ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಟೋರಿಕ್ಷಾ, ಟ್ಯಾಕ್ಸಿ ಹಾಗೂ ಮೆಟಾಡೋರ್ ಚಾಲಕರ ಸಂಘ (ರಿ.)–INTUC ವತಿಯಿಂದ ಇಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ದೇಶದ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆದೂರು ಸದಾನಂದ ಶೆಟ್ಟಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಾತ್ರ ಮತ್ತು ಸಂವಿಧಾನದ ಮೂಲಕ ಶೋಷಿತರಿಗೆ ನೀಡಿದ ಸ್ವಾತಂತ್ರ್ಯ ದ ಕುರಿತು ಮಾತನಾಡಿದರು.
ಸಭೆಯಲ್ಲಿ INTUC ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ಕೆಪಿಸಿಸಿ ಸೋಶಿಯಲ್ ಮೀಡಿಯಾ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಶೇರೆಗಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಜಿತ್ ಪೂಜಾರಿ ,ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೋ, ಸೋಶಿಯಲ್ ಮೀಡಿಯಾ ಜಿಲ್ಲಾ ಅಧ್ಯಕ್ಷ ರೋಷನ್ ಶೆಟ್ಟಿ, ರೂಪಂ ರಾಧಾಕೃಷ್ಣ, ವಿ. ಗಣೇಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ದೇವಕಿ ಸಣ್ಣಯ್ಯ, ಆಶಾ ಕರ್ವಾಲೋ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ರೇವತಿ ಸಂಪತ್ ಶೆಟ್ಟಿ, ಮಾಜಿ ಪುರಸಭಾ ಸದಸ್ಯೆ ಪ್ರಭಾವತಿ ಶೆಟ್ಟಿ, ಮಾಜಿ ತಾಪಂ ಸದಸ್ಯೆ ಜಾನಕಿ ಬಿಲ್ಲವ, ಶ್ರೀಧರ್ ಶೇರಿಗಾರ್ , ಬಸವ ಪೂಜಾರಿ, ಜ್ಯೋತಿ ನಾಯ್ಕ್, ಡೆಫೋಡೆಲ್ ಕ್ರಾಸ್ಟೋ, ವಿಠಲ್ ಕಾಂಚನ್, ಅಶೋಕ್ ಸುವರ್ಣ, ವಿವೇಕ್ ಹೊನ್ನನಕೇರಿ, ನಾಗರಾಜ ನಾಯ್ಕ್, ರೇಣುಕಾ ಎಂ , ರಮೇಶ್ , ಜಾನ್ ಡಿಸೋಜ , ವೇಲಾ ಬ್ರಗಾಂಜ , ರಿಯಾಜ್ ಕೋಡಿ, ಅಬು ಮಹಮ್ಮದ್, ಆಲ್ವಿನ್ ಅಲ್ಮೀಡಾ, ಅರುಣ್ ಪಟೇಲ್, ಸದಾನಂದ ಖಾರ್ವಿ, ಕೇಶವ ಭಟ್, ಶಶಿರಾಜ್ ಪೂಜಾರಿ, ಶಶಿ ಕೋಟೆ , ಅಲ್ಫಾಜ್, ಕ್ಲಿಫರ್ಡ್ ಡಿಸಿಲ್ವಾ , ಮಧುಕರ ,ಎಡಾಲ್ಫ್ ಡಿಕೋಸ್ಟ , ವೇಣುಗೋಪಾಲ್ ಮತ್ತಿತರ ನಾಯಕರು ಉಪಸ್ಥಿತರಿದ್ದರು.
INTUC ಉಪಾಧ್ಯಕ್ಷ ಲಾಡು ಆನಂದ ಪೂಜಾರಿ, ಕಾರ್ಯದರ್ಶಿ ಮಾಣಿ ಉದಯ ಪೂಜಾರಿ ಸೇರಿದಂತೆ ಮುಖಂಡರಾದ ವಕ್ವಾಡಿ ಬಸವ ಪೂಜಾರಿ, ಜೇಮ್ಸ್ ರೆಬೆಲ್ಲೋ ಹೆಮ್ಮಾಡಿ, ಭಾಸ್ಕರ್ ಶೇರೆಗಾರ ಕಂಡ್ಲೂರು, ವಿಜಯ ಪೂಜಾರಿ ತಲ್ಲೂರು ಹಾಗೂ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
