ಗಂಗೊಳ್ಳಿ ದೋಣಿ ದುರಂತ: 46ಗಂಟೆಗಳ ಬಳಿಕ ದಡ ಸೇರಿದ ಮೂರನೇ ಮೃತ ದೇಹ

0
1102

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಮಂಗಳವಾರ ಬೆಳಿಗ್ಗೆ ಗಂಗೊಳ್ಳಿಯ ಅಳಿವೆ ಬಾಗಿಲಿನಲ್ಲಿ ನಡೆದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಸಿಪಾಯಿ ಸುರೇಶ್ ಖಾರ್ವಿ ಅವರ ಮೃತ ದೇಹ ಗುರುವಾರ ಬೆಳಿಗ್ಗಿನ ಜಾವ 6 ಗಂಟೆ ಸುಮಾರಿಗೆ ಕೋಡಿ ಸೀವಾಕ್ ಸಮೀಪದ ಕಡಲ ತೀರದಲ್ಲಿ ಪತ್ತೆಯಾಗಿದೆ.

ನಾಪತ್ತೆಯಾದವರ ಶೋಧಕ್ಕಾಗಿ ಅಗ್ನಿಶಾಮಕದಳ, ಕರಾವಳಿ ಪೊಲೀಸ್, ಮುಳುಗು ತಜ್ಞರು ನಿರಂತರ ಪ್ರಯತ್ನ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಶನಿವಾರ ಮೀನುಗಾರಿಕಾ ಸಚಿವ ಮಾಂಕಾಳ್ ವೈದ್ಯ ಗಂಗೊಳ್ಳಿಗೆ ಆಗಮಿಸಿ ಪರಿಹಾರ ಧನದ ಚೆಕ್ ವಿತರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here