Category: ಸುದ್ದಿ

  • ಕೋಟ ಪಡುಕರೆ ಪಿಯು ಕಾಲೇಜಿಗೆ ಪೀಠೋಪಕರಣ ಹಸ್ತಾಂತರ

    ಕೋಟ ಪಡುಕರೆ ಪಿಯು ಕಾಲೇಜಿಗೆ ಪೀಠೋಪಕರಣ ಹಸ್ತಾಂತರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸರಕಾರಿ ಪದವಿಪೂರ್ವ ಕಾಲೇಜು ಕೋಟ ಪಡುಕರೆ ಇಲ್ಲಿಗೆ ತಾಲೂಕು ಪಂಚಾಯತ್ ಅನುದಾನದಡಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪೀಠೋಪಕರಣಗಳನ್ನು ಹಸ್ತಾಂತರ ಕಾರ್ಯಕ್ರಮ ಸೋಮವಾರ ಕಾಲೇಜಿನಲ್ಲಿ ನಡೆಯಿತು.

    ಬ್ರಹ್ಮಾವರ ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ವಿ ಇಬ್ರಾಹಿಂಪುರ ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಝಾ ಇವರಿಗೆ ಹಸ್ತಾಂತರಿಸಿದರು.

    ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್, ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ,ಲಕ್ಷ್ಮೀ ಸೋಮಬಂಗೇರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಸುನೀತಾ,ಉಪಾಧ್ಯಕ್ಷೆ ಜಯಂತಿ ಪೂಜಾರಿ,ಸದಸ್ಯರಾದ ಸುಧಾ ಎ ಪೂಜಾರಿ,ಶಿವರಾಮ್ ಶೆಟ್ಟಿ, ಭುಜಂಗ ಗುರಿಕಾರ,ಶೇಖರ್ ಗಿಳಿಯಾರು,ಜಯರಾಮ್ ಶೆಟ್ಟಿ, ಪಾಂಡು ಪೂಜಾರಿ,ಶಾರದ.ಆರ್ ಕಾಂಚನ್,ಗುಲಾಬಿ,ಸಂಯುಕ್ತ ಪ್ರೌಢಶಾಲಾ ಮುಖ್ಯ ಶಿಕ್ಷಕ ನಿರಂಜನ್ ನಾಯಕ್,ಶಿಕ್ಷಕರಾದ ರಾಮದಾಸ ನಾಯಕ್,ಪಂಚಾಯತ್ ಕಾರ್ಯದರ್ಶಿ ಶೇಖರ್ ಮರವಂತೆ ,ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜಯಂತಿ,ಗೀತಾನಂದ ಸಮಾಜ ಕಾರ್ಯವಿಭಾಗದ ರವಿಕಿರಣ್ ಕೋಟ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪಂಚಾಯತ್ ಲೆಕ್ಕಪರಿಶೋಧಕಿ ಪೂರ್ಣಿಮಾ ಅಧಿಕಾರಿ ನಿರೂಪಿಸಿದರು.

  • ಕೋಟ ಗ್ರಾಮಪಂಚಾಯತ್ ನಿಂದ ಮತದಾನ ಜಾಗೃತಿ ,ಪ್ರತಿಜ್ಞಾವಿಧಿ

    ಕೋಟ ಗ್ರಾಮಪಂಚಾಯತ್ ನಿಂದ ಮತದಾನ ಜಾಗೃತಿ ,ಪ್ರತಿಜ್ಞಾವಿಧಿ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಕೋಟ ಗ್ರಾಮಪಂಚಾಯತ್ ವತಿಯಿಂದ ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಮತದಾರರ ಜಾಗೃತಿಗೊಳಿಸುವ ನಿಟ್ಟಿನಲ್ಲಿ ಮತದಾನ ಜಾಗೃತಿ ಪ್ರತಿಜ್ಞಾ ವಿಧಿ ಕಾರ್ಯಕ್ರಮ ಹಮ್ಮಿಕೊಂಡಿತು.

    ಮತದಾನ ಪ್ರತಿಜ್ಞಾ ವಿಧಿಯನ್ನು ಕೋಟ ಗ್ರಾಮಪಂಚಾಯತ್ ಕಾರ್ಯದರ್ಶಿ ಶೇಖರ್ ಮರವಂತೆ ಭೋದಿಸಿದರು.
    ಈ ವೇಳೆ ಬ್ರಹ್ಮಾವರ ತಾ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್ ವಿ ಇಬ್ರಾಹಿಂಪುರ್, ಉದ್ಯಮಿ ಆನಂದ್ ಸಿ ಕುಂದರ್, ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಉಪಾಧ್ಯಕ್ಷೆ ಜಯಂತಿ ಪೂಜಾರಿ, ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ, ಪಂಚಾಯತ್ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

  • ಮಣೂರು-ಸ್ನೇಹಕೂಟದ ಸಮಾಜಮುಖಿ ಕಾರ್ಯ ಶ್ಲಾಘನೀಯ- ಡಾ.ವಾಣಿಶ್ರೀ ಐತಾಳ್

    ಮಣೂರು-ಸ್ನೇಹಕೂಟದ ಸಮಾಜಮುಖಿ ಕಾರ್ಯ ಶ್ಲಾಘನೀಯ- ಡಾ.ವಾಣಿಶ್ರೀ ಐತಾಳ್

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸ್ನೇಹಕೂಟ ಮಣೂರು ಇದರ ವತಿಯಿಂದ ವಿಶ್ವಮಹಿಳಾ ದಿನದ ಮಾಸಾಚರಣೆ ಕಾರ್ಯಕ್ರಮ ಮಣೂರು ಭಾರತೀ ವಿಷ್ಣುಮೂರ್ತಿ ಮಯ್ಯ ಮನೆಯಂಗಳದಲ್ಲಿ ನಡೆಯಿತು.

    ಕಾರ್ಯಕ್ರಮವನ್ನು ಕೋಟ ಸೇವಾ ಸಂಗಮ ಶಿಶುಮಂದಿರ ವ್ಯವಸ್ಥಾಪಕಿ ಭಾಗ್ಯವಾದಿರಾಜ್ ಉದ್ಘಾಟಿಸಿದರು.

    ಸಭೆಯ ಅಧ್ಯಕ್ಷತೆಯನ್ನು ಸಮಾಜಸೇವಕಿ ಡಾ.ವಾಣಿಶ್ರೀ ವಹಿಸಿ ಮಾತನಾಡಿ ಸಮಾಜಸೇವೆಯ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂಬುವುದನ್ನು ಸಂಘಸಂಸ್ಥೆಗಳು ತೋರಿಸಿಕೊಟ್ಟಿವೆ. ಈ ನಿಟ್ಟಿನಲ್ಲಿ ಸ್ನೇಹಕೂಟದ ಮೂಲಕ ಹಲವಾರು ತೆರೆಯಮರೆಯ ಕಾರ್ಯಗಳು ನಡೆಯುತ್ತಿದೆ ಇದೊಂದು ಬದಲಾವಣೆಗೆ ಹಿಡಿದ ಕೈಗನ್ನಡಿಯಾಗಿದೆ. ತನ್ನ ಮನೆಯಂಗಳವನ್ನು ವಿಶ್ವಮಹಿಳಾ ದಿನದ ವೇದಿಕೆಯಾಗಿರಿಸಿ ಮಹಿಳೆಯರ ತುಡಿತಗಳ ಬಗ್ಗೆ ಚಿಂತಿಸುವ ಕಾರ್ಯ ನಿಜಕ್ಕೂ ಪ್ರಶಂಸನೀಯ, ಸ್ನೇಹಕೂಟ ಸಾಮಾಜಿಕ ಕಾರ್ಯದ ನಡುವೆ ಸಾಂಸ್ಕೃತಿಕವಾಗಿ ತೊಡಗಿಕೊಂಡಿದೆ ಇದು ಇತರ ಸಂಸ್ಥೆಗಳಿಗೆ ಮಾದರಿ ಎಂದು ಅಭಿಪ್ರಾಯಪಟ್ಟರು.

    ಕಾರ್ಯಕ್ರಮದಲ್ಲಿ ಸ್ನೇಹಕೂಟದ ಸಾಧಕಿಯರಾದ ಭಾರತೀ.ವಿ ಮಯ್ಯ,ಮುಕಾಂಬಿಕಾ ಮಯ್ಯ,ಸುವರ್ಣಲತಾ,ಮೀರಾ ಸಾಮಗ,ವನೀತಾ ಉಪಾಧ್ಯ, ಸುಪ್ರೀತಾ ಪುರಾಣಿಕ ಇವರುಗಳನ್ನು ಅಭಿನಂದಿಸಲಾಯಿತು.

    ಭಾಗೇಶ್ಚರಿ ಮಯ್ಯ,ಮಾನಸ ಮಯ್ಯ,ಗಾಯತ್ರಿ ಹೊಳ್ಳ,ಶ್ವೇತ ಉಪಾಧ್ಯ,ಶಶಿಕಲಾ ಐತಾಳ್,ಸುಜಾತ ಬಾಯರಿ ಸನ್ಮಾನಿಸಲಾಯಿತು.

    ಸ್ನೇಹಕೂಟದಿಂದ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.

    ಮುಖ್ಯ ಅತಿಥಿಗಳಾಗಿ ಕೋಟ ಸೇವಾಸಂಗಮ ಶಿಶು ಮಂದಿರದ ಇದರ ಕಾರ್ಯದರ್ಶಿ ವಸುಧಾ ಪ್ರಭು,ಕೋಟ ಮಹಿಳಾ ಮಂಡಳ ಉಪಾಧ್ಯಕ್ಷೆ ಗೀತಾ ಎ ಕುಂದರ್ ಉಪಸ್ಥಿತರಿದ್ದರು.ಸನ್ಮಾನ ಕಾರ್ಯಕ್ರಮವನ್ನು ಸುಪ್ರೀತಾ ಪುರಾಣಿಕ ನಿರ್ವಹಿಸಿದರು.

    ಕಾರ್ಯಕ್ರಮವನ್ನು ಸುಜಾತ ಬಾಯರಿ ಸ್ವಾಗತಿಸಿ ನಿರೂಪಿಸಿದರು.

    ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನೆರವೆರಿತು.ಗಾಯಿತ್ರಿ ಹೊಳ್ಳ ವಂದಿಸಿದರು.

  • ತೆಕ್ಕಟ್ಟೆ- ರೇವತಿ ತೆಕ್ಕಟ್ಟೆಗೆ ಜಿ.ಪಂ ಸಂಜೀವಿನಿ ಪುರಸ್ಕಾರ

    ತೆಕ್ಕಟ್ಟೆ- ರೇವತಿ ತೆಕ್ಕಟ್ಟೆಗೆ ಜಿ.ಪಂ ಸಂಜೀವಿನಿ ಪುರಸ್ಕಾರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಜಿಲ್ಲಾ ಪಂಚಾಯತ್ ಉಡುಪಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇವರ ನೇತೃತ್ವದಲ್ಲಿ ಶನಿವಾರ ಮಣಿಪಾಲದ ಆಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ತೆಕ್ಕಟ್ಟೆ ಗ್ರಾಮ ಪಂಚಾಯತ್‍ನ ಪದ್ಮಕಮಲ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಸ್ವಸಹಾಯ ಗುಂಪಿನ ಮಹಿಳಾ ಚಾಲಕಿ ರೇವತಿ ತೆಕ್ಕಟ್ಟೆ ಇವರನ್ನು ಉಡುಪಿ ಜಿಲ್ಲೆಯ ಎಸ್‍ಎಲ್‍ಆರ್‍ಎಮ್ ಘಟಕದ ಅತ್ಯುತ್ತಮ ಮಹಿಳಾ ವಾಹನ ಚಾಲಕಿ ಸಂಜೀವಿನಿ ಪುರಸ್ಕಾರ ನೀಡಿ ಗೌರವಿಸಲಾಯಿತು.

    ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಎನ್‍ಆರ್‍ಎಲ್‍ಎಮ್), ಸಂಜೀವಿನಿ ಯೋಜನೆಯಡಿ ಅಭಿಯಾನದ ಧ್ಯೇಯದಂತೆ ಗ್ರಾಮೀಣ ಮಹಿಳೆಯರ ಸಾಮಾಜಿಕ, ಆರ್ಥಿಕ ಜೀವನೋಪಾಯ ಹಾಗೂ ಹಣಕಾಸು ಸೇರ್ಪಡೆಯ ನಿಟ್ಟಿನಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಅತೀ ಹೆಚ್ಚಿನ ಅವಧಿಯವರೆಗೆ ವಾಹನ ಚಾಲಾಯಿಸಿದ ಕೀರ್ತಿ ರೇವತಿ ತೆಕ್ಕಟ್ಟೆ ಇವರಿಗಿದೆ.

    ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪಾಡ್ನೆಕರ್, ಎಡಿಸಿ ವೀಣಾ, ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ತೆಕ್ಕಟ್ಟೆ ಗ್ರಾಮ ಪಂಚಾಯತ್‍ನ ಪಿಡಿಒ ಸುನೀಲ್, ವಿಕಾಸ ಸಂಜೀವಿನಿ ಒಕ್ಕೂಟ ತೆಕ್ಕಟ್ಟೆಯ ಸದಸ್ಯರು ಉಪಸ್ಥಿತರಿದ್ದರು.

  • ಸಾಲಿಗ್ರಾಮ – ಹುಟ್ಟೂರ ಋಣ ತೀರಿಸುವ ಭಾಗ್ಯ ಸರ್ವಶ್ರೇಷ್ಠವಾದದ್ದು- ಡಾ.ಕೆ.ಎಸ್.ಕಾರಂತ

    ಸಾಲಿಗ್ರಾಮ – ಹುಟ್ಟೂರ ಋಣ ತೀರಿಸುವ ಭಾಗ್ಯ ಸರ್ವಶ್ರೇಷ್ಠವಾದದ್ದು- ಡಾ.ಕೆ.ಎಸ್.ಕಾರಂತ

    ಕುಂದಾಪುರ ಮಿರರ್ ಸುದ್ದಿ….

    ಕೋಟ: ಪರೋಪಕಾರಾರ್ಥಮಿದಂ ಶರೀರಂ ಎಂಬ ಉಕ್ತಿಯಂತೆ ಬದುಕನ್ನು ಸಾರ್ಥಕಗೊಳಿಸುವ ಹಂಬಲವಿರುವವರಿಗೆ, ಅದರಲ್ಲೂ ವೈದ್ಯಕೀಯ ವೃತ್ತಿಪರರಿಗೆ ಜನ್ಮ ಕೊಟ್ಟ ನೆಲದ ಋಣಭಾರವನ್ನು ಹಗುರಗೊಳಿಸಲು ಇರುವ ಅತ್ಯಂತ ಸೂಕ್ತ ಮಾರ್ಗವು ಉಚಿತ ಶಿಬಿರವಾಗಿದ್ದು ,ಈ ದಿಸೆಯಲ್ಲಿ ಡಾ.ಕೆ.ಎಸ್.ಉಪಾಧ್ಯರು ಮಾದರಿಯಾಗಿದ್ದಾರೆಂದು ಶ್ರೀ ಗುರುನರಸಿಂಹ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಅಭಿಪ್ರಾಯಪಟ್ಟರು.

    ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ಘಟಕವಾದ ಶ್ರೀ ಮದ್ಯೋಗಾನಂದ ಉಚಿತ ಚಿಕಿತ್ಸಾಲಯದ ಆಶ್ರಯದಲ್ಲಿ ಮೂಲತಃ ಕೋಟತಟ್ಟು- ಪಡುಕರೆ, ಪ್ರಕೃತ ಬೆಂಗಳೂರಿನಲ್ಲಿ ಚರ್ಮ ರೋಗ ತಜ್ಞ ಡಾ.ಕೆ.ಎಸ್.ಉಪಾಧ್ಯರಿಂದ ಏರ್ಪಟ್ಟ ತಪಾಸಣೆ ಮತ್ತು ಲಭ್ಯ ಔಷಧ ವಿತರಣಾ ಶಿಬಿರವನ್ನು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
    ಡಾ.ಉಪಾಧ್ಯರ ಪುತ್ರಿಯರಾದ ಡಾ.ಅನನ್ಯ ಮತ್ತು ಶರಣ್ಯ ತಂದೆಯವರೊಂದಿಗೆ ಸಹಕರಿಸಿದರು. ಆಸುಪಾಸಿನ ಊರುಗಳಿಂದ 70ಕ್ಕೂ ಹೆಚ್ಚಿನ ಫಲಾನುಭವಿಗಳು ಶಿಬಿರದ ಪ್ರಯೋಜನವನ್ನು ಪಡೆದರು. ಕೂಟ ಮಹಾ ಜಗತ್ತಿನ ಕೇಂದ್ರಾಧ್ಯಕ್ಷ ಡಾ.ಸತೀಶ ಹಂದೆ ,ದೇವಳದ ಉಪ ಪ್ರಬಂಧಕ ಗಣೇಶ ಭಟ್ಟ ಮತ್ತು ಸಹಾಯಕ ಸಿಬ್ಬಂದಿ ಅಖಿಲೇಶ ಐತಾಳರು ವ್ಯವಸ್ಥೆಯ ಉಸ್ತುವಾರಿಯನ್ನು ವಹಿಸಿದ್ದರು.

  • ಕುಂದಾಪುರ: ಚಾಲೆಂಜ್ ಕ್ರಿಕೆಟ್ ನ ಸಮಾಜ ಸೇವೆ ಶ್ಲಾಘನೀಯ – ವೀಣಾ ಭಾಸ್ಕರ್

    ಕುಂದಾಪುರ: ಚಾಲೆಂಜ್ ಕ್ರಿಕೆಟ್ ನ ಸಮಾಜ ಸೇವೆ ಶ್ಲಾಘನೀಯ – ವೀಣಾ ಭಾಸ್ಕರ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಈಗಾಗಲೇ ತಮ್ಮ ಮೂಲಕ ಗುರುತಿಸಿಕೊಂಡ ಚಾಲೆಂಜ್ ಕ್ರಿಕೆಟ್ ಸಂಸ್ಥೆಯು ಕ್ರೀಡೆಯ ಜೊತೆಗೆ ಅಶಕ್ತರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಕುಂದಾಪುರ ಪುರಸಭಾ ಅಧ್ಯಕ್ಷರಾದ ವೀಣಾ ಭಾಸ್ಕರ್ ಮೆಂಡನ್ ಹೇಳಿದರು.

    ವಡೇರಹೋಬಳಿ ಸರಕಾರಿ ಶಾಲೆಯಲ್ಲಿ ಹಮ್ಮಿಕೊಂಡ ಕುಂದಾಪುರದ ಚಾಲೆಂಜ್ ಕ್ರಿಕೆಟ್ ಸಂಸ್ಥೆ ನಡೆಸಿದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರೀಡಾಕೂಟದಲ್ಲಿ ಉಳಿಕೆಯಾದ ಹಣವನ್ನು 30 ಜನ ಅನಾರೋಗ್ಯ ಪೀಡಿತರಿಗೆ ಹಾಗೂ 25 ಜನ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಸಮಾರಂಭದ ಅಧ್ಯಕ್ಷತೆವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಸಹ ಪ್ರಭಾರಿ ರಾಜೇಶ್ ಕಾವೇರಿ ಮಾತನಾಡಿ, ಅತ್ಯಂತ ವ್ಯವಸ್ಥಿತವಾಗಿ ಕ್ರೀಡಾಕೂಟವನ್ನು ನಡೆಸುವ ಮೂಲಕ ಕ್ರೀಡಾಸಕ್ತರಿಗೂ ಹಾಗೂ ಅದರಿಂದ ಉಳಿಕೆಯಾದ ಹಣವನ್ನು ಸಮಾಜದ ಹಿತ ಕಾಯುವ ಕಾರ್ಯಗಳಿಗೆ ಬಳಕೆ ಮಾಡಿದ ಸಂಸ್ಥೆಯು ಎಲ್ಲರಿಗೂ ಮಾದರಿ ಆಗಿದೆ ಎಂದರು.

    ಇದೆ ಸಂದರ್ಭದಲ್ಲಿ ಹಿರಿಯ ಸಮಾಜಸೇವಕ ನರಸಿಂಹ ಪೂಜಾರಿ, ನಾಗ ಮೆಂಡನ್, ಸಂಜೀವ ಪೂಜಾರಿ, ಯುವ ಆಟಗಾರರಿಗೆ ಸದಾ ಪ್ರೋತ್ಸಾಹ ನೀಡುವ ಕ್ರಿಕೆಟ್ ಆಟಗಾರ ಮನೋಜ್ ನಾಯರ್ ಹಾಗೂ ಸಂಸ್ಥೆ ಸದಸ್ಯರು ಇತ್ತೀಚಿಗೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ್ ರಾಯಪ್ಪನ ಮಠ ಇವರನ್ನು ಸನ್ಮಾನಿಸಲಾಯಿತು.

    ಸಾರ್ವಜನಿಕ ರುದ್ರಭೂಮಿ ಹೊಸಳ ಬಾರ್ಕೂರು ಇದರ ಅಭಿವೃದ್ಧಿ ಕಾರ್ಯಕ್ಕೆ ನೆರವು ನೀಡಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದಾನಿಗಳಾದ ಪ್ರಿಯ ವಸಂತ ಕರ್ಕೇರ ಗುತ್ತಿಗೆದಾರರಾದ ಸಚಿತ್ ಪೈ, ಕುಂದಾಪುರ ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಗಿರೀಶ್ ಕೆ, ಕೆದೂರು ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂಪತ್ ಕುಮಾರ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ರತ್ನ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಧಾಕರ ಮೊಗವೀರ ಉದ್ಯಮಿಗಳಾದ ಪ್ರವೀಣ್ ಗಡಿಯಾರ್, ಸಂಸ್ಥೆಯ ಗೌರವಾಧ್ಯಕ್ಷ ಗಂಗಾಧರ ಶೇರಿಗಾರ್, ಅಧ್ಯಕ್ಷ ಚಂದ್ರ ಪೂಜಾರಿ, ಸಂಸ್ಥೆಯ ಪ್ರಮುಖರಾದ ಶಿವಕುಮಾರ್ ಮೆಂಡನ್, ಭಾಸ್ಕರ್ ಬಿಲ್ಲವ ಮುಂತಾದವರು ಉಪಸ್ಥಿತರಿದ್ದರು. ಹಿರಿಯ ಕ್ರಿಕೆಟಿಗ ಕೆಪಿ ಸತೀಶ್ ಕಾರ್ಯಕ್ರಮ ನಿರ್ವಹಿಸಿ, ಸಂಸ್ಥೆ ಕಾರ್ಯದರ್ಶಿ ನವೀನ್ ಮೆಂಡನ್ ವಂದಿಸಿದರು.

  • ಕೋಟ :ಮಕ್ಕಳನ್ನು ಸುಸಂಸ್ಕೃತರನ್ನಾಗಿಸಲು ಪೋಷಕರ ಪಾತ್ರ ಮಹತ್ವದ್ದು – ಕಲ್ಪನಾ ಭಾಸ್ಕರ್

    ಕೋಟ :ಮಕ್ಕಳನ್ನು ಸುಸಂಸ್ಕೃತರನ್ನಾಗಿಸಲು ಪೋಷಕರ ಪಾತ್ರ ಮಹತ್ವದ್ದು – ಕಲ್ಪನಾ ಭಾಸ್ಕರ್

    ಕುಂದಾಪುರ ಮಿರರ್ ‌ಸುದ್ದಿ…

    ಕೋಟ: ಪ್ರಸ್ತುತ ವಿದ್ಯಾಮಾನದಲ್ಲಿ ಮಕ್ಕಳ ಬಗ್ಗೆ ನಿರ್ಲಕ್ಷ ಹೆಚ್ಚುತ್ತಿದೆ ಈ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಒಳಿತು ಎಂದು ಸಾಮಾಜಿಕ ಕಾರ್ಯಕರ್ತೆ ಕಲ್ಪನಾ ಭಾಸ್ಕರ್ ಹೇಳಿದರು.

    ಕೋಟದ ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಸಹಯೋಗದೊಂದಿಗೆ ಹದಿಹರೆಯದ ಸಮಸ್ಯೆಗಳ ಕುರಿತು ಮಾಹಿತಿ ಕಾರ್ಯಾಗಾರ ಅರಿವು ನಿಮ್ಮಗಿರಲಿ ನೆರವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಹೆಚ್ಚುತ್ತಿರುವ ಮೊಬೈಲ್ ವ್ಯಾಮೂಹ ಅದರಿಂದ ಉದ್ಭವಿಸುತ್ತಿರುವ ಸಮಸ್ಯೆ ಪೋಷಕರಿಗೆ ಕಗ್ಗಂಟ್ಟಾಗಿ ಪರಿಣಮಿಸುತ್ತಿದೆ.ವಿದ್ಯಾರ್ಥಿಗಳು ಶಾಲಾ ಜೀವನಲ್ಲಿ ದುಷ್ಛಟಕ್ಕಿಡಾಗುತ್ತಿದ್ದಾರೆ,ಮಾದಕ ವ್ಯಸವಕ್ಕೆ ಅತಿಹೆಚ್ಚು ಬಲಿಯಾಗುತ್ತಿದ್ದಾರೆ.ಅಶ್ಲೀಲ ವಿಡಿಯೋಗಳಿಂದ ಯುವ ಸಮೂಹ ಲವ್ ಇನ್ನಿತರ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಇನ್ನೊಂದೆಡೆ ನಮ್ಮ ಯುವ ಸಮೂಹದ ಆಹಾರ ಕ್ರಮಗಳ ಬದಲಾವಣೆಯಿಂದ ಅನಾರೋಗ್ಯಕ್ಕಿಡಾಗುತ್ತಿದ್ದಾರೆ.ಈ ರೀತಿಯ ಅವ್ಯವಸ್ಥೆಯಿಂದ ಸಮಾಜದ ದೃಷ್ಠಿ ಬದಲಾಗುತ್ತಿದೆ ಇದಕ್ಕೆ ಪೆÇೀಷಕರೇ ಜಾಗೃತರಾಗಬೇಕು ತಮ್ಮ ಮಕ್ಕಳ ಚಲನವಲನಗಳ ಬಗ್ಗೆ ಆಗಾಗ ಕಣ್ಣಾಯಿಸಿ ಜಾಗೃತರನ್ನಾಗಿಸಿ ಸುಸಂಸ್ಕೃತರನ್ನಾಗಿಸಿ ಎಂದು ಕರೆ ಇತ್ತರು.

    ಕಾರ್ಯಕ್ರಮವನ್ನು ಕೋಟ ಗ್ರಾಮಪಂಚಾಯತ್ ಸದಸ್ಯೆ ಜ್ಯೋತಿ.ಬಿ ಶೆಟ್ಟಿ ಉದ್ಘಾಟಿಸಿದರು.

    ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ವಹಿಸಿದ್ದರು.

    ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ಸ್ವಾಗತಿಸಿ ನಿರೂಪಿಸಿದರು. ಪಂಚವರ್ಣ ಯುವಕ ಮಂಡಲದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.ಪಂಚವರ್ಣ ಮಹಿಳಾ ಮಂಡಲದ ಕಾರ್ಯದರ್ಶಿ ಲಲಿತಾ ಮೂಡುಗಿಳಿಯಾರು ಸಹಕರಿಸಿದರು.

  • ಸಾಸ್ತಾನ- ಅನ್ಯೋನ್ಯತಾ ಆಟೋ ನಿಲ್ದಾಣ ಲೋಕಾರ್ಪಣೆ

    ಸಾಸ್ತಾನ- ಅನ್ಯೋನ್ಯತಾ ಆಟೋ ನಿಲ್ದಾಣ ಲೋಕಾರ್ಪಣೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಅನ್ಯೋನ್ಯತಾ ಆಟೋ ನಿಲ್ದಾಣ ಸಾಸ್ತಾನ ಇದರ ಬಹುದಿನದ ಬೇಡಿಕೆಯಾದ ಆಟೋ ನಿಲ್ದಾಣವನ್ನು ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಅನುದಾನದಡಿ ನಿಲ್ದಾಣ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಅನುದಾನದ ಮೂಲಕ ವ್ಯವಸ್ಥೆ ಕಲ್ಪಿಸಿದ್ದು ಇದನ್ನು ಶನಿವಾರ ಲೋಕಾರ್ಪಣೆಗೊಳಿಸಲಾಯಿತು. ನಿಲ್ದಾಣವನ್ನು ಐರೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಶೆಟ್ಟಿ ಉದ್ಘಾಟನೆಗೊಳಿಸಿದರು.

    ಈ ಸಂದರ್ಭದಲ್ಲಿ ಐರೋಡಿ ಗ್ರಾಮಪಂಚಾಯತ್ ಉಪಾದ್ಯಕ್ಷ ನಟರಾಜ ಗಾಣಿಗ, ಗೂಡ್ಸ್ ವಾಹನ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ,ಕೋಟ ಬಿಜೆಪಿ ಮಹಾಶಕ್ತಿಕೇಂದ್ರ ಅಧ್ಯಕ್ಷ ಸುರೇಶ್ ಕುಂದರ್,ಮುಖಂಡರಾದ ಶಂಕರ್ ಕುಲಾಲ್,ಆಟೋ ಚಾಲಕ ಸಂಘದ ಪ್ರಮುಖರು, ಸ್ಥಳಿಯ ಗಣ್ಯರು ಉಪಸ್ಥಿತರಿದ್ದರು.

  • ಕೋಟ ಪಂಚವರ್ಣ ಸಂಸ್ಥೆಯ ನೇತ್ರತ್ವದಲ್ಲಿ 156ನೇ ಸ್ವಚ್ಛತಾ ಅಭಿಯಾನ

    ಕೋಟ ಪಂಚವರ್ಣ ಸಂಸ್ಥೆಯ ನೇತ್ರತ್ವದಲ್ಲಿ 156ನೇ ಸ್ವಚ್ಛತಾ ಅಭಿಯಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟ ಪಂಚವರ್ಣ ಯುವಕ ಮಂಡಲ ಇದರ ಅಂಗಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಮಣೂರು ಫ್ರೆಂಡ್ಸ್ ,ಹಂದಟ್ಟು ಮಹಿಳಾ ಬಳಗ ಕೋಟ, ಕೋಟ ಗ್ರಾಮಪಂಚಾಯತ್ ಸಹಯೋಗದೊಂದಿಗೆ 156ನೇ ವಾರದ ಪರಿಸರಸ್ನೇಹಿ ಸ್ವಚ್ಛತಾ ಅಭಿಯಾನ ಭಾನುವಾರ ಮಣೂರು ರಾಷ್ಟ್ರೀಯ ಹೆದ್ದಾರಿ ಪ್ಲಾಸ್ಟಿಕ್ ಮುಕ್ತಗೊಳಿಸುವ ಮೂಲಕ ನಡೆಯಿತು.

    ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಕೋಟ ಗ್ರಾಮಪಂಚಾಯತ್ ಮಣೂರು ಭಾಗದ ಸದಸ್ಯ ಶಿವರಾಮ ಶೆಟ್ಟಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ, ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ,ಹಂದಟ್ಟು ಮಹಿಳಾ ಬಳಗದ ಅಧ್ಯಕ್ಷೆ ಪುಷ್ಭಾ ಕೆ ಹಂದಟ್ಟು ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

  • ಕೋಟ- ಶಾಂಭವೀ ಶಾಲೆ ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸದಾನಂದ ಗಿಳಿಯಾರು ಆಯ್ಕೆ

    ಕೋಟ- ಶಾಂಭವೀ ಶಾಲೆ ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸದಾನಂದ ಗಿಳಿಯಾರು ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಗಿಳಿಯಾರು ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸದಾನಂದ ಗಿಳಿಯಾರು ಆಯ್ಕೆಯಾಗಿದ್ದಾರೆ.

    ಉಪಾಧ್ಯಕ್ಷರಾಗಿ ವಿಷ್ಣುಮೂರ್ತಿ ಮಯ್ಯ ಮಣೂರು, ಲಿಯಾಕಾತ್ ಆಲಿ, ಸುಧಾ ಮಣೂರು, ಇಬಾಹಿಂ ಸಾಹೇಬ್, ರಾಜಶೇಖರ ಹಂದೆ, ಕೃಷ್ಣಮೂರ್ತಿ ಉರಾಳ, ಕಾರ್ಯದರ್ಶಿಯಾಗಿ ಸಂತೋಷ್ ಪ್ರಭು,ಜತೆಕಾರ್ಯದರ್ಶಿಯಾಗಿ ಪ್ರಕಾಶ್ ಜೋಗಿ, ರವೀಂದ್ರ ಕೋಟ, ಕೋಶಾಧಿಕಾರಿಯಾಗಿ ಜಿ.ಸತೀಶ್ ಹೆಗ್ಡೆ ಆಯ್ಕೆಯಾಗಿದ್ದಾರೆ. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ರಾಜಾರಾಮ್ ಐತಾಳ್ ಹಾಗೂ ಸಂಚಾಲಕ ಸಚಿನ್ ಕಾರಂತ್ ನಿರ್ದೇಶನದ ಮೇರೆಗೆ ನೂತನಸಮಿತಿ ರಚಿಸಲಾಗಿದೆ.