Category: ಸುದ್ದಿ

  • ಪಾಂಡೇಶ್ವರ – ಗ್ರಾಮದ ಅಭಿವೃದ್ಧಿಯಲ್ಲಿ ಸ್ಥಳೀಯಾಡಳಿತದ ಪಾತ್ರ ಗಣನೀಯವಾದದ್ದು- ಕೆ.ಜಯಪ್ರಕಾಶ್ ಹೆಗ್ಡೆ

    ಪಾಂಡೇಶ್ವರ – ಗ್ರಾಮದ ಅಭಿವೃದ್ಧಿಯಲ್ಲಿ ಸ್ಥಳೀಯಾಡಳಿತದ ಪಾತ್ರ ಗಣನೀಯವಾದದ್ದು- ಕೆ.ಜಯಪ್ರಕಾಶ್ ಹೆಗ್ಡೆ

    ಪಾಂಡೇಶ್ವರ ಗ್ರಾಮಪಂಚಾಯತ್ ನೂತನ ಕಟ್ಟಡ ಲೋಕಾರ್ಪಣೆ

    Video

    ಕುಂದಾಪುರ ಮಿರರ್ ಸುದ್ದಿ…


    ಕೋಟ: ಗ್ರಾಮದ ಅಭಿವೃದ್ಧಿಯಲ್ಲಿ ಸ್ಥಳೀಯಾಡಳಿತ ಪಾತ್ರ ಬಹು ಮುಖ್ಯವಾದದ್ದು ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಪ್ರಶಂಸನೀಯ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

    ಪಾಂಡೇಶ್ವರ ಗ್ರಾಮಪಂಚಾಯತ್ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿ ಗ್ರಾಮ ಸರಕಾರ ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಸ್ಪಂದಿಸಿ ಆ ಕಾರ್ಯಗಳು ಶೀಘ್ರಗತಿಯಲ್ಲಿ ನೆರವೆರುವ ಹಾಗೇ ನೋಡಿಕೊಳ್ಳಬೇಕು, ಪಾಂಡೇಶ್ವರ ಗ್ರಾಮಪಂಚಾಯತ್ ತನ್ನ ವ್ಯಾಪ್ತಿಯ ಚೌಕಟ್ಟನ್ನು ಮೀರಿ ಯಶಸ್ಸು ಸಾಧಿಸಿದೆ. ಇದಕ್ಕೆ ಪ್ರತಿಯೊಬ್ಬರ ಸೇವೆ ಅತ್ಯಮೂಲ್ಯವಾದದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ದೀಪ ಪ್ರಜ್ವಲಿಸಿ ಸರಕಾರದ ಸವಲತ್ತುಗಳನ್ನು ಸಾಂಕೇತಿಕವಾಗಿ ವಿತರಿಸಿದರು.

    ಇದೇ ವೇಳೆ ಮಾಜಿ ಅಧ್ಯಕ್ಷರಾದ ಜಿ.ವಿಠ್ಠಲ ಪೂಜಾರಿ, ಸುಶೀಲ ಪೂಜಾರಿ, ರೋಷನಿ ಒಲಿವೇರ, ಬೇಬಿ,ಲೀಲಾವತಿ ಗಂಗಾಧರ್, ಗೋವಿಂದ ಪೂಜಾರಿ, ಪ್ರಸ್ತುತ ಅಧ್ಯಕ್ಷೆ ಕಲ್ಪನಾ ದಿನಕರ್ ಹಾಗೂ ಮಾಜಿ ಉಪಾಧ್ಯಕ್ಷರಾದ ನಾಗಮ್ಮ, ಕಮಲಾಕ್ಷಿ ಹಂದೆ, ಪ್ರಶಾಂತ್ ಶೆಟ್ಟಿ, ಪ್ರೇಮ ಆರ್ ಆಚಾರ್, ಪ್ರಸ್ತುತ ಉಪಾಧ್ಯಕ್ಷ ಸ್ವಿಲ್ವಸ್ಟಾರ್ ಡಿಸೋಜ ಇವರುಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

    ಗ್ರಾಮಪಂಚಾಯತ್ ಕಟ್ಟಡ ಇಂಟಿರಿಯರ್ ಕಾಮಗಾರಿಗೆ ಸಹಾಯಧನ ನೀಡಿದ ಉದ್ಯಮಿ ಬಿ.ಎನ್ ಭಟ್ ಹಾಗೂ ಸಹಕರಿಸಿದ ಅಲ್ವಿನ್ ಆಂದ್ರಾದೆ ಇವರನ್ನು ಗೌರವಿಸಲಾಯಿತು.

    ಮುಖ್ಯ ಅಭ್ಯಾಗತರಾಗಿ ಕೋಟ ಅಮೃತೇಶ್ವರಿ ದೇವಸ್ಥಾನದ ಅಧ್ಯಕ್ಷ ಆನಂದ್ ಸಿ ಕುಂದರ್ , ಕುಂದಾಪುರ ತಹಶಿಲ್ದಾರ್ ಶೋಭಾಲಕ್ಷ್ಮೀ, ಬ್ರಹ್ಮಾವರ ತಾ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್ .ವಿ.ಇಬ್ರಾಹಿಂಪುರ, ಪಂಚಾಯತ್ ಸದಸ್ಯರು, ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೋಲಾಕ್ಷಿ ಪ್ರಾಸ್ತಾವನೆ ಸಲ್ಲಿಸಿದರು. ಗ್ರಾಮಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸ್ಥಳೀಯರಾದ ಶ್ರೀಧರ ಪಿ.ಎಸ್, ಅಲ್ವಿನ್ ಆಂದ್ರಾದೆ ನಿರೂಪಿಸಿದರು. ಪಂಚಾಯತ್ ಸದಸ್ಯ ಪ್ರತಾಪ್ ಶೆಟ್ಟಿ ಸಾಸ್ತಾನ ಧನ್ಯವಾದಗೈದರು.

    ಪಾಂಡೇಶ್ವರ ಗ್ರಾಮಪಂಚಾಯತ್ ನೂತನ ಕಟ್ಟಡ ಲೋಕಾರ್ಪಣಾ ಸಮಾರಂಭದಲ್ಲಿ ಕೆ.ಜಯಪ್ರಕಾಶ್ ಹೆಗ್ಡೆಯವರನ್ನು ಸನ್ಮಾನಿಸಲಾಯಿತು. ಶಾಸಕ ಕಿರಣ್ ಕುಮಾರ್ ಕೊಡ್ಗಿ , ಗ್ರಾಮಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ್, ಕೋಟ ಅಮೃತೇಶ್ವರಿ ದೇವಸ್ಥಾನದ ಅಧ್ಯಕ್ಷ ಆನಂದ್ ಸಿ ಕುಂದರ್ ಮತ್ತಿತರರು ಇದ್ದರು.

     

  • ದೇಶ ಮತ್ತೊಮ್ಮೆ ಅಖಂಡತೆಯತ್ತ ದಾಪುಗಾಲು ಇಡುತ್ತಿದೆ – ಹಾರಿಕಾ ಮಂಜುನಾಥ

    ದೇಶ ಮತ್ತೊಮ್ಮೆ ಅಖಂಡತೆಯತ್ತ ದಾಪುಗಾಲು ಇಡುತ್ತಿದೆ – ಹಾರಿಕಾ ಮಂಜುನಾಥ

    ಕೋಟ ಹಿಂದೂ ಜಾಗರಣಾ ವೇದಿಕೆಯ ಆಶ್ರಯಲ್ಲಿ ಪಂಜಿನ ಮೆರವಣಿಗೆ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಹಿಂದೂ ಜಾಗರಣಾ ವೇದಿಕೆ ಕೋಟ ಇವರ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾನುವಾರ ಕೋಟ ಹಳೆ ಸಂತೆ ಮಾರುಕಟ್ಟೆ ಪರಿಸರದಲ್ಲಿ ನಡೆಯಿತು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಾಗ್ಮಿ ಬೆಂಗಳೂರಿನ ಹಾರಿಕಾ ಮಂಜುನಾಥ್ ಸ್ವಾತಂತ್ರ್ಯ ಪೂರ್ವದಲ್ಲೆ ಅಖಂಡವಾಗಿದ್ದ ಈ ಭರತಖಂಡವನ್ನು ಮೂರು ತುಂಡುಗಳನ್ನಾಗಿಸಿದ ಬ್ರಿಟಿಷ್‍ರ ಮಧ್ಯೆ ಈ ದೇಶದ ಉನ್ನದ ಹದ್ದೆ ಅಲಂಕರಿಸಿದ ನಮ್ಮ ನಾಯಕರುಗಳು ದೇಶದ ಹಿತ ಕಾಯುವಲ್ಲಿ ಎಡೆವಿದರು. ಅದು ನಿರಂತ 75 ವರ್ಷಗಳ ಕಾಲ ಭಯೋತ್ಪಾದಕ ರೀತಿಯಲ್ಲಿ ಅನುಭವುಸುಂತ್ತಾಗಿದೆ. ಮುಸ್ಲಿಂ ಸಮಯದಾಯಕ್ಕೆ ಎರಡು ರಾಷ್ಟ್ರಗಳನ್ನಿತ್ತು ಹಿಂದೂಗಳಿಗೆ ಹಿಂದೂಸ್ಥಾನ ನೀಡದೆ ನರಕದಲ್ಲಿರುವಂತೆ ಮಾಡಿದರು. ಈ ದೇಶಕ್ಕೊಸ್ಕರ ಪ್ರಾಣತ್ಯಾಗ ಮಾಡಿದ ಭಗತ್ ಸಿಂಗ್, ರಾಜ್ ಗುರು, ಸಾರ್ವಕರನ್ನು ಮರೆಯುವಂತೆ ಮಾಡಿದ ನಮ್ಮ ಜಾತ್ಯಾತೀತ ಆಡಳಿತ ಶಾಹಿಗಳು ದೇಶವನ್ನು ಹೀನ ಸ್ಥಿತಿಗೆ ಕೊಂಡ್ಯೋಯ್ದಿದ್ದಾರೆ. ದೇಶದ ಹಿತ ಕಾಯುವ ದಿಸೆಯಲ್ಲಿ ಉಕ್ಕಿನಂತ ವ್ಯಕ್ತಿತ್ವ ಇರಿಸಿಕೊಂಡ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಧ್ವನಿ ಅಡಗಿಸುವ ಕಾರ್ಯ ಕೂಡಾ ಮಾಡಿದರು.

    ಲವ್ ಜಿಹಾದ್, ಭಯೋತ್ಪಾದನೆ ಕ್ರಮಕ್ಕೆ ಆಗ್ರಹ
    ಸಭೆಯ ಉದ್ದಕ್ಕೂ ಲವ್ ಜಿಹಾದ್, ಭಯೋತ್ಪಾದನೆ ವಿರುದ್ಧ ಹರಿಹಾಯ್ದ ನಿಹಾರಿಕಾ ದೇಶದಲ್ಲಿ ಆಂತರಿಕ ಭಯೋತ್ಪಾದನೆ, ಹಿಂದೂ ಕಾರ್ಯಕರ್ತರ ಹತ್ಯೆ, ಹಿಂದು ಹೆಣ್ಮಕ್ಕಳ ಟಾರ್ಗೆಟ್ ಮಾಡಿ ಅವರ ವಿಡಿಯೋ ತುಳುಣುಗಳನ್ನು ಹರಿಬಿಡುವ ಷಡ್ಯಂತರದ ವಿರುದ್ಧ ಆಕ್ರೋಶ ಹೊರಹಾಕಿದರು. ಜಾತ್ಯತೀತೆತ ಹೆಸರಿನಲ್ಲಿ ಒಲೈಕೆ ರಾಜಕಾರಣ ಮಾಡುವ ರಾಜಕಾರಣಿಗಳ ವಿರುದ್ಧ ಎಚ್ಚರಿಕೆ ನೀಡಿದಾಕೆ ಹಿಂದೂ ಸಮಾಜ ಸಶಕ್ತವಾಗಿ ಪುಟಿದೆದ್ದು ಸಂಘಟಿತ ಹೋರಾಟ ನೀಡಲಿದೆ ಎಂದರು.

    ಪ್ರಸ್ತುತ ವಿದ್ಯಾಮಾನಗಳನ್ನು ಗಮನಿಸಿದರೆ ಹಿಂದೂ ಹೆಣ್ಣುಮಕ್ಕಳನ್ನು ಕೇಂದ್ರವಾಗಿರಿಸಿಕೊಂಡು ಲವ್ ಜಿಹಾದ್ ರೀತಿಯ ಕತ್ಯ ಎಸೆಗಲಾಗುತ್ತಿದೆ ಇದಕ್ಕೆ ಹಿಂದೂ ಪೋಷಕರು ಜಾಗೃತರಾಗಬೇಕಿದೆ ಇನ್ನೊಂದೆಡೆ ಮತಾಂತರ ಪ್ರಕ್ರೀಯೆ ನಮ್ಮ ಧಾರ್ಮಿಕ ಆಚರಣೆಯನ್ನೆ ಟಾರ್ಗೆಟ್ ಮಾಡಲಾಗುತ್ತಿದೆ ಈ ಬಗ್ಗೆ ಜಾಗೃತರಾಗಿ ನಮ್ಮ ಸಂಸ್ಕಾರ, ಸಂಪ್ರದಾಯ ಆಚಾರ ವಿಚಾರಗಳ ಬಗ್ಗೆ ಹಿಂದೂ ಸಮಾಜ ಸದಾ ಚಿಂತನಾಶೀಲರಾಗಬೇಕೆಂದು ಕರೆ ಇತ್ತರು.
    ಇದೇ ವೇಳೆ ಹಾರಿಕಾ ಮಂಜುನಾಥ ಇವರನ್ನು ಜಾಗರಣಾ ವೇದಿಕೆ ವತಿಯಿಂದ ಗೌರವಿಸಲಾಯಿತು.

    ಸಭಾ ಅಧ್ಯಕ್ಷತೆಯನ್ನು ನಿವೃತ್ತ ಯೋಧ ಯೋಗೀಶ್ ಕಾಂಚನ್ ಪಡುಕರೆ ವಹಿಸಿದ್ದರು.ಹಿಂದೂ ಜಾಗರಣಾ ವೇದಿಕೆ ಕೋಟ ಘಟಕದ ಅಧ್ಯಕ್ಷ ಪ್ರಶಂತ್ ಮಟಪಾಡಿ,ಗೌರವಾಧ್ಯಕ್ಷ ಸುರೇಶ್ ಸಮತಾ,ಉಡುಪಿ ಜಿಲ್ಲಾ ಸಹಸಂಚಾಲಕ ನವೀನ್ ಗಂಗೋಳ್ಳಿ,ತಾಲೂಕು ಸಂಚಾಲಕ ಶ್ರೀನಿಧಿ ಉಪಸ್ಥಿತರಿದ್ದರು. ಹಿ.ಜಾ.ವೇ ಕೋಟ ಘಟಕದ ಪ್ರಮೋದ್ ಆಚಾರ್ ಸ್ವಾಗತಿಸಿದರು. ರಂಜೀತ್ ಕುಮಾರ್ ಅಖಂಡಭಾರತದ ಪ್ರತಿಜ್ಞಾ ವಿಧಿ ಭೋಧಿಸಿದರು.ಕಾರ್ಯಕ್ರಮವನ್ನು ಮಂಜುನಾಥ ಆಚಾರ್ ನಿರೂಪಿಸಿದರು.

    ಈ ಮೊದಲು ಸಾಲಿಗ್ರಾಮ ಶ್ರೀ ಆಂಜನೇಯ ಶ್ರೀಗುರುನರಸಿಂಹ ದೇವಸ್ಥಾನದಲ್ಲಿ ಪಂಜಿಗೆ ದೀಪ ಪ್ರಜ್ವಲಿಸಿಕೊಂಡು ಸಾಲಿಗ್ರಾಮ ರಾಷ್ಟ್ರೀಯ ಹೆದ್ದಾರಿ ಮೂಲಕ ಕೋಟ ಹಳೆ ಸಂತೆ ಮಾರುಕಟ್ಟೆ ಸಮೀಪದವರೆಗೆ ಸಮಾಪ್ತಿಗೊಂಡಿತು.

  • ಮಣೂರು- ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಧಿಕ ಶ್ರಾವಣ ಮಾಸದ ವಿಶೇಷ ಭಜನಾ ಕಾರ್ಯಕ್ರಮ

    ಮಣೂರು- ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಧಿಕ ಶ್ರಾವಣ ಮಾಸದ ವಿಶೇಷ ಭಜನಾ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ನೇಹಕೂಟ ಮಣೂರು ಹಾಗೂ ಶ್ರೀರಾಮ ಮಹಿಳಾ ಭಜನಾ ಮಂಡಳಿ ಮಣೂರು ಇವರ ಸಂಯೋಜನೆಯೊಂದಿಗೆ ಅಧಿಕ ಶ್ರಾವಣ ಮಾಸದ ವಿಶೇಷ ಭಜನಾ ಕಾರ್ಯಕ್ರಮ ಭಾನುವಾರ ನಡೆಯಿತು.

    ಕಾರ್ಯಕ್ರಮವನ್ನು ಮಣೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ದೀಪ ಬೆಳಗಿಸಿ ಚಾಲನೆ ನೀಡಿದರು.

    ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿ ಮಯ್ಯ, ಶ್ರೀರಾಮ ಮಹಿಳಾ ಭಜನಾ ಮಂಡಳಿ ಮಣೂರು ಚಂದ್ರಿಕಾ ಭಟ್ ಇವರುಳನ್ನು ಸನ್ಮಾನಿಸಲಾಯಿತು.

    ಜೋರ್ಣೋದ್ಧಾರ ಸಮಿತಿಯ ಅರುಣಾಚಲ ಮಯ್ಯ,ಎಮ್ ಎನ್ ಮಧ್ಯಸ್ಥ,ಎಂ.ವಿ ಮಯ್ಯ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು. ಈ ವೇಳೆ ಶ್ರೀ ದೇವರಿಗೆ ಬಹುಕಂಠ ಸಿರಿಯಲ್ಲಿ 33 ದೇವರನಾಮಗಳ ಭಜನಾ ಸಂಕೀರ್ತನೆ ನಡೆಯಿತು, ಸಂಕೀರ್ತನೆಯಲ್ಲಿ ಹಾರ್ಮೋನಿಯಂನಲ್ಲಿ ಗೀತಾ ತುಂಗಾ ಚಿತ್ರಪಾಡಿ,ತಬಲಾದಲ್ಲಿ ಸುರೇಶ್ ಆಚಾರ್ ಮಣೂರು ಭಾಗವಹಿಸಿದರು.

     

  • ಸೌಜನ್ಯಳ ಸಾವಿಗೆ ನ್ಯಾಯ ಬೇಡಿಕೆ ಇರಿಸಿ ಕಟಪಾಡಿ ಕೋರಗಜ್ಜನಲ್ಲಿ ಪ್ರಾರ್ಥನೆ

    ಸೌಜನ್ಯಳ ಸಾವಿಗೆ ನ್ಯಾಯ ಬೇಡಿಕೆ ಇರಿಸಿ ಕಟಪಾಡಿ ಕೋರಗಜ್ಜನಲ್ಲಿ ಪ್ರಾರ್ಥನೆ

    ಕುಂದಾಪುರ ಮಿರರ್ ಸುದ್ದಿ…


    ಕೋಟ: ಸಹೋದರಿ ಸೌಜನ್ಯಳ ಸಾವಿಗೆ ನ್ಯಾಯ ಬೇಡಿಕೆ ಇರಿಸಿ ಹರಕೆ ಹಾಗೂ ಪ್ರಾರ್ಥಿಸಲು ಕೋಟ, ಸಾಲಿಗ್ರಾಮ ಸೌಜನ್ಯ ನ್ಯಾಯ ಹೋರಾಟ ಸಮಿತಿ ಭಾನುವಾರ ಕಟಪಾಡಿ ಕೋರಗಜ್ಜನ ಸನ್ನಿಧಿಗೆ ಆಗಮಿಸಿ ಶ್ರೀ ದೈವರಿಗೆ ವಿಶೇಷ ಪೂಜೆ ಸಲ್ಲಿಸಿತು.

    ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಸಂತೋಷ್ ಮೆಂಡನ್ , ವಿಜಯ್ ಪೂಜಾರಿ, ಮಂಜುನಾಥ್ ಶೆಟ್ಟಿ, ಪ್ರವೀಣ್ ಪೂಜಾರಿ ಸಾಲಿಗ್ರಾಮ ಮತ್ತಿತರರು ಉಪಸ್ಥಿತರಿದ್ದರು.

  • ಸಾಸ್ತಾನ- ಟ್ಯಾಕ್ಸಿ ಮ್ಯಾನ್ ಮತ್ತು ಮ್ಯಾಕ್ಸಿ ಕ್ಯಾಬ್ ಎಸೋಸಿಯೇಷನ್ ಪದಾಧಿಕಾರಿಗಳ ಆಯ್ಕೆ

    ಸಾಸ್ತಾನ- ಟ್ಯಾಕ್ಸಿ ಮ್ಯಾನ್ ಮತ್ತು ಮ್ಯಾಕ್ಸಿ ಕ್ಯಾಬ್ ಎಸೋಸಿಯೇಷನ್ ಪದಾಧಿಕಾರಿಗಳ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ : ಜಿಲ್ಲಾ ಟ್ಯಾಕ್ಸಿ ಮ್ಯಾನ್ ಮತ್ತು ಮ್ಯಾಕ್ಸಿ ಕ್ಯಾಬ್ ಎಸೋಸಿಯೇಷನ್ ಇದರ ಸಾಸ್ತಾನ ಘಟಕದ ಪಧಾಧಿಕಾರಿಗಳ ಆಯ್ಕೆ ಆ.8ರಂದು ಸಾಸ್ತಾನದ ಗುಂಡ್ಮಿ ಶಾಲೆಯಲ್ಲಿ ಜರಗಿತು.

    ಸಭೆಯ ಅಧ್ಯಕ್ಷತೆಯನ್ನು ಸಾಸ್ತಾನದ ಅನ್ಯೂನ್ಯತಾ ಟೂರಿಸ್ಟ್ ಚಾಲಕ ಮಾಲಕ ಸಂಘದ ಅಧ್ಯಕ್ಷ ತ್ಯಾಗರಾಜ್ ವಹಿಸಿದ್ದರು.

    ಜಿಲ್ಲಾ ಟ್ಯಾಕ್ಸಿಮ್ಯಾನ್ ಮತ್ತು ಮ್ಯಾಕ್ಸಿ ಕ್ಯಾಬ್ ಎಸೋಸಿಯೇಷನ್ ಇದರ ಪ್ರಧಾನ ಕಾರ್ಯದರ್ಶಿ ರಮೇಶ್ ಕ್ಯೊಟ್ಯಾನ್ ,ಜಿಲ್ಲಾ ಟಾಕ್ಸಿ ಮ್ಯಾನ್ ಮತ್ತು ಮಾಕ್ಸಿಕ್ಯಾಬ್ ಎಸೋಸಿಯೇಷನ್ ಸಾಸ್ತಾನ ಘಟಕದ ಅಧ್ಯಕ್ಷರಾಗಿ ಓಣಿಮನೆ ರಾಘವೇಂದ್ರ ಪೂಜಾರಿ ಮರು ಆಯ್ಕೆಗೊಳಿಸಲಾಯಿತು. ಕಾರ್ಯದರ್ಶಿಯಾಗಿ ರವಿ ಪೂಜಾರಿ ಕೋಶಾಧಿಕಾರಿಯಾಗಿ ಗ್ರೆಗೋರಿ ಪಿಂಟೋ ಇವರುಗಳು ಆಯ್ಕೆಗೊಂಡರು.

     

  • ಬೈಂದೂರು :ಶಿರೂರು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ನಾಗರತ್ನ ಆಚಾರಿ ಹಾಗೂ ಉಪಾಧ್ಯಕ್ಷರಾಗಿ ಕಪ್ಸಿ ನೂರ ಮೊಹಮದ್ ಅವಿರೋಧವಾಗಿ ಆಯ್ಕೆ

    ಬೈಂದೂರು :ಶಿರೂರು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ನಾಗರತ್ನ ಆಚಾರಿ ಹಾಗೂ ಉಪಾಧ್ಯಕ್ಷರಾಗಿ ಕಪ್ಸಿ ನೂರ ಮೊಹಮದ್ ಅವಿರೋಧವಾಗಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಬೈಂದೂರು :ಶಿರೂರು ಗ್ರಾಮ ಪಂಚಾಯತ್ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಾಗರತ್ನ ಆಚಾರಿ ಹಾಗೂ ಉಪಾಧ್ಯಕ್ಷರಾಗಿ ಕಪ್ಸಿ ನೂರ ಮೊಹಮದ್ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

    ಶಿರೂರು ಗ್ರಾಮ ಪಂಚಾಯತ್ ನಲ್ಲಿ 44 ಸ್ಥಾನಗಳಿದ್ದು, ಕಾಂಗ್ರೆಸ್ ಬೆಂಬಲಿತ 26, ಎಸ್.ಡಿ.ಪಿ.ಐ 4, ಬಿಜೆಪಿ ಬೆಂಬಲಿತ 11, ಪಕ್ಷೇತರ 3ರು ಸದಸ್ಯರು.

  • ಕುಂದಾಪುರ: ಅಂತರ್ರಾಷ್ಟ್ರೀಯ ಕರಾಟೆಯಲ್ಲಿ ನೇರಳಕಟ್ಟೆಯ ಶ್ರೀಶ ಗುಡ್ರಿಗೆ ಚಿನ್ನ

    ಕುಂದಾಪುರ: ಅಂತರ್ರಾಷ್ಟ್ರೀಯ ಕರಾಟೆಯಲ್ಲಿ ನೇರಳಕಟ್ಟೆಯ ಶ್ರೀಶ ಗುಡ್ರಿಗೆ ಚಿನ್ನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಸೀಕೊ ಕೈ ಕರಾಟೆ ಇಂಟರ್ನ್ಯಾಷನಲ್, ಇಂಡಿಯಾ ಮತ್ತು ಭಾರತ್ ಕರಾಟೆ ಅಕಾಡೆಮಿಯ ಇವರ ಸಂಯೋಜನೆಯಲ್ಲಿ ದಿನಾಂಕ ಆಗಸ್ಟ್ 11 ರಿಂದ 13ರವರೆಗೆ ತಾಲ್ಕಟೋರ ಒಳಾಂಗಣ ಕ್ರೀಡಾಂಗಣ ದೆಹಲಿಯಲ್ಲಿ ನಡೆಸಿದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕುಂದಾಪುರ ತಾಲೂಕಿನ ನೇರಳಕಟ್ಟೆಯ ಶ್ರೀಶ ಗುಡ್ರಿ ಚಿನ್ನದ ಪದಕ ಪಡೆದುಕೊಂಡಿದ್ದಾನೆ.

    ಸಂತೋಷ್ ಮೇಲ್ ಹರ್ಜಿ ಮತ್ತು ಹೇಮಾವತಿ ಗುಡ್ರಿ ಪುತ್ರನಾಗಿರುವ ಶ್ರೀಶ ಗುಡ್ರಿ ವಂಡ್ಸೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ. ಫೀನಿಕ್ಸ್ ಅಕಾಡೆಮಿ ಇಂಡಿಯಾ (Phoenix Academy India)ದ ಮುಖ್ಯಸ್ಥ ಶಿಹಾನ್ ಕೀರ್ತಿ ಜಿಕೆ ಇವರ ಶಿಷ್ಯ ಕೋಚ್ ಅಕ್ಷಯ್ ಹೆಮ್ಮಾಡಿ ಇವರಲ್ಲಿ ತರಬೇತಿ ಪಡಯುತ್ತಿದ್ದಾರೆ.

  • ಕೋಟ ಪಂಚವರ್ಣ ಸಂಸ್ಥೆಯ 175ನೇ ಪರಿಸರಸ್ನೇಹಿ ಅಭಿಯಾನ

    ಕೋಟ ಪಂಚವರ್ಣ ಸಂಸ್ಥೆಯ 175ನೇ ಪರಿಸರಸ್ನೇಹಿ ಅಭಿಯಾನ

    ದೇವಳದ ಸ್ವಚ್ಛತಾ ಕಾರ್ಯ ಶ್ರೇಷ್ಠ ಕಾರ್ಯವಾಗಿದೆ- ಸತೀಶ್ ಹೆಚ್ ಕುಂದರ್

    ಕುಂದಾಪುರ ಮಿರರ್ ಸುದ್ದಿ…
    ಕೋಟ: ದೇವರನ್ನು ಅತಿ ಸನಿಹದಲ್ಲಿ ಕಾಣಬೇಕಾದರೆ ಭಕ್ತಿಯ ಮೂಲಕ ಸ್ಪರ್ಶಿಸಬಹುದಾಗಿದೆ ಅದೇ ರೀತಿ ದೇವಳದ ಧಾರ್ಮಿಕ ಕಾರ್ಯದ ನಡುವೆ ಅಲ್ಲಿನ ಸ್ವಚ್ಛಕಾರ್ಯವು ಮಹತ್ತರವಾದ ಸ್ಥಾನ ಪಡೆದುಕೊಳ್ಳುತ್ತದೆ ಎಂದು ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್.ಹೆಚ್.ಕುಂದರ್ ಹೇಳಿದರು.

    ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಸಹಯೋಗದೊಂದಿಗೆ ಪರಿಸರಸ್ನೇಹಿ ಅಭಿಯಾನ 175ನೇ ವಾರದ ಕಾರ್ಯಕ್ರಮ ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇಲ್ಲಿನ ಸುತ್ತಮುತ್ತ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿ ಧಾರ್ಮಿಕ ಕಾರ್ಯ ಎಷ್ಟು ಮಹತ್ತ ಪಡೆಯುತ್ತದೆಯೋ ಅದೇ ರೀತಿ ದೇವರ ಕಾರ್ಯದಲ್ಲಿ ನಾನಾ ರೀತಿಯ ಸೇವೆಗಳು ಅತಿ ಮಹತ್ವದ ಸ್ಥಾನ ಪಡೆದುಕೊಂಡಿದೆ ಈ ದಿಸೆಯಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡ ಸ್ವಚ್ಛತಾ ಕಾರ್ಯ ದೇವರು ಸದಾ ಅನುಗ್ರಹಿಸುವ ಕಾರ್ಯವಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಮಣೂರು ದೇವಸ್ಥಾನದ ಟ್ರಸ್ಟಿ ಬಾಬು ಕೋಟ, ಕೃಷ್ಣ ದೇವಾಡಿಗ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಕಾರ್ಯದರ್ಶಿ ಸುಧೀಂದ್ರ ಜೋಗಿ, ಸಂಘಟನಾ ಕಾರ್ಯದರ್ಶಿ ಗಿರೀಶ್ ಆಚಾರ್, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್, ವಿಪ್ರ ಮಹಿಳಾ ಬಳಗದ ಸುಜಾತ ಬಾಯರಿ, ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಪೂಜಾರಿ, ಕೋಟ ಗ್ರಾಮಪಂಚಾಯತ್ ಸದಸ್ಯೆ ಗುಲಾಬಿ ಪೂಜಾರಿ, ಸಂಯುಕ್ತ ಸಂಘಗಳ ಸಂಚಾಲಕ ಸತ್ಯನಾರಾಯಣ ಆಚಾರ್, ವಿವಿಧ ಸಂಘಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

    ಕಾರ್ಯಕ್ರಮವನ್ನು ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

  • ಉಡುಪಿ :ಮಹಿಳೆಯರೇ ನಡೆಸುವ ಸಂಜೀವಿನಿ ಸೂಪರ್ ಮಾರ್ಕೆಟ್ ಆರಂಭ

    ಉಡುಪಿ :ಮಹಿಳೆಯರೇ ನಡೆಸುವ ಸಂಜೀವಿನಿ ಸೂಪರ್ ಮಾರ್ಕೆಟ್ ಆರಂಭ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ :ಮಹಿಳಾ ಸಬಲೀಕರಣದ ಮೂಲಕ ಕುಟುಂಬದ ಆರ್ಥಿಕ ಬೆಳವಣಿಗೆಯ ಉದ್ದೇಶದಿಂದ ಜಾರಿಗೆ ತಂದಿರುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಜಿಲ್ಲೆಯ ಮಹಿಳೆಯರು ಆರ್ಥಿಕ ಲಾಭ ತರುವ ಹಲವು ಉದ್ಯಮಗಳಲ್ಲಿ ತೊಡಗಿದ್ದು, ಇದೇ ಮೊದಲ ಬಾರಿಗೆ ಎಲ್ಲಾ ಸೇವೆಗಳನ್ನು ಒದಗಿಸುವ ಸೂಪರ್ ಮಾರ್ಕೆಟ್ ಆರಂಭಿಸುತ್ತಿದ್ದು, ಆಗಸ್ಟ್ 14 ರಂದು ಈ ಸೂಪರ್ ಮಾರ್ಕೆಟ್ ಉಡುಪಿಯ ಹೃದಯಭಾಗದ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಆರಂಭಗೊಳ್ಳಲಿದೆ.

    ಈ ಸೂಪರ್ ಮಾರ್ಕೆಟ್ ನಲ್ಲಿ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘದ ಉತ್ತಮ ಗುಣಮಟ್ಟದ ಅಲಂಕಾರಿಕ/ಒಳಾಂಗಣ ಗಿಡಗಳು, ಯಕ್ಷಗಾನ ಮುಖವಾಡಗಳು ಹ್ಯಾಂಡ್ ಮೇಡ್ ಬ್ಯಾಗ್ ಗಳು, ಕ್ಯಾಂಡಲ್ ಗಳು, ಬಿದಿರಿನ ಬುಟ್ಟಿ , Grow Bag, Wall Paintings, Key Chain, GI Tag ಹೊಂದಿರುವ ಕೈ ಮಗ್ಗದ ಸೀರೆಗಳು, ಮಣ್ಣಿನ ಮಡಕೆ ಇತ್ಯಾದಿ, ಡೋರ್ ಮ್ಯಾಟ್, ಪರಿಶುದ್ಧ ಜೇನುತುಪ್ಪ, ಕಜೆ ಅಕ್ಕಿ, ಸಾವಯವ ಬೆಲ್ಲ, ಫಿನೈಲ್, ಸೋಪ್ ಆಯಿಲ್, ಡಿಟರ್ಜೆಂಟ್, ದೇಸಿ ಗೋ ಉತ್ಪನ್ನಗಳು, ವಿವಿಧ ಬಗೆಯ ತಿಂಡಿ, ತಿನಿಸುಗಳು, ಪೂಜಾ ಸಾಮಗ್ರಿ, ಆರೋಗ್ಯಕರ ಪೇಯಗಳು, ಗುಣಮಟ್ಟದ, ಆರೋಗ್ಯಕರ, ಸಾವಯವ ಉತ್ಪನ್ನಗಳು ಲಭ್ಯವಿವೆ Home made Chacolate, Cake , ಚಿಕ್ಕಿ, ಆಕರ್ಷಕ ಕಲಾಕೃತಿಗಳು ಇತ್ಯಾದಿ ವಸ್ತುಗಳು ಒಂದೇ ಸೂರಿನಡಿ ದೊರೆಯಲಿವೆ.
    ಸದರಿ ಮಳಿಗೆಯನ್ನು ಉಡುಪಿ ತಾಲೂಕು ಪಂಚಾಯತ್ ಹಾಗೂ ನರ್ಬಾಡ್ ಸಂಸ್ಥೆಯ ಸಹಯೋಗದಲ್ಲಿ ಚೇರ್ಕಾಡಿ ಗ್ರಾಪಂ ನ ಪ್ರಗತಿ GPLF ನ ಸಮೃದ್ಧಿ ಸಂಜೀವಿನಿ ಸ್ವಸಹಾಯ ಗುಂಪಿನ ಸದಸ್ಯರು ನಡೆಸಲಿದ್ದು, ಜಿಲ್ಲೆಯ ವಿವಿಧ ಸಂಜೀವಿನಿ ಸಂಘದ ಸದಸ್ಯರು ಉತ್ಪಾದಿಸಿರುವ ವಸ್ತುಗಳನ್ನು ಈ ಕೇಂದ್ರದ ಮೂಲಕ ಮಾರಾಟ ಮಾಡಲಿದ್ದಾರೆ.

    ಈ ಸೂಪರ್ ಮಾರ್ಕೆಟ್‌ನಲ್ಲಿ, ಸೇವಾ ಸಿಂಧು ಸೇವೆಗಳು, ಪಾಸ್ ಪೋರ್ಟ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಕಾರ್ಮಿಕರ ನೋಂದಣಿ ಇತ್ಯಾದಿ ಆನ್ ಲೈನ್ ಸೇವೆಗಳು, ಶಿಕ್ಷಣ, ಬ್ಯೂಟಿಷಿಯನ್, ಟೈಲರಿಂಗ್, ಎಂಬ್ರಾಯಿಡರಿ, ಕುಚ್ಚು ಮೆಹಂದಿ, ಚಂಡೆ, ಯಕ್ಷಗಾನ, ಕ್ಯಾಟರಿಂಗ್, ಕಾನೂನು ಮತ್ತು ಆಪ್ತ ಸಲಹೆ, ಕ್ಯಾಟರಿಂಗ್, ಪೋಟೋಗ್ರಾಫಿ ಮತ್ತು ವೀಡಿಯೋಗ್ರಾಫಿ, ಆರೋಗ್ಯ ಸಲಹೆ ಸೇವೆಗಳೂ ಸಹ ದೊರೆಯಲಿವೆ.

    ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ 155 ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಮೂಲಕ ಒಟ್ಟು 7623 ಸ್ವ ಸಹಾಯ ಗುಂಪುಗಳನ್ನು ರಚಿಸಲಾಗಿದ್ದು, ಈ ಗುಂಪುಗಳಲ್ಲಿ 85000 ಅಧಿಕ ಮಂದಿ ಸದಸ್ಯರಿದ್ದು, ಜಿಲ್ಲೆಯ ಗ್ರಾಮೀಣ ಭಾಗದ ಮಹಿಳೆಯರು ಸಮುದಾಯ ಬಂಡವಾಳ ನಿಧಿಯನ್ನು ಪಡೆದು ಅನೇಕ ರೀತಿಯ ಜೀವನೋಪಾಯ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ.

    ಜಿಲ್ಲೆಯ ಸಂಜಿವಿನಿ ಸ್ವ ಸಹಾಯ ಸಂಘದ ಮಹಿಳೆಯರಿಗೆ , ಜಿಲ್ಲಾ ಪಂಚಾಯತ್ ಮೂಲಕ ಸ್ವ ಉದ್ಯೋಗ ಆರಂಭಿಸಲು ಅಗತ್ಯವಿರುವ ತರಬೇತಿ ಮತ್ತು ಸಮುದಾಯ ಬಂಡವಾಳವನ್ನು ನೀಡುತ್ತಿದ್ದು, ಇದರಿಂದ ಈಗಾಗಲೇ ಹಲವು ರೀತಿಯ ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಅವರು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರೆತಲ್ಲಿ ಇನ್ನೂ ಹೆಚ್ಚಿನ ಆರ್ಥಿಕ ಲಾಭ ಗಳಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಮಹಿಳೆಯರೇ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಸೂಪರ್ ಮಾರ್ಕೆಟ್ ತೆರೆಯುತ್ತಿರುವುದು ಅವರ ಆರ್ಥಿಕ ಬೆಳವಣಗೆಗೆ ಮತ್ತಷ್ಟು ಸಹಕಾರವಾಗಲಿದೆ – ಪ್ರಸನ್ನಹೆಚ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಉಡುಪಿ

  • ಉಡುಪಿ : ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಪ್ರಯುಕ್ತ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ

    ಉಡುಪಿ : ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಪ್ರಯುಕ್ತ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ

    ಕುಂದಾಪುರ ಮಿರರ್ ಸುದ್ದಿ…

    ಉಡುಪಿ :ಸ್ಟೆಲ್ಲಾ ಮಾರಿಸ್ ಚರ್ಚ್ ಕಲ್ಮಾಡಿ ಇಲ್ಲಿರುವ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವದ ಪ್ರಯುಕ್ತ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಗೆಯು ಆದಿ ಉಡುಪಿಯಿಂದ ಕಲ್ಮಾಡಿ ಚರ್ಚಿನವರೆಗೆ ನಡೆಯಿತು.

    ಪುಣ್ಯಕ್ಷೇತ್ರದ ರೆಕ್ಟರ್ ವಂದನೀಯ ಬ್ಯಾಪ್ಟಿಸ್ಟ್ ಮಿನೇಜಸ್ ರವರು ಧರ್ಮಾಧ್ಯಕ್ಷರಿಗೆ ಹಾಗೂ ನೆರೆದ ಭಕ್ತಾದಿಗಳಿಗೆ ಸ್ವಾಗತ ಕೋರಿದರು.

    ಮಿಲಾಗ್ರಿಸ್ ಚರ್ಚಿ ಕಲ್ಯಾಣ್ ಪುರದ ಇಲ್ಲಿನ ಸಹ ಗುರುಗಳಾದ ವಂದನೀಯ ಜೋಯ್ ಅಂದ್ರಾದೆ ಅವರು ದೇವರ ವಾಚನವನ್ನು ಓದಿ ಸಂದೇಶ ನೀಡಿದರು.

    ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಅಲೋಷಿಯಸ್ ಪಾವ್ಲ್ ಡಿ’ಸೋಜಾ ರವರು ವೆಲಂಕಣಿ ಮಾತೆಯ ಮೂರ್ತಿಯನ್ನು ಆಶೀರ್ವದಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಶೋಭ ಮೆಂಡೋನ್ನರವರು ಕಾರ್ಯಕ್ರಮವನ್ನು ನಡೆಸಿದರು.

    ತದ ನಂತರ ನಡೆದ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಅಲೋಷಿಯಸ್ ಪಾವ್ಲ್ ಡಿ’ಸೋಜಾ ರವರು ಆಚರಿಸಿದರು. ಅವರು ತಮ್ಮ ಸಂದೇಶದಲ್ಲಿ ದೇವರು ನಮ್ಮೊಂದಿಗೆ ಸಂವಾದಿಸಲು ಆಶಿಸುತ್ತಾರೆ ಆದರೆ ನಾವು ಪೂರಕವಾದ ವಾತಾವರಣವನ್ನು ಕಲ್ಪಿಸುತ್ತಿಲ್ಲ, ಜಗತ್ತಿನ ಗದ್ದಲದಲ್ಲಿ ದೇವರ ಮಾತು ಕೇಳಿಸುತ್ತಿಲ್ಲ. ಮಾತೆ ಮರಿಯಮ್ಮನವರು ಸದಾ ದೇವರ ಇಚ್ಚೆಯಂತೆ ನಡೆದವರು. ಪ್ರೀತಿಯ ತಾಯಿಯಾಗಿ, ವಿಶ್ವಾಸಿ ಮಡದಿಯಾಗಿ ಮತ್ತು ದುಖ:ತೃಪ್ತ ಕನ್ಯೆಯಾಗಿ ದೇವರ ಇಚ್ಚೆಯಂತೆ ಜೀವನ ನಡೆಸಿದರು ಎಂದರು.

    ವೆಲಂಕಣಿ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವವು ಅಗೋಸ್ಟ್ 15 ರಂದು ನಡೆಯಲಿರುವುದು. ಆ ದಿನ ಬೆಳಗ್ಗೆ 10 ಗಂಟೆಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೊಬೋ ರವರು ಬಲಿಪೂಜೆಯನ್ನು ನೆರೆವೇರಿಸಲಿರುವರು. ಅಂದು ಮಧ್ಯಾಹ್ನ 2 ಗಂಟೆಗೆ ಸಾಯಂಕಲ 4 ಗಂಟೆಗೆ ಹಾಗೂ 6 ಗಂಟೆಗೆ ಇತರ ಬಲಿಪೂಜೆಗಳು ನಡೆಯಲಿರುವುದು.