ವಿಕಾಸ್ ಬೈಕ್ ಯಾತ್ರೆ ಹಾಸ್ಯಸ್ಪದ :ಕುಂದಾಪುರ ಬ್ಲಾಕ್ ಕಾಂಗ್ರೆಸ್

0
639

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಪ್ರದಾನಿ ನರೇಂದ್ರ ಮೋದಿಯವರ ಸರ್ಕಾರದ 8 ವರ್ಷ ಆಡಳಿತವನ್ನು ಪೂರೈಸಿದ ಸಂದರ್ಭದಲ್ಲಿ ವಿಕಾಸ್ ತೀರ್ಥ ಬೈಕ್ ಯಾತ್ರೆ ಆಯೋಜನೆ ಹಾಸ್ಯಾಸ್ಪದ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.

ಕಳೆದ 8ವರ್ಷಗಳಿಂದ ಪೆಟ್ರೋಲ್, ಡಿಸೇಲ್, ಗ್ಯಾಸನಂತಹ ದಿನಬಳಕೆ ಆಹಾರ ವಸ್ತುಗಳ ಬೆಲೆ ಗಗನಕ್ಕೆರಿದೆ. ಇದರಿಂದ ಬಡವರು ಮತ್ತು ಮಧ್ಯಮ ವರ್ಗದವರು ತೀವ್ರ ನೊಂದಿದಾರೆ. ಕಟ್ಟಡ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ.

ಕೇಂದ್ರದ ಬಿಜೆಪಿ ಸರಕಾರ ಮತ್ತು ಪಕ್ಷ ತನ್ನ ವೈಫಲ್ಯವನ್ನು ಮುಚ್ಚಿಡಲು ಕೋಮುಗಲಭೆಯಂತಹ ಸೂಕ್ಷ್ಮ ವಿಚಾರಗಳನ್ನು ಸೃಷ್ಟಿಸಿ ಜನರ ಶಾಂತಿ ಸಾಹಬಾಳ್ವೆ ಮತ್ತು ನೆಮ್ಮದಿಯನ್ನು ಕೆಡಿಸುತ್ತಿಸುತ್ತಿದೆ .

ದೇಶದ ಪ್ರಧಾನಿಯಾದವರು ಪಾಲಿಸಬೇಕಾದ ರಾಜಧರ್ಮ ನರೇಂದ್ರ ಮೋಧಿಯಿಂದ ಪಾಲನೆಯಾಗುತ್ತಿಲ್ಲ. ಸಾಂವಿಧಾನಿಕ ಹುದ್ದೆಗಳನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಬೆದರಿಸಲಾಗುತ್ತಿದೆ.

ದೇಶ ಕಳೆದ 8 ವರ್ಷದಿಂದ 30 ವರ್ಷ ಹಿಂದೆ ತಳ್ಳಲ್ಪಟ್ಟಿದೆ. ಈ ವಿಕಾಸ ಬೈಕ್ ಯಾತ್ರೆ ಯಾವ ಉದ್ದೇಶಕ್ಕೆ ನೆಡೆಸಲಾಗುತ್ತಿದೆ ಎಂದು ಜನರಿಗೆ ತಿಳಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here