೆ ಎಂದು ಒಂಭತ್ತುದಂಡಿಗೆ ಶ್ರೀ ಚಿಕ್ಕಮ್ಮ ದೇವಿ ದೇವಸ್ಥಾನದ ಅಧ್ಯಕ್ಷರಾದ ನಾಗರಾಜ್ ಕಾಮಧೇನು ಹೇಳಿದರು.

ಅವರು ಕುಂದಾಪುರದ ಪಡುಕೇರಿಯ ಯುವ ಮಿತ್ರ ವ್ರಂದ ವತಿಯಿಂದ ನಡೆದ ಕೆಸ್ರ ಗೆದ್ದಿಯಂಗ್ ಒಂದ್ ದಿನ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷರಾದ ಶ್ರೀನಿವಾಸ ಬೀರಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪುರಸಭೆ ಮಾಜಿ ಸದಸ್ಯರಾದ ರಮೇಶ್, ಕುಂದಾಪುರ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ್ ರಾಯಪ್ಪನ ಮಠ, ಮಹಿಳಾ ಘಟಕದ ಅಧ್ಯಕ್ಷೆ ರಾಜೀವಿ, ಸಂಸ್ಥೆ ಕಾರ್ಯದರ್ಶಿ ಮಹೇಶ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರತ್ನಾಕರ ಸ್ವಾಗತಿಸಿದರು, ಗೌರವ ಅಧ್ಯಕ್ಷರಾದ ಅಮರ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಾಪಕರಾದ ಹರ್ಷ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here