ಒಂದು ರಹಸ್ಯ ಕಥೆ ಹೇಳಲು ಹೊರಟ “ಸಿಂಹಪುರಿಯ ಸಿಂಹ” ಚಿತ್ರದ ಟೀಸರ್ … ಟ್ರೇಲರ್ ಹಾಡುಗಳು ರಿಲೀಸ್

– ರಾಘವೇಂದ್ರ ಅಡಿಗ ಎಚ್ಚೆನ್.

ಬೆಂಗಳೂರು :ಇತ್ತೀಚಿಗೆ ಹೊಸಬರ ಚಿತ್ರಗಳು ಸಾಕಷ್ಟು ಸದ್ದು ಮಾಡುತ್ತಿದ್ದು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಮೈಲುಗಲ್ಲನ್ನು ಸೃಷ್ಟಿಸುತ್ತಿದೆ ಅದೇ ರೀತಿ ಒಂದು ರಹಸ್ಯ ಕಥೆಯೊಂದಿಗೆ ಬಿಡುಗಡೆ ಸಜ್ಜಾಗಿದೆ ಟೀಸರ್ ಹಾಗೂ ಒಂದು ಸಾಂಗ್ ಅನ್ನು ಬಿಡುಗಡೆ ಮಾಡಿ ಕುತೂಹಲ ಮೂಡಿಸಿದ ಚಿತ್ರ “ಸಿಂಹಪುರಿಯ ಸಿಂಹ “ ಒಂದು ರಹಸ್ಯ ಕಥೆಯೊಂದಿಗೆ ಬಿಡುಗಡೆ ಸಜ್ಜಾಗಿದೆ ಸಿಂಹಪುರಿಯ ಚಿತ್ರತಂಡ .ಚಿತ್ರದ ನಾಯಕ ನಟರಾಗಿ ಕೆ ವೈ ಮೂರ್ತಿಯವರು ಅಭಿನಯಿಸಿದ್ದು, ನಾಯಕಿಯಾಗಿ ಸೌಜನ್ಯ ಅಭಿನಯಿಸಿದ್ದಾರೆ ಇನ್ನ ಚಿತ್ರದ ವಿಲನ್ಗಳಾಗಿ ಸುಧೀನ್ ಕುಮ್ಟ & ನಿಲೇಶ್ ಗೌಡ ಅಭಿನಯಿಸಿದ್ದು. ಸಹಕಲಾವಿದರಾಗಿ ಶಂಕರ್ ಭಟ್, ಉಮೇಶ್, ಬ್ಯಾಂಕ್ ಜನಾರ್ಧನ್, ಜೂನಿಯರ್ ದ್ವಾರಕೀಶ್ ,ಪದ್ಮ ವಸಂತಿ, ರೇಖಾದಾಸ್, ಪ್ರಸನ್ನ ಹಾಗೂ ಮುತ್ತುರಾಜ್ ಇನ್ನು ಹಲವು ಕಲಾವಿದರು ಅಭಿನಯಿಸಿದ್ದಾರೆ.
ಸಿಂಹಪುರಿಯ ಚಿತ್ರದ ,ಕಥೆಚಿತ್ರಕಥೆ ,ನಿರ್ದೇಶನ ,ನಿರ್ಮಾಪಕರು ಕೆ ವೈ ಮೂರ್ತಿಯವರು ಮಾಡಿದ್ದು. ಛಾಯಾಗ್ರಾಹಣ ಗುರುದತ್ ಮುಸುರಿ ,ಮನೋಹರ್, ಸಿ ಎಸ್ ಸತೀಶ್ ಸಂಗೀತ ಕೃಪಾಕರ್ ,ಸಂಕಲನ ಅರುಣ್ ಬೆಂಗಳೂರು ಮೂವೀಸ್ ಸಾಹಸ ದೃಶ್ಯ ಅಲ್ಟಿಮೇಟ್ ಶಿವು ,ಜಾನಿ ಮಾಸ್ಟರ್ ಸಂಭಾಷಣೆ ಸುದರ್ಶನ್ ಇನ್ನು ಈ ಚಿತ್ರದಲ್ಲಿ ಸಾಂಗುಗಳು ಇರಲಿದ್ದು .ಸಂಗೀತ ಗಾಯಕರು ರಾಜೇಶ್ ಕೃಷ್ಣನ್, ಹೇಮಂತ್, ಅನುರಾಧ ಭಟ್, ಪ್ರಿಯಾ ಯಾದವ್, ಸ್ನೇಹ ಪ್ರಿಯ ನಾಗರಾಜ್ , ಹಾಗೂ ನೃತ್ಯ ಸಂಯೋಜಕರಾಗಿ ( ಸಂಧನ್ ರಾಜ್ ) ರಾಜದೇವ್ ರವರು ಕಾರ್ಯನಿರ್ವಹಿಸಿದ್ದಾರೆ ‘ಚಿತ್ರ ಇದೆ ಏಪ್ರಿಲ್ ತಿಂಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Comments

Leave a Reply

Your email address will not be published. Required fields are marked *

More posts

Exit mobile version