ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುಲೇಮಾನ್ ಮಾವಿನ ಕಟ್ಟೆ ಗುಲ್ವಾಡಿ ಅವರಿಗೆ ಸನ್ಮಾನ

0
528

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಜಮೀಯತುಲ್ ಫಲಾಹ್ ಕುಂದಾಪುರ ತಾಲೂಕು ಘಟಕದ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುಲೇಮಾನ್ ಮಾವಿನ ಕಟ್ಟೆ ಗುಲ್ವಾಡಿ ಯವರನ್ನು ಗೌರವಿಸಿ ಸನ್ಮಾನಿಸಲಾಯಿತು,

ಕುಂದಾಪುರ ತಾಲೂಕು ಘಟಕದ ಅಧ್ಯಕ್ಷರಾದ ಅಬು ಮೊಹಮ್ಮದ್ ರವರು ಗೌರವಿಸಿ ಸನ್ಮಾನಿಸಿ ಪ್ರಸ್ತಾವಿಕವಾಗಿ ಮಾತನಾಡಿದ ಅವರು ಸಹೋದರ ಸುಲೇಮಾನ್ ರವರ ಸಾಮಾಜಿಕ ಕಳಕಳಿಯ ಸೇವೆಯನ್ನು ಗುರುತಿಸಿ ಜಿಲ್ಲಾ ಆಡಳಿತ ನೀಡಿರುವ ಈ ಪ್ರಶಸ್ತಿ ಹೆಮ್ಮೆಯ ವಿಚಾರ. ಸುಲೇಮಾನ್ ರವರಿಂದ ಈ ಸಮಾಜಕ್ಕೆ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು.

ಹಿರಿಯರು ಮಾಜಿ ಅಧ್ಯಕ್ಷರಾದ ಶೇಕ್ ಅಬು ಮಹಮ್ಮದ್ ಜಾಮಿಯಾ ಮಸೀದಿಯ ಕಾರ್ಯದರ್ಶಿ ತಬ್ರೇಜ್, ಕುಂದಾಪುರ ತಾಲೂಕು ಘಟಕದ ಪದಾಧಿಕಾರಿಗಳಾದ ಮೊಹಮ್ಮದಾಲಿ ಕೋಡಿ ಶಹಬಾನ್ ಹಂಗಳೂರು , ಕಾರ್ಯದರ್ಶಿ ಅಬ್ದುಲ್ ಸಲಾಂ ಚಿತ್ತೂರು, ಫಝಲ್ ಮೌಲಾನ ಕಂಡ್ಲೂರು, ಅಯೂಬ್ ಮೌಲಾನ ಕುಂದಾಪುರ, ಖತೀಬ್ ಅಶ್ಪಾಕ್, ರಜಾಕ್ ಬಿಜಾಡಿ, ರಿಯಾಜ್ ಕೋಡಿ , ಜಮಾಲ್ ಗುಲ್ವಾಡಿ ಅಲ್ಫಾಜ್, ಅಶ್ಫಾಕ್ ಮೂಡುಗೋಪಾಡಿ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಚಿತ್ತೂರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here