Author: Team Kundapura Mirror

  • ಕುಂದಾಪುರ :ಪುರಸಭೆ ವ್ಯಾಪ್ತಿಯ ಸ್ಥಳವನ್ನು ರಾಜಕೀಯ ಪಕ್ಷಕ್ಕೆ ಕಚೇರಿಗಾಗಿ ನೀಡುವುದಕ್ಕೆ ಸಿಪಿಐಎಂ ಆಕ್ಷೇಪ – ಪುರಸಭಾ ಆಡಳಿತಾಧಿಕಾರಿಯವರಿಗೆ ಮನವಿ

    ಕುಂದಾಪುರ :ಪುರಸಭೆ ವ್ಯಾಪ್ತಿಯ ಸ್ಥಳವನ್ನು ರಾಜಕೀಯ ಪಕ್ಷಕ್ಕೆ ಕಚೇರಿಗಾಗಿ ನೀಡುವುದಕ್ಕೆ ಸಿಪಿಐಎಂ ಆಕ್ಷೇಪ – ಪುರಸಭಾ ಆಡಳಿತಾಧಿಕಾರಿಯವರಿಗೆ ಮನವಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಬೋರ್ಡ್ ಹೈಸ್ಕೂಲ್ ಪಕ್ಕದಲ್ಲಿರುವ ಪುರಸಭೆಗೆ ಸೇರಿದ ಜಾಗ ಸರ್ವೇ ನಂಬರ್ 141: 1ಸಿ 1ಎ ನೇ ಪ್ರದೇಶದಲ್ಲಿ ಈಗಾಗಲೇ ಲಗೇಜ್ ಟೆಂಪೋ ನಿಲ್ದಾಣವಾಗಿ ಬಳಕೆ ಆಗುತ್ತಿದೆ. ಈ ಜಾಗವನ್ನು ಈ ಹಿಂದೆಯೂ ರಾಜಕೀಯ ಪಕ್ಷಗಳಿಗೆ ನೀಡುವ ಪ್ರಸ್ತಾವನೆ ಇದ್ದು ಈ ಬಗ್ಗೆ ಆಕ್ಷೇಪ ಬಂದಿರುತ್ತದೆ. ಆಕ್ಷೇಪದ ಹಿನ್ನೆಲೆಯಲ್ಲಿ ಕಂದಾಯ ನಿರೀಕ್ಷಕರ ವರದಿಯಂತೆ (ವರದಿ ಲಗತ್ತಿಸಲಾಗಿದೆ) ಈ ಪ್ರದೇಶವು ಪೊರಂಬೋಕು ರಸ್ತೆ ತೋಡು ಆಗಿರುವುದರಿಂದ ರಾಜಕೀಯ ಪಕ್ಷಗಳಿಗೆ ಮಂಜೂರಾತಿಗೆ ಅವಕಾಶ ಇಲ್ಲ ಎಂಬುದಾಗಿ ವರದಿ ನೀಡಿರುತ್ತಾರೆ. ಈ ಹಿಂದೆಯೂ ಈ ಜಾಗವನ್ನು ಲಗ್ಗೇಜು ಆಟೋ ನಿಲ್ದಾಣವಾಗಿ ಗುರುತಿಸಲು ಪುರಸಭೆ 2000 ನೇ ಇಸವಿಯಲ್ಲಿ ಜಿಲ್ಲಾಧಿಕಾರಿ ಒಪ್ಪಿಗೆಗೆ ಸಲ್ಲಿಸಲಾಗಿತ್ತು. ಸಾರ್ವಜನಿಕ ಉಪಯೋಗಕ್ಕೆ ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ಸ್ಥಳ ಇಲ್ಲದಿರುವಾಗ ಇರುವ ಜಾಗವನ್ನು ರಾಜಕೀಯ ಪಕ್ಷದ ಕಚೇರಿಗೆ ನೀಡುವುದಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ವಾದಿ ಕುಂದಾಪುರ ತಾಲೂಕು ಸಮಿತಿಯ ಅಕ್ಷೇಪ ಇದೆ. 2000 ಇಸವಿಯ ಪುರಸಭೆ ತೀರ್ಮಾನದಂತೆ ಲಗೇಜ್ ಆಟೋ ಟೆಂಪೋ ನಿಲ್ದಾಣವಾಗಿಯೇ ಕಾದಿರಿಸಲು ಪಕ್ಷ ಒತ್ತಾಯಿಸುತ್ತದೆ
    ಪುರಸಭೆಯ ಮಾನ್ಯ ಆಡಳಿತ ಅಧಿಕಾರಿಯವರು ತೀರ್ಮಾನವನ್ನು ಮರು ಪರಿಶೀಲಿಸಿ ಸ್ಥಳವನ್ನು ಸಾರ್ವಜನಿಕ ಉಪಯೋಗಕ್ಕೆ ಮೀಸಲಿರಿಸಬೇಕಾಗಿ ಪಕ್ಷ ಒತ್ತಾಯಿಸಿದೆ
    ನಿಯೋಗದಲ್ಲಿ ಸಿಪಿಐಎಂ ಹಿರಿಯ ಮುಖಂಡರು, ಮಾಜಿ ಪುರಸಭಾ ಅಧ್ಯಕ್ಷರು ಆದ ವಿ ನರಸಿಂಹ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಗರ, ಜಿಲ್ಲಾ ಮುಖಂಡರಾದ H ನರಸಿಂಹ, ತಾಲೂಕು ಕಾರ್ಯದರ್ಶಿ ಚಂದ್ರಶೇಖರ್, ಆಟೋ ಸಂಘದ ಮುಖಂಡರಾದ ರಾಜು ದೇವಾಡಿಗ ಉಪಸ್ಥಿತರಿದ್ದರು

  • ಕುಂದಾಪುರದ ಗುಡ್ಡೆಅಂಗಡಿಯಲ್ಲಿ ಎಸ್.ಕೆ.ಎಪ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಆರಂಭ

    ಕುಂದಾಪುರದ ಗುಡ್ಡೆಅಂಗಡಿಯಲ್ಲಿ ಎಸ್.ಕೆ.ಎಪ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಆರಂಭ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಗ್ರಾಮೀಣ ಪ್ರದೇಶದ ಯುವಕ-ಯುವತಿಯರಿಗೆ ತಾಂತ್ರಿಕ ಕೌಶಲ್ಯಗಳನ್ನು ಕಲಿಸಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ, ಕುಂದಾಪುರ ತಾಲೂಕು ಯಡಾಡಿ-ಮತ್ಯಾಡಿಯ ಗುಡ್ಡೆಂಗಡಿಯಲ್ಲಿ ಎಸ್.ಕೆ.ಎಪ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಮೇ 25ರಂದು ಶುಭಾರಂಭಗೊಳ್ಳಲಿದೆ. ಒಂದು ವರ್ಷ ಅವಧಿಯ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಫಿಟ್ಟಿಂಗ್ ಮತ್ತು ವೆಲ್ಡಿಂಗ್, ಮೆಕ್ಯಾನಿಕ್-ರೆಫ್ರಿಜರೇಶನ್, ಏರ್ ಕಂಡೀಷನಿಂಗ್ ಹಾಗೂ ಪ್ಲಂಬಿಂಗ್ ತಾಂತ್ರಿಕ ಕೋರ್ಸುಗಳು ಹಾಗೂ ಮಹಿಳೆಯರಿಗೆ ಫ್ಯಾಶನ್ ಡಿಸೈನಿಂಗ್ ಕೋರ್ಸುಗಳಿಗೆ ಪ್ರವೇಶಾತಿ ಆರಂಭವಾಗಿದೆ ಎಂದು ಎಸ್.ಕೆ.ಎಪ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಮುಖ್ಯಸ್ಥರಾದ ಡಾ. ಜಿ. ರಾಮಕೃಷ್ಣ ಆಚಾರ್ ತಿಳಿಸಿದರು.
    ಅವರು ಸೋಮವಾರ ಗುಡ್ಡೆಅಂಗಡಿಯ ಎಸ್.ಕೆ.ಎಪ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್‍ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
    ಈ ಕೇಂದ್ರವನ್ನು ಡಾ.ಜಿ. ರಾಮಕೃಷ್ಣ ಆಚಾರ್ ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ Sಏಈ ಇಟixeಡಿ Iಟಿಜiಚಿ Pvಣ. ಮೂಡಬಿದ್ರಿ ಸಂಯುಕ್ತವಾಗಿ ಸ್ಥಾಪಿಸಿ ನಿರ್ವಹಿಸಲಿವೆ ಎಂದರು.
    ಇಂದಿನ ಕೈಗಾರಿಕಾ ಕ್ಷೇತ್ರದ ಅಗತ್ಯಗಳನ್ನು ಮನಗಂಡು, ಕೌಶಲ್ಯಯುತ ಮಾನವ ಸಂಪನ್ಮೂಲವನ್ನು ರೂಪಿಸುವುದು ಇದರ ಪ್ರಮುಖ ಗುರಿಯಾಗಿದೆ. ಕೈಗಾರಿಕಾ ತರಬೇತಿಯ ಜೊತೆಗೆ ಸೃಜನಾತ್ಮಕ ವೃತ್ತಿಜೀವನಕ್ಕೂ ಅವಕಾಶ ನೀಡಲಾಗುತ್ತಿದೆ. ಎ.ಐ ಮತ್ತು ಆಟೋಮೇಶನ್ ಯುಗದಲ್ಲಿ ಕೈಗಾರಿಕೆಗಳು ಪದವೀಧರರಿಗಿಂತ ಕೌಶಲ್ಯ ಹೊಂದಿದ ಪರಿಣಿತರನ್ನು ಹೆಚ್ಚಿನ ಪ್ರಮಾಣದಲ್ಲಿ ಹುಡುಕುತ್ತಿವೆ. ಈ ಹಿನ್ನೆಲೆಯಲ್ಲಿ ಒಂದು ವರ್ಷದ ಉದ್ಯೋಗಾಧಾರಿತ ಪ್ರಮಾಣಪತ್ರ ಕೋರ್ಸ್‍ಗಳನ್ನು ಪ್ರಾರಂಭಿಸಿದೆ. ಇಲ್ಲಿ ತರಬೇತಿ ಪಡೆದವರು ದೇಶ ಹಾಗೂ ವಿದೇಶಗಳಲ್ಲಿ ಕೆಲಸ ಮಾಡುವ ಕೌಶಲ್ಯ ಹಾಗೂ ಆರ್ಹತೆ ಪಡೆಯಲಿದ್ದಾರೆ. ತರಬೇತಿ ಪೂರ್ಣಗೊಳಿಸಿದವರಿಗೆ ಮೂಡಬಿದ್ರೆಯಲ್ಲಿ ಎಸ್.ಕೆ.ಎಪ್ ನಲ್ಲಿ ಮೂರು ತಿಂಗಳ ಇಂಟರ್ನಶಿಫ್‍ಗೆ ಆವಕಾಶ ನೀಡಲಾಗುತ್ತದೆ. ಅವರ ಪ್ರಾವಿಣ್ಯತೆಯ ಮೇಲೆ ಉದ್ಯೋಗವಕಾಶವನ್ನು ನೀಡಲಾಗುವುದು ಎಂದರು.
    ಈಗಾಗಲೇ ಕೌಶಲ್ಯಾಧರಿತ ತರಬೇತಿ ಪಡೆದವರಿಗೆ ವ್ಯಾಪಕ ಬೇಡಿಕೆ ಇದೆ. ಇನ್ನೂ ಕೆಲವೇ ವರ್ಷಗಳನ್ನು ವ್ಯಾಪಕವಾಗಿ ಹೆಚ್ಚಳವಾಗಲಿದೆ. ವೃತ್ತಿ ಕೌಶಲ್ಯ ಉಳ್ಳವರಿಗೆ ಬೇರೆ ಬೇರೆ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ಕನಿಷ್ಟ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಪಾಸ್., ಅಥವಾ ಪೇಲ್ ಯಾವುದೇ ವಿದ್ಯಾಭ್ಯಾಸ ಹೊಂದಿರುವವರು ಈ ತರಬೇತಿ ಪಡೆಯಬಹುದು ಎಂದರು.
    ಸಂಸ್ಥೆಯ ತಾಂತ್ರಿಕ ಸಲಹೆಗಾರರಾದ ಬಾಲಕೃಷ್ಣ ಅವರು ಮಾತನಾಡಿ, ಇಂಡಿಯನ್ ಟೆಕ್ನಿಕಲ್ ಎಜುಕೇಶನ್ ಸೊಸೈಟಿ (ಐ.ಟಿ.ಇ.ಎಸ್) ಮುಂಬಯಿ ಇದರ ಮಾನ್ಯತೆ ಇರುವ
    ಮಾನ್ಯತೆ ಇರುವ ಈ ಕೋರ್ಸ್‍ಗೆ ಎಸ್.ಎಸ್.ಎಲ್.ಸಿ ಪಾಸ್ ಅಥವಾ ಫೇಲ್ ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾರ್ಥಿತೆ ಉಳ್ಳವರು ಸರಕಾರ ಸೂಚಿಸಿದ ವಯೋಮಿತಿಯ ಮಾನದಂಡದಲ್ಲಿ ಅರ್ಜಿ ಸಲ್ಲಿಸಬಹುದು. ತರಬೇತಿಯು ತತ್ವಾಧಾರಿತ ಹಾಗೂ ಪ್ರಾಯೋಗಿಕ, ನೈಜ ಕೈಗಾರಿಕಾ ವಾತಾವರಣದಲ್ಲಿ ಕಲಿಕೆ, ಪ್ರತಿ ಬ್ಯಾಚ್‍ಗೆ 20 ವಿದ್ಯಾರ್ಥಿಗಳ ಮಿತಿ, ವೈಯಕ್ತಿಕ ಮಾರ್ಗದರ್ಶನ, ಅನುಭವಿ ಶಿಕ್ಷಕರಿಂದ ತರಬೇತಿ, ಇಂಟರ್ನ್‍ಶಿಪ್ ಮತ್ತು ಕೈಗಾರಿಕಾ ಅನುಭವ ನೀಡಲಾಗುವುದು. ಉತ್ಪಾದನಾ ವಿಧಾನ, ಗುಣಮಟ್ಟ ಪರಿಶೀಲನೆ ಮತ್ತು ಪ್ರಾಜೆಕ್ಟ್ ಅನುಭವ ಪಡೆಯುವ ಅವಕಾಶವೂ ಇರುತ್ತದೆ ಎಂದರು.
    ತರಬೇತಿ ಪಡೆದವರಿಗೆ ಉದ್ಯೋಗ ಸಹಾಯ ಮತ್ತು ಮಾರ್ಗದರ್ಶನ ನೀಡಲಾಗುವುದು. ಭಾರತಾದ್ಯಂತ ಅಲ್ಲದೆ ವಿದೇಶಿ ಉದ್ಯೋಗಾವಕಾಶಗಳ ಮಾಹಿತಿ ನೀಡಲಾಗುವುದು. ಕೈಗಾರಿಕಾ ಒಪ್ಪಂದ ಮಾರ್ಗದರ್ಶನದಂತೆ ಆಸ್ಟ್ರೇಲಿಯಾ ಸೇರಿ ಬೇರೆ ಬೇರೆ ದೇಶಗಳಲ್ಲಿ ಉದ್ಯೋಗವಕಾಶಕ್ಕೆ ಮಾರ್ಗದರ್ಶನ ನೀಡಲಾಗುತ್ತದೆ. ಮಾತ್ರವಲ್ಲದೆ ತರಬೇತಿ ಪಡೆದವರು ಕಡಿಮೆ ಹೂಡಿಕೆಯಲ್ಲಿ ಸ್ವ ಉದ್ಯೋಗ ಆರಂಭಿಸ ಬಹುದು. ಮನೆಯಿಂದಲೇ ಕೆಲಸ ಮಾಡಬಹುದು. ಬ್ಯಾಂಕ್ ಸಾಲ ಸೌಲಭ್ಯಗಳ ಮಾರ್ಗದರ್ಶನ ನೀಡಲಾಗುತ್ತದೆ ಎಂದರು.
    ಫ್ಯಾಷನ್ ಡಿಸೈನಿಂಗ್ ಕಲಿಯುವ ಮಹಿಳೆಯರಿಗೆ ಸ್ಕಿಲ್ಡ್ ಟೈಲರಿಂಗ್ ಮತ್ತು ಫ್ಯಾಷನ್ ಡಿಸೈನಿಂಗ್, ಉಡುಪು ತಯಾರಿಕೆ ಮತ್ತು ಪ್ಯಾಟರ್ನ್ ಮೇಕಿಂಗ್, ಟೆಕ್ಸ್ಟೈಲ್ ಬಟ್ಟೆಗಳ ಮೂಲ ಮಾಹಿತಿ, ಹ್ಯಾಂಡ್ ಮತ್ತು ಮಷಿನ್ ಎಂಬ್ರಾಯ್ಡರಿ, ಫ್ಯಾಷನ್ ಇಲಸ್ಟ್ರೇಷನ್, ಡ್ರೇಪಿಂಗ್ ತಂತ್ರಗಳು, ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಕಲಿಸಲಾಗುವುದು ಎಂದರು.
    ಫ್ಯಾಶನ್ ಡಿಸೈನ್ ಕಲಿತ ಮಹಿಳೆಯರು ಬೂಟಿಕ್ ಮತ್ತು ಫ್ಯಾಷನ್ ಸ್ಟುಡಿಯೋಗಳು, ಗಾರ್ಮೆಂಟ್ ತಯಾರಿಕಾ ಸಂಸ್ಥೆಗಳು, ಟೈಲರಿಂಗ್ ಮತ್ತು ಅಲ್ಟರೇಷನ್ ಕೇಂದ್ರಗಳು, ರಿಟೇಲ್ ಮತ್ತು ಫ್ಯಾಷನ್ ಮಳಿಗೆ ಸ್ಥಾಪಿಸಬಹುದು. ಸ್ವಂತ ಬೂಟಿಕ್ ಆರಂಭಿಸಬಹುದು, ಮನೆಯಿಂದಲೇ ಟೈಲರಿಂಗ್ ಕೆಲಸ ಆರಂಭಿಸಬಹುದು, ಬ್ಲೌಸ್, ಯೂನಿಫಾರ್ಮ್ ಹಾಗೂ ಡಿಸೈನರ್ ಉಡುಪುಗಳ ಕಸ್ಟಮ್ ಆರ್ಡರ್ ಪಡೆಯಬಹುದು, ಆನ್‍ಲೈನ್ ಫ್ಯಾಷನ್ ವೇದಿಕೆಗಳೊಂದಿಗೆ ಕೆಲಸ ಮಾಡುವ ಅವಕಾಶವಿದೆ ಎಂದರು.
    ವಿಶ್ರಾಂತ ಪ್ರಾಂಶುಪಾಲರು, ಸಂಸ್ಥೆಯ ಸಲಹೆಗಾರರಾದ ಪ್ರೊ.ಬಾಲಕೃಷ್ಣ ಶೆಟ್ಟಿ ಮಾತನಾಡಿ, ಖ್ಯಾತ ಉದ್ಯಮಿ ಡಾ.ಜಿ. ರಾಮಕೃಷ್ಣ ಆಚಾರ್ ಅವರು ಗುಡ್ಡೆಅಂಗಡಿಯಲ್ಲಿ ಹುಟ್ಟಿ ಬೆಳೆದವರು. ತಮ್ಮ ಪರಿಶ್ರಮ, ತಾಂತ್ರಿಕ ತರಬೇತಿ ಮತ್ತು ಕೈಗಾರಿಕಾ ಅನುಭವದ ಮೂಲಕ ಜಾಗತಿಕ ಮಟ್ಟದ ಉದ್ಯಮಗಳನ್ನು ನಿರ್ಮಿಸಿರುವ ಅವರ ಜೀವನಯಾತ್ರೆಯೇ ಈ ಕೇಂದ್ರದ ಪ್ರೇರಣೆಯಾಗಿದೆ. ಅವರು ಸಾವಿರಾರು ಜನರಿಗೆ ಉದ್ಯೋಗವಕಾಶವನ್ನು ನೀಡಿದ್ದಾರೆ. ತನ್ನ ಊರಿನ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಲ್ಲಿ ಎಸ್.ಕೆ.ಎಪ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್ ಆರಂಭ ಮಾಡಿದ್ದಾರೆ. ಇದರ ಸದುಪಯೋಗವನ್ನು ಆಸಕ್ತರು ಪಡೆದುಕೊಳ್ಳಬೇಕು ಎಂದರು.

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
    ಎಸ್.ಕೆ.ಎಪ್ ಇಂಡಸ್ಟ್ರಿಯಲ್ ಟ್ರೈನಿಂಗ್ ಸೆಂಟರ್
    ಗುಡ್ಡೆಅಂಗಡಿ, ಯಡ್ಯಾಡಿ-ಮತ್ಯಾಡಿ ಪೆÇೀಸ್ಟ್,
    ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ-576222
    ಮೊಬೈಲ್: 9187492550

  • ಜಂಬೋಸ್ಟಾರ್ ಭದ್ರತಾ ಸಂಸ್ಥೆ ಕುಂದಾಪುರ ಶಾಖೆಯ ಉದ್ಘಾಟನೆ

    ಜಂಬೋಸ್ಟಾರ್ ಭದ್ರತಾ ಸಂಸ್ಥೆ ಕುಂದಾಪುರ ಶಾಖೆಯ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಜಂಬೋಸ್ಟಾರ್ ಭದ್ರತಾ ಮತ್ತು ಸೌಲಭ್ಯ ನಿರ್ವಹಣಾ ಸೇವೆಗಳು (Jumbostar Security & Facility Services Limited) ಕುಂದಾಪುರ ಶಾಖೆ ಹಳೆ ಬಸ್ ನಿಲ್ದಾಣದ ಸಮೀಪ ಎಮ್.ಜೆ. ಕಾಂಪಕ್ಸ್ ನಲ್ಲಿ ಉದ್ಘಾಟನೆಗೊಂಡಿತು.
    ನೂತನ ಶಾಖಾ ಕಛೇರಿಯನ್ನು ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಉದ್ಘಾಟಿಸಿ, ಮಾತನಾಡಿ, ಜಂಬೋಸ್ಟಾರ್ ಭದ್ರತಾ ಸಂಸ್ಥೆ ಪೋಲಿಸ್ ಇಲಾಖೆ ಸಮಾನಂತರವಾಗಿ ಕೆಲವೋಂದು ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ. ದೃಷ್ಟಿ ಯೋಜನೆ ಉಡುಪಿ ಜಿಲ್ಲೆಯಲ್ಲಿ ಯಶ್ವಸಿಯಾಗಿದೆ. ಇಲಾಖೆಗಳ ಜತೆಗೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವ ಅತ್ಯಗತ್ಯ ಎಂದರು. ಮಂಗಳೂರು, ಉಡುಪಿಯಲ್ಲಿ ಜಂಬೋಸ್ಟಾರ್ ಭದ್ರತಾ ಸಂಸ್ಥೆ ಯಶ್ವಸಿಯಾಗಿ ಕಾರ್ಯನಿರ್ವಹಿಸುತ್ತಿದೆ. ಕುಂದಾಪುರದ ಜನತೆ ಇದರ ಸದುಪಯೋಗ ಪಡೆದುಕೊಳ್ಳಲಿ ಎಂದವರು ಹಾರೈಸಿದರು.

    ಉದ್ಯಮಿ ಅಭಿನಂದನ್ ಶೆಟ್ಟಿ, ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ, ಮಂಗಳೂರು ಉಪವಿಭಾಗದ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್., ಕುಂದಾಪುರ ಕಾರ್ಮಿಕ ನಿರೀಕ್ಷಕರು ವಿಜೇಂದ್ರ ಕೆ. ಉಪಸ್ಥಿತರಿದ್ದರು.

    ಜಂಬೋಸ್ಟಾರ್ ಭದ್ರತಾ ಮತ್ತು ಸೌಲಭ್ಯ ನಿರ್ವಹಣಾ ಸೇವೆಗಳು ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ವಿಜಯ ಫೆರ್ನಾಂಡಿಸ್ ಸ್ವಾಗತಿಸಿ, ಪ್ರಾಸ್ತವಿಕ ಮಾತನಾಡಿದರು.

  • ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಟೀಮ್ ಆನಂದದ ಸ್ರಷ್ಠಿ ತಂಡದಿಂದ ಯಶಸ್ವಿ 103ನೇ ವಾರದ ಸ್ವಚ್ಛತಾ ಅಭಿಯಾನ

    ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಟೀಮ್ ಆನಂದದ ಸ್ರಷ್ಠಿ ತಂಡದಿಂದ ಯಶಸ್ವಿ 103ನೇ ವಾರದ ಸ್ವಚ್ಛತಾ ಅಭಿಯಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕುಂದಾಪುರ ರೈಲ್ವೆ ನಿಲ್ದಾಣದ ಸುತ್ತಮುತ್ತ ಭಾನುವಾರ ಬೆಳಿಗ್ಗೆ ಬೃಹತ್ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿ ನಡೆಯಿತು.

    ಟೀಮ್ ಆನಂದದ ಸೃಷ್ಟಿಯ 103ನೇ ವಾರದ ಭಾಗವಾಗಿ, ಕಂದಾವರ ಗ್ರಾಮ ಪಂಚಾಯತ್, ಕ್ಲೀನ್ ಕುಂದಾಪುರ ತಂಡ, ರೈಲ್ವೆ ಪ್ರಯಾಣಿಕರ ಹಿತ ರಕ್ಷಣಾ ವೇದಿಕೆ ಕುಂದಾಪುರ, ಕಂದಾವರ ಗ್ರಾಮ ಪಂಚಾಯತ್, ಮತ್ತು ಸ್ಥಳೀಯರು ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು, ಸ್ವಯಂಸೇವಕರು ಉತ್ಸಾಹದಿಂದ ಭಾಗವಹಿಸಿದರು.
    ಸ್ವಚ್ಛತಾ ಕಾರ್ಯದ ವೇಳೆ ರೈಲ್ವೆ ನಿಲ್ದಾಣದ ಸುತ್ತಮುತ್ತ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಬಾಟಲಿಗಳು ಹಾಗೂ ಇತರ ಕಸಗಳನ್ನು ತೆರವುಗೊಳಿಸಿ ಒಟ್ಟು 86 ಕಸದ ಚೀಲಗಳನ್ನು ಸಂಗ್ರಹಿಸಲಾಯಿತು. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಅಗತ್ಯತೆ ಹಾಗೂ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ಕಾರ್ಯಕ್ರಮದಲ್ಲಿ ಕಂದಾವರ ಪಂಚಾಯತನ ಅಭಿವ್ರದ್ದಿ ಅಧಿಕಾರಿ ಸುನಿಲ್ ಕಾರ್ಯದರ್ಶಿ ಸಂಜೀವ, ಮಹಾಬಲೇಶ,
    ಕ್ಲೀನ ಕುಂದಾಪುರದ ಭರತ್ ಬಂಗೇರ, ರೈಲ್ವೆ ಪ್ರಯಾಣಿಕರ ಹಿತ ರಕ್ಷಣಾ ವೇದಿಕೆಯ ಗಣೇಶ ಪುತ್ರನ್, ಆನಂದದ ಸ್ರಷ್ಠೀ ತಂಡದ ಶ್ರೀನಿವಾಸ್ ಕುಂದರ್ ಭಾಗವಹಿಸಿದರು ಗೀತಾನಂದ ಪೌಂಡೇಶನ್ ನ ರವಿಕಿರಣ ಕೋಟ, ಪ್ರಕಾಶ್ ಮತ್ತು ಮಿಥುನ ಕುಮಾರ್ ಕಾರ್ಯಕ್ರಮ ಸಂಯೋಜಿಸಿದರು
    ಕೊನೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಸಂಘ ಸಂಸ್ಥೆಗಳು, ಸ್ವಯಂಸೇವಕರು ಹಾಗೂ ಸಾರ್ವಜನಿಕರಿಗೆ ಸಂಘಟಕರ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು.

  • ಪಂಚವರ್ಣದ 301ನೇ ಭಾನುವಾರ ಕೋಡಿ ಬೀಚ್ ರೋಡ್ ಕ್ಲಿನಿಂಗ್

    ಪಂಚವರ್ಣದ 301ನೇ ಭಾನುವಾರ ಕೋಡಿ ಬೀಚ್ ರೋಡ್ ಕ್ಲಿನಿಂಗ್

    ರಸ್ತೆ ಬದಿ ಕಸ ಎಸೆಯುವರ ಮೇಲೆ ಕಠಿಣ ಕ್ರಮ ಅಗತ್ಯ – ಕೃಷ್ಣ ಪೂಜಾರಿ
    ಕುಂದಾಪುರ ಮಿರರ್ ಸುದ್ದಿ…
    ಕೋಟ: ಸ್ವಚ್ಛತೆ ಬಗ್ಗೆ ಪ್ರತಿಯೊರ್ವರು ಜಾಗೃತರಾಗಬೇಕು ಗಲ್ಲಿ ಗಲ್ಲಿಗಳಲ್ಲಿ‌ಕಸ ಎಸೆಯುವವರಿಗೆ ಕಠಿಣ ಕ್ರಮ ಅಗತ್ಯ ಎಂದು ಉಡುಪಿ ಎ.ಪಿ ಎಂಸಿ ಮಾಜಿ ಉಪಾಧ್ಯಕ್ಷ ಕೃಷ್ಣ ಪೂಜಾರಿ.ಪಿ ಹೇಳಿದರು.
    ಭಾನುವಾರ ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ಮಣೂರು ಫ್ರೆಂಡ್ಸ್  ಇವರುಗಳ ಸಹಯೋಗದೊಂದಿಗೆ ಸಾಲಿಗ್ರಾಮ ಪಟ್ಟಣಪಂಚಾಯತ್, ಕೋಡಿ ಗ್ರಾ.ಪಂ ಸಹಯೋಗದೊಂದಿಗೆ 301ನೇ ವಾರದ ಪರಿಸರಸ್ನೇಹಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವ ಹೊಣೆಗಾರಿಕೆ ನಮ್ಮ ಮೇಲಿದೆ ಆದರೆ ವಿದ್ಯಾವಂತರೇ ಕಸ ಎಸೆಯುವ ಮನಸ್ಥಿತಿ ಸೃಷ್ಠಿಸಿಕೊಂಡಿರುವುದು ಬೇಸರದ ಸಂಗತಿ ಎಂದು ಖೇಧ ವ್ಯಕ್ತಪಡಿಸಿದರು.
    ಈ ಸಂದರ್ಭದಲ್ಲಿ ಸುಮಾರು 30ಕ್ಕೂ ಅಧಿಕ ಚೀಲ 400ಕೆಜಿ ಯಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಬೀಚ್ ರಸ್ತೆಯಿಂದ ಮುಕ್ತಗೊಳಿಸಲಾಯಿತು.
    ಪಂಚವರ್ಣ ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಉಪಾಧ್ಯಕ್ಷ ದಿನೇಶ್ ಆಚಾರ್, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
  • ಮೇ 13ರಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ನೂತನ ಕಚೇರಿ ಕಟ್ಟಡದ ಶಂಕುಸ್ಥಾಪನೆ

    ಮೇ 13ರಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ನೂತನ ಕಚೇರಿ ಕಟ್ಟಡದ ಶಂಕುಸ್ಥಾಪನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ : ಕುಂದಾಪುರ ಬ್ಲಾಕ್ ಕಾಂಗ್ರೆಸ್ ನೂತನ ಕಚೇರಿ ಕಟ್ಟಡದ ಶಂಕುಸ್ಥಾಪನೆ ಮೇ 13 ರಂದು ಬೆಳಿಗ್ಗೆ 11-30 ಘಂಟೆಗೆ ಕುಂದಾಪುರ ಜ್ಯೂನಿಯರ್ ಕಾಲೇಜು ಹತ್ತಿರದ ಪಕ್ಷದ ನಿವೇಶನದಲ್ಲಿ ನೆಡೆಯಲಿದೆ.

    ಎನ್ . ಎಸ್ . ಬೋಸರಾಜು , ಸಚಿವರು ಸಣ್ಣ ನೀರಾವರಿ , ಮಾಹಿತಿ ಮತ್ತು ತಂತ್ರಜ್ಞಾನ ಹಾಗೂ ಸಭಾ ನಾಯಕರು ವಿದಾನ ಪರಿಷತ್ ಇವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ .

    ವಿಧಾನ ಪರಿಷತ್ ಮಾಜಿ ಸಭಾಪತಿ ಕೆ . ಪ್ರತಾಪಚಂದ್ರ ಶೆಟ್ಟಿಯವರ ಗೌರವ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಾಗಿ ಶ್ರೀ ಮಂಜುನಾಥ ಭಂಡಾರಿ ಕಾರ್ಯಾಧ್ಯಕ್ಷರು ಕೆಪಿಸಿಸಿ , ಶ್ರೀ ವಿನಯ ಕುಮಾರ ಸೊರಕೆ ಅಧ್ಯಕ್ಷರು ಪ್ರಚಾರ ಸಮಿತಿ , ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು , ಶೀ ಅಶೋಕ ಕುಮಾರ ಕೊಡವೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು , ಶ್ರೀ ಐವನ್ ಡಿಸೋಜಾ ಕೆಪಿಸಿಸಿ ಉಪಾಧ್ಯಕ್ಷರು , ಶ್ರೀ ಕೆ . ಜಯಪ್ರಕಾಶ ಹೆಗ್ಡೆ ಮಾಜಿ ಸಚಿವರು ಶ್ರೀ ಎಂ. ಎ . ಗಫೂರ ಉಪಾದಕ್ಷರು ಕೆಪಿಸಿಸಿ , ಶ್ರೀ ಕಿಶನ್ ಹೆಗ್ಡೆ ಜಿಲ್ಲಾ ಕಾರ್ಯಾದ್ಯಕ್ಷರು ಶ್ರೀ ದಿನೇಶ್ ಹೆಗ್ದೆ ಮೊಳಹಳ್ಳಿ ಕಾಂಗ್ರೆಸ್ ಮುಖಂಡರು , ಶ್ರೀ ರಾಜು ಪೂಜಾರಿಕಾಂಗ್ರೆಸ್ ಮುಖಂಡರು , ಶ್ರೀ ಶಿವರಾಮ ಶೆಟ್ಟಿ ಮಲ್ಯಾಡಿ ಕೆಪಿಸಿಸಿ ಸದಸ್ಯರು , ಶ್ರೀ ಶಂಕರ ಕುಂದರ ಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ .

    ಈ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು , ಪಧಾದಿಕಾರಿಗಳು , ಕಾರ್ಯಕರ್ತರು , ಪಕ್ಷವ ಹಿತೈಷಿಗಳು ಉಪಸ್ಥಿತರಿರಬೇಕಾಗಿ ವಿನಂತಿ -ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ ಕುಂದಾಪುರ

  • ನಿರಾಮಯ ಸೊಸೈಟಿ ವಂಡ್ಸೆ: ಆಡಳಿತ ಮತ್ತು ಕಾರ್ಯನಿರ್ವಾಹಕ ಮಂಡಳಿ ಸಭೆ: ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಸನ್ಮಾನ

    ನಿರಾಮಯ ಸೊಸೈಟಿ ವಂಡ್ಸೆ: ಆಡಳಿತ ಮತ್ತು ಕಾರ್ಯನಿರ್ವಾಹಕ ಮಂಡಳಿ ಸಭೆ: ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ನಿರಾಮಯ ಸೊಸೈಟಿ ವಂಡ್ಸೆ ಇದರ ಆಡಳಿತ ಮತ್ತು ಕಾರ್ಯನಿರ್ವಾಹಕ ಮಂಡಳಿ ಸಭೆಯು ಮೇ 7ರಂದು ಸೊಸೈಟಿಯ ಕಚೇರಿಯಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರತೀಕ್ ಬಾಯಲ್ ಇವರ ಉಪಸ್ಥಿತಿಯಲ್ಲಿ ನಿರಾಮಯ ಸೊಸೈಟಿ ಅಧ್ಯಕ್ಷರಾದ ಉದಯ್ ಕುಮಾರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
    ಸೊಸೈಟಿ ವತಿಯಿಂದ ಇನ್ನಷ್ಟು ವಿವಿಧ ರೀತಿಯ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವ ಬಗ್ಗೆ ಹಾಗೂ ಸಂಪನ್ಮೂಲ ಕ್ರೋಡಿಕರಣದ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ನಿರಾಮಯ ಸೊಸೈಟಿಯ ಬೆಳವಣಿಗೆ ಹಿಂದಿನ ಮಹಾಶಕ್ತಿ ಹಾಗೂ ವಂಡ್ಸೆ ಗ್ರಾಮ ಪಂಚಾಯತ್ ಗೆ ಆರೋಗ್ಯಕರ ಗ್ರಾಮ ಪಂಚಾಯತ್ ವಿಭಾಗದಲ್ಲಿ ನ್ಯಾಶನಲ್ ಪಂಚಾಯತ್ ಅವಾರ್ಡ್ ಗೆ ಆಯ್ಕೆಯಾಗುವ ಮೂಲಕ ರೂ 75 ಲಕ್ಷ ಪ್ರಶಸ್ತಿ ಮೊತ್ತ ದೊರೆಯುವಲ್ಲಿ ನಿರಂತರ ಮಾರ್ಗದರ್ಶನ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅವರನ್ನು ಸನ್ಮಾನಿಸಲಾಯಿತು.
    ಈ ಸಂದರ್ಭದಲ್ಲಿ ನಿರಾಮಯ ಸೊಸೈಟಿಯ ಗೌರವ ಸದಸ್ಯರಾದ ಡಾ. ನಾಗಭೂಷಣ ಉಡುಪ, ಡಾ. ಅತುಲ್ ಕುಮಾರ್ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಪ್ರಶಾಂತ್ ಭಟ್, ಡಾ. ಲತಾ ನಾಯಕ್, ಡಾ. ಅಂಜಲಿ ರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ್, ಕುಂದಾಪುರ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ದೀಪಾ, ಹಕ್ಲಾಡಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ರಮೇಶ್ ಕುಲಾಲ್, ಆಲೂರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ನಾರಾಯಣ ಶೆಟ್ಟಿ, ನಿರಾಮಯ ಸೊಸೈಟಿಯ ಕಾರ್ಯದರ್ಶಿ ಸುದರ್ಶನ ಶೆಟ್ಟಿ ಕೆರಾಡಿ, ಕೋಶಾಧಿಕಾರಿ ಆಶಾ ಆಚಾರ್ಯ ಇಡೂರು, ಚಿತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ, ಆಲೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಜೇಶ್ ದೇವಾಡಿಗ, ಹಕ್ಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜ್ಯೋತಿ, ವಂಡ್ಸೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಗೋವರ್ಧನ್ ಜೋಗಿ, ಹಕ್ಲಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಸುಭಾಷ್ ಶೆಟ್ಟಿ, ಇಡೂರು ಕುಂಜ್ಞಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಭಾವನ, ರೂಪ ಗೋಪಿ, ಗಣೇಶ ಹೆಬ್ಟಾರ್, ಚಂದ್ರ ಬಿಲ್ಲವ, ಸುಶೀಲಾ, ಪಂಚಾಯತ್ ಕಾರ್ಯದರ್ಶಿಗಳಾದ ಜಯ, ಸುರೇಶ್, ಮಿಥುನ್ ಹೆಮ್ಮಾಡಿ ಮುಂತಾದವರು ಉಪಸ್ಥಿತರಿದ್ದರು.

  • ತ್ರಾಸಿಯಲ್ಲಿ ವಿ2 ಟೂರ್ಸ್ ಅಂಡ್ ಟ್ರಾವೆಲ್ಸ್ ಶುಭಾರಂಭ

    ತ್ರಾಸಿಯಲ್ಲಿ ವಿ2 ಟೂರ್ಸ್ ಅಂಡ್ ಟ್ರಾವೆಲ್ಸ್ ಶುಭಾರಂಭ

    ಕುಂದಾಪುರ ಮಿರರ್ ಸುದ್ದಿ…

    ತ್ರಾಸಿ : ಇಲ್ಲಿನ ಹೋಲಿ ಕ್ರಾಸ್ ಸಮೀಪ ವೀಣಾ ಮೋಂತೆರೋ ಮತ್ತು ವಿನೀತಾ ರೆಬೆರೋ ಪಾಲುದಾರಿಕೆಯಲ್ಲಿ ವಿ2 ಟೂರ್ಸ್ ಅಂಡ್ ಟ್ರಾವೆಲ್ಸ್ ಶುಭಾರಂಭಗೊಂಡಿತು.

    ತ್ರಾಸಿ ಹೋಲಿ ಕ್ರಾಸ ಚರ್ಚಿನ ಧರ್ಮಗುರುಗಳಾದ ಅತೀ ವಂದನೀಯ ಫಾ| ರೋಜಾರಿಯೋ ಫೆರ್ನಾಂಡೀಸ್ ನೂತನ ಕಛೇರಿಯನ್ನು ಆಶೀರ್ವರ್ದಿಸಿ ಶುಭ ಹಾರೈಸಿದರು.

    ನೂತನ ಕಛೇರಿಯನ್ನು ಹಿರಿಯರಾದ ಮೇರಿ ರೆಬೆರೋ ಉದ್ಘಾಟಿಸಿದರು.

  • ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಕೊಕ್ಕರ್ಣೆ ಇದರ ಪ್ರಧಾನ ಕಛೇರಿ ಮತ್ತು ಕೊಕ್ಕರ್ಣೆ ಶಾಖೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ

    ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಕೊಕ್ಕರ್ಣೆ ಇದರ ಪ್ರಧಾನ ಕಛೇರಿ ಮತ್ತು ಕೊಕ್ಕರ್ಣೆ ಶಾಖೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ

    ಕುಂದಾಪುರ ಮಿರರ್ ಸುದ್ದಿ…

    ಕೊಕ್ಕರ್ಣೆ :ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ನಿಯಮಿತ ಕೊಕ್ಕರ್ಣೆ ಇದರ ಪ್ರಧಾನ ಕಛೇರಿ ಮತ್ತು ಕೊಕ್ಕರ್ಣೆ ಶಾಖೆಯ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ವೇ.ಮೂ.ಬಿ ಸೀತಾರಾಮ ಅಡಿಗ ಹಲುವಳ್ಳಿಯವರ ಪುರೋಹಿತ್ಯದಲ್ಲಿ ಮೇ. 08ಶುಕ್ರವಾರದಂದು ನೆರವೇರಿತು.

    ಹಿರಿಯ ಸದಸ್ಯರಾದ ಗಿರೀಶ ಉಡುಪ ಕೋಟಂಬೈಲು, ಹೀರಾ ಶ್ರೀನಿವಾಸ ಹೆಗ್ಡೆ ಕೊಕ್ಕರ್ಣೆ, ಅನಂತಯ್ಯ ಶ್ಯಾನುಭಾಗ್ ಕೊಕ್ಕರ್ಣೆ, ಸಿ.ಎ ರಘುರಾಮ್ ಎಮ್.ಹೆಚ್ “ಪಂಚಾಕ್ಷರಿ ಕ್ಯಾಶ್ಯೂಸ್” ಬೈದೆಬೆಟ್ಟು, ಆನಂದ ನಾಯ್ಕ ಗೌರಿಬೆಟ್ಟು ಕೊಕ್ಕರ್ಣೆ, ಆನಂದ ನಾಯ್ಕ ಸಂತೆಕಟ್ಟೆ, ಕೃಷ್ಣ ಪೂಜಾರಿ ಮಾರಾಳಿ ಗರಡಿ ಮತ್ತು ಕೃಷ್ಣ ಕುಲಾಲ ಆವರ್ಸೆ ಇವರು ಶಿಲಾನ್ಯಾಸಗೈದರು. ಸಂಘದ ಅಧ್ಯಕ್ಷರಾದ ಶ್ರೀ ಬಿ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ ಕರ್ಜೆ ಹಾಗೂ ಉಪಾಧ್ಯಕ್ಷರಾದ ಶ್ರೀ ಪ್ರವೀಣ್ ಶೆಟ್ಟಿ ವಂಡಾರು, ಎಲ್ಲಾ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿಗಳು, ಸದಸ್ಯರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

  • ತೆರೆ ಮೇಲೆ ರಾಜ್‌ಕುಮಾರ್‌, ಅಂತರಂಗದಲ್ಲಿ ಮುತ್ತುರಾಜ್‌ ಇದ್ದರು: ಆರ್‌. ಮಂಜುನಾಥ್‌ ಚವಾಣ್‌  ನಾದಯೋಗಿ ಡಾ. ರಾಜಕುಮಾರ್ ಪುಸ್ತಕ ಬಿಡುಗಡೆ

    ತೆರೆ ಮೇಲೆ ರಾಜ್‌ಕುಮಾರ್‌, ಅಂತರಂಗದಲ್ಲಿ ಮುತ್ತುರಾಜ್‌ ಇದ್ದರು: ಆರ್‌. ಮಂಜುನಾಥ್‌ ಚವಾಣ್‌ ನಾದಯೋಗಿ ಡಾ. ರಾಜಕುಮಾರ್ ಪುಸ್ತಕ ಬಿಡುಗಡೆ

    ರಾಘವೇಂದ್ರ ಅಡಿಗ ಎಚ್ಚೆನ್.

    ಬೆಂಗಳೂರು :ನಾದಯೋಗಿ ಡಾ. ರಾಜಕುಮಾರ್ ಅವರ ಜೀವನ, ವ್ಯಕ್ತಿತ್ವ ಹಾಗೂ ಒಡನಾಟವನ್ನು ಒಳಗೊಂಡಿರುವ “ನಾದಯೋಗಿ” ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಇತ್ತೀಚೆಗೆ ಬೆಂಗಳೂರಿನ ಚಾಮರಾಜಪೇಟೆಯ ಡಾ. ರಾಜ್‌ಕುಮಾರ್‌ ಭವನದಲ್ಲಿ ನಡೆಯಿತು.
    ಡಾ||ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮಕುಮಾರ್ ಪುಸ್ತಕವನ್ನು ಅನಾವರಣ ಮಾಡಿದರು. ಡಾ||ರಾಜಕುಮಾರ್ ಸಹೋದರ ವರದಪ್ಪ ಅವರ ಪುತ್ರಿ ಡಾ||ಲತಾ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಲಹರಿ ಸಂಸ್ಥೆಯ ಮನೋಹರ ನಾಯ್ಡು, ಲಹರಿ ವೇಲು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾವೇರಿ ಕನ್ನಡ ಸಂಘ ಧಾರ್ ಎಸ್ ಸಲಾಂ ತಾಂಜಾನಿಯಾ ಪೂರ್ವ ಆಫ್ರಿಕಾ ಪ್ರತಿನಿಧಿ ಗೌಡ ಅವರು ಈ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು .
    ಕಾರ್ಯಕ್ರಮದಲ್ಲಿ ಮಾತನಾಡಿದ ಆರ್‌. ಮಂಜುನಾಥ್‌ ಚವಾಣ್‌, “1990ರಲ್ಲಿ ಡಾ. ರಾಜ್‌ಕುಮಾರ್‌ ಅವರನ್ನು ಭೇಟಿ ಮಾಡಿದಾಗ, ಅವರೊಳಗೆ ‘ಮುತ್ತುರಾಜ್‌’ ಎಂಬ ಸರಳ ವ್ಯಕ್ತಿತ್ವವನ್ನು ಕಂಡೆ. ತೆರೆ ಮೇಲೆ ರಾಜ್‌ಕುಮಾರ್‌ ಇದ್ದರೂ, ಅಂತರಂಗದಲ್ಲಿ ಮುತ್ತುರಾಜ್‌ ಬದುಕುತ್ತಿದ್ದರು,” ಎಂದು ಸ್ಮರಿಸಿದರು.
    “ನಾದಯೋಗಿ” ಪುಸ್ತಕದಲ್ಲಿ 25 ಅಧ್ಯಾಯಗಳ ಮೂಲಕ ಡಾ. ರಾಜ್‌ಕುಮಾರ್‌ ಅವರ ಜೀವನದ ಅನೇಕ ನೆನಪುಗಳು, ಅನುಭವಗಳು ಮತ್ತು ವ್ಯಕ್ತಿತ್ವದ ವೈಶಿಷ್ಟ್ಯಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.
    ಚಿತ್ರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ಮಾತನಾಡಿ, “ಡಾ. ರಾಜ್‌ಕುಮಾರ್‌ ಅವರು ತಮ್ಮ ಸಿನಿ ಪಯಣದ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ಅವರ ಮನಸ್ಸಿನಲ್ಲಿ ನನಗೆ ಒಂದು ಪುಟ್ಟ ಜಾಗ ಸಿಕ್ಕಿದ್ದು ನನ್ನ ಜೀವನದ ದೊಡ್ಡ ಸಾಧನೆ,” ಎಂದು ಭಾವುಕರಾದರು.
    “ರಾಜ್‌ಕುಮಾರ್‌ ಅವರಂತಹ ಸಾಧಕರಿಗೆ ಸರ್ಕಾರ ಜಾಗ ನೀಡುವುದು ಸಾಮಾನ್ಯ ವಿಷಯವಲ್ಲ. ಸಾಧನೆ ಮಾಡಿದಕ್ಕೆ ಜನರು ಇಂದಿಗೂ ಸ್ಮರಿಸುತ್ತಾರೆ. ಅಣ್ಣಾವ್ರು ನೀಡಿದ ಸ್ಪೂರ್ತಿದಾಯಕ ಮಾತುಗಳೇ ಇಂದಿಗೂ ಅನೇಕ ರಾಜ್ಯಗಳು ಮತ್ತು ದೇಶಗಳಿಂದ ಅಭಿಮಾನಿಗಳನ್ನು ಸೆಳೆಯುತ್ತಿವೆ. ಜನರು ಇಂದಿಗೂ ಸಹ‌ ಅಣ್ಣವ್ರ ಪ್ರತಿಷ್ಠಾನಕ್ಕೆ ದೇವಸ್ಥಾನಕ್ಕೆ ಬಂದಂತೆ ಅನೇಕ ರಾಜ್ಯ ದೇಶಗಳಿಂದ ಭೇಟಿ ನೀಡುತ್ತಾರೆ,” ಎಂದರು.
    ಪುಸ್ತಕ ಅನಾವರಣ ಮಾಡಿ ಮಾತನಾಡಿದ ಡಾ||ರಾಜಕುಮಾರ್ ಪುತ್ರಿ ಪೂರ್ಣಿಮಾ ರಾಮಕುಮಾರ್, ನಮ್ಮ ತಂದೆಗೆ ಸಂಗೀತವೆಂದರೆ ಪ್ರಾಣ. ಗಜಲ್ ಬಹಳ ಇಷ್ಟ. ನಮ್ಮ ಮನೆಯಲ್ಲಿ ಎಲ್ಲರೂ ಸಂಗೀತ ಪ್ರೇಮಿಗಳೆ. ನಮ್ಮ ಕುಟುಂಬಕ್ಕೆ ಆತ್ಮೀಯರಾದ ಆರ್ ಮಂಜುನಾಥ್ ಹಾಗೂ ಸೌಮ್ಯ ಮಂಜುನಾಥ್ ಅವರು ಅಪ್ಪಾಜಿ ಅವರಿಗಿದ್ದ ಸಂಗೀತದ ಜ್ಞಾನವನ್ನು ಪರಿಚಯಿಸುವ ಈ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕವನ್ನು ಅನಾವರಣ ಮಾಡಿದ್ದು ಬಹಳ ಖುಷಿಯಾಗಿದೆ ಎಂದರು.
    ನಾದಯೋಗಿ ಕನ್ನಡಕ್ಕೆ ಅನುವಾದ ಮಾಡಿದ ಸಂಶೋಧಕಿ ಸೌಮ್ಯ ಮಂಜುನಾಥ್‌ ಮಾತನಾಡಿ, “ಡಾ. ರಾಜ್‌ಕುಮಾರ್‌ ಅವರ ಸರಳತೆ ಅಚ್ಚರಿಯಾಯಕದ್ದು. 1990ರಲ್ಲಿ ನಾಡೋಜ ಪ್ರಶಸ್ತಿ ಪಡೆದ ಸಂದರ್ಭದಲ್ಲೂ ಅವರು ‘ನಾನು ಬಣ್ಣ ಹಚ್ಚಿಕೊಂಡು ನಾಟಕ ಮಾಡುವವನು, ನಿಮ್ಮಷ್ಟೂ ಓದಿಲ್ಲ’ ಎಂದು ವಿನಯದಿಂದ ಮಾತನಾಡಿದ್ದರು,” ಅಂತಹ ಸರಳ ವ್ಯಕ್ತಿತ್ವ ಇನ್ನೂ ನಾವೇಲ್ಲಾ ಯಾರು ಎಂದು ನೆನಪಿಸಿಕೊಂಡರು.