ಕೋಟ – ಶ್ರೀ ಕಲ್ಲಟ್ಟು ಶಿವರಾತ್ರಿ ಉತ್ಸವ,ಮುಷ್ಟಿ ಕಾಣಿಕೆ ಸಮರ್ಪಣೆ

0
451

ಕುಂದಾಪುರ ಮಿರರ್ ಸುದ್ದಿ…

ಕೋಟ:  ಶ್ರೀ ಕ್ಷೇತ್ರ ಕಲ್ಲಟ್ಟು ಮಹಾಲಿಂಗೇಶ್ವರ ದೇವಸ್ಥಾನ ಹರ್ತಟ್ಟು ಇಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ವಿಶ್ವಕರ್ಮ ಕಲಾವೃಂದ ಸಾಲಿಗ್ರಾಮ,ಹರಿಗುರು ಸೇವಾ ಭಜನಾ ಮಂಡಳಿ ಕೋಟ ಇವರಿಂದ ಭಜನೆ,ರಂಗಪೂಜೆ,ಮಹಾಪೂಜೆ ,ಮುಷ್ಠಿ ಕಾಣಿಕೆ,ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.

ದೇವಳದ ಅರ್ಚಕ ಸುಧೀರ್ ಐತಾಳ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುರೇಶ್ ಗಾಣಿಗ,ಕಾರ್ಯದರ್ಶಿ ಹರೀಷ್ ದೇವಾಡಿಗ,ಉಪಾಧ್ಯಕ್ಷರಾದ ಸಿದ್ಧ ದೇವಾಡಿಗ,ಗಿರೀಶ್ ದೇವಾಡಿಗ,ಚಂದ್ರ ನಾಯ್ಕ್ ಹಾಡಿಕೆರೆ, ಕೋಶಾಧಿಕಾರಿ ಶ್ರೀಕಾಂತ್ ಶೆಣೈ,ಕಲ್ಲಟ್ಟು ಮಹಾಲಿಂಗೇಶ್ವರ ಸೇವಾ ಸಮಿತಿ ಕೋಶಾಧಿಕಾರಿ ಪ್ರದೀಪ್ ದೇವಾಡಿಗ,ಸದಸ್ಯರಾದ ಪ್ರಶಾಂತ್ ದೇವಾಡಿಗ,ರಮೇಶ್ ದೇವಾಡಿಗ,ಸತೀಶ್ ದೇವಾಡಿಗ, ಮತ್ತಿತರರು ಉಪಸ್ಥಿತರಿದ್ದರು.

ಕಲ್ಲಟ್ಟು ಮಹಾಲಿಂಗೇಶ್ವರ ಸೇವಾ ಸಮಿತಿ ಇವರಿಂದ 18ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ನಿಲಾವರ ಮಹಿಷಮರ್ದಿನಿ ಯಕ್ಷಗಾನ ಮಂಡಳಿಯಿಂದ ನಿಲಾವರ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು.

LEAVE A REPLY

Please enter your comment!
Please enter your name here