ಕುಂದಾಪುರ :ಟ್ರಕ್ಕಿಂಗ್ ಗೆ ತೆರಳಿದ ಮಯೂರ ಮೆಡಿಕಲ್ ಮಾಲಕಿ ಶುಭಶ್ರೀ ದುರಂತ ಅಂತ್ಯ!

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ನಗರದ ಮುಖ್ಯ ರಸ್ತೆಯಲ್ಲಿರುವ ಮಯೂರ ಮೆಡಿಕಲ್ಸ್ ನ ಮಾಲಕಿ ಶುಭಶ್ರೀ ಕಾರಂತ್ (53) ದುರಂತ ಅಂತ್ಯ ಕಂಡಿದ್ದಾರೆ.

8-10 ಸ್ನೇಹಿತರ ತಂಡದೊಂದಿಗೆ ಹೊಸಂಗಡಿಯ ಭಾಗಿಮನೆ ಬಳಿ ಇರುವ ಮೆಟ್ಕಲ್ ಗುಡ್ಡಕ್ಕೆ ಟ್ರಕ್ಕಿಂಗ್ ತೆರಳಿದ ಇವರು ಆಕಸ್ಮಿಕವಾಗಿ ನದಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆನ್ನಲಾಗಿದೆ. ಮೃತದೇಹವನ್ನು‌ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇವರ ಪುತ್ರ ಅಮೇರಿಕಾದಲ್ಲಿದ್ದು ಇದೀಗ ಮದ್ಯಪ್ರಾಚ್ಯದೇಶಗಳಲ್ಲಿ ಯುದ್ಧದ ಕಾರ್ಮೋಡ ಕವಿದಿರುವುದರಿಂದ ಅವನ ಆಗಮನದ ಬಗ್ಗೆ ಖಚಿತ ವಾಗಿಲ್ಲ ಎನ್ನಲಾಗಿದೆ.

ಅಮಾಸೆಬೈಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *

More posts

Exit mobile version