ಕಾರ್ತಟ್ಟು-ಶ್ರೀ ಅಘೋರೇಶ್ವರ ಕಲಾರಂಗದ ವತಿಯಿಂದ ವನಮಹೋತ್ಸವ ಆಚರಣೆ

0
335

ಕುಂದಾಪುರ ಮಿರರ್ ಸುದ್ದಿ…

ಕೋಟ: ಶ್ರೀ ಅಘೋರೇಶ್ವರ ಕಲಾರಂಗ ಕಾರ್ತಟ್ಟು ವತಿಯಿಂದ ವನಮಹೋತ್ಸವ ಕಾರ್ಯಕ್ರಮವನ್ನು ಗೀತಾನಂದ ಪೌಂಡೇಶನ್ ವತಿಯಿಂದ ನೀಡಲ್ಪಟ್ಟ ಗಿಡವನ್ನು ಸ್ಥಳೀಯ ಪರಿಸರದಲ್ಲಿ ನೆಡುವುದರ ಮೂಲಕ ಚರಿಸಲಾಯಿತು.

ಈ ಸಂದರ್ಭದಲ್ಲಿ ಕಲಾರಂಗದ ಗೌರಾವಾಧ್ಯಕ್ಷರಾಗಿದ್ದ ದಿವಂಗತ ನಾರಾಯಣ ನಾಯರಿ ಯವರಿಗೆ ನುಡಿನಮನ ಸಲ್ಲಿಸಲಾಗಿ ಅವರ ಸ್ಮರಣಾರ್ಥ ಗಿಡವನ್ನು ಸ್ಥಳೀಯರಿಗೆ ನೀಡಲಾಯಿತು.

ಕಲಾರಂಗದ ಮಾಜಿ ಅಧ್ಯಕ್ಷ ರಾಘವೇಂದ್ರ ನಾಯರಿ, ಸ್ಥಾಪಕಾಧ್ಯಕ್ಷ ಉಮೇಶ್ ನಾಯರಿ, ಬ್ರಹ್ಮಾವರ ಅಯ್ಯಪ್ಪ ಸೇವ ಸಮಿತಿಯ ಕಾರ್ಯದರ್ಶಿ ವಿಜಯ ನಾಯರಿ, ಕಲಾರಂಗದ ಅಧ್ಯಕ್ಷ ರಾಧಾಕೃಷ್ಣ ಬ್ರಹ್ಮಾವರ ,ಕಾರ್ಯದರ್ಶಿ ವಿಶ್ವನಾಥ ಗಾಣಿಗ ಬೆಟ್ಲಕ್ಕಿ.ಕ್ರೀಡಾ ಕಾರ್ಯದರ್ಶಿ ರಾಘವೇಂದ್ರ ಗಾಣಿಗ,ಹಿರಿಯರಾದ ನಿವೃತ್ತ ಶಿಕ್ಷಕ ರಾಮಚಂದ್ರ ನಾಯರಿ,ನಿವೃತ್ತ ಪಿಡಬ್ಲ್ಯುಡಿ ಇಂಜಿನಿಯರ್ ಮಂಜುನಾಥ ನಾಯರಿ ನಿತ್ಯಾನಂದ ನಾಯರಿ, ಶ್ಯಾಮ ಸುಂದರ್ ನಾಯರಿ ರಾಮ ನಾಯರಿ ವೆಂಕಟೇಶ್ ಕೆ.ಹಾಗೂ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here