ವಡ್ಡರ್ಸೆ – ಮಧುವನ ಜುಮ್ಮಾ ಮಸೀದಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕುಂದಾಪುರ ಮಿರರ್ ಸುದ್ದಿ…

ಕೋಟ: ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶ್ರೀನಿವಾಸ ಶೆಟ್ಟಿಯವರ ಅನುದಾನದಿಂದ ನಿರ್ಮಾಣಗೊಂಡ ಮಧುವನ ಜುಮ್ಮಾ ಮಸೀದಿಗೆ ಹೋಗುವ ಕಾಂಕ್ರೀಟ್ ರಸ್ತೆಯನ್ನು ವಡ್ಡರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೇಶ್ ಕಾಂಚನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಾಜಿ ಶಾಸಕರ ಮತ್ತು ಪಂಚಾಯತ್ ಸದಸ್ಯರಾದ ಕೋಟಿ ಪೂಜಾರಿ ಅವರ ಪ್ರಯತ್ನದಿಂದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು, ಮದುವನ ಜಮಾತ್ ನವರಿಗೆ ಇದರಿಂದ ಅನೂಕೂಲವಾಗಿದೆ ಎಂದು ಹೇಳಿದರು.

ತಾಲೂಕು ಪಂಚಾಯತ್ ಸದಸ್ಯರಾದ ಗುಂಡು ಶೆಟ್ಟಿ, ಪಂಚಾಯತ್ ಸದಸ್ಯರಾದ ಕೋಟಿ ಪೂಜಾರಿ, ಮದುವನ ಜುಮ್ಮಾ ಮಸೀದಿಯ ಅಧ್ಯಕ್ಷ ಕಲಂದರ್ ಬ್ಯಾರಿ, ಕಾರ್ಯದರ್ಶಿಗಳಾದ ಇಲ್ಯಾಸ್,ಗುತ್ತಿಗೆದಾರರಾದ ಅಬ್ದುಲ್ಲ, ಮಸೀದಿಯ ಖತೀಬ್ ರಾದ ಜಲಾಲುದ್ದೀನ್ ಶಾಫಿ ಸಅಧಿ ಹಾಜರಿದ್ದರು. ಜೊತೆ ಕಾರ್ಯದರ್ಶಿ ಎಂ. ಕೆ. ಮೊಹಮ್ಮದ್ ಸ್ವಾಗತಿಸಿ ನಿರ್ವಹಿಸಿದರು.

Comments

Leave a Reply

Your email address will not be published. Required fields are marked *

More posts