Category: ಸುದ್ದಿ

  • ಕುಂದಾಪುರ: ಕೊಲ್ಲೂರು ಆಡಳಿತಾಧಿಕಾರಿಯಾಗಿ ಕುಂದಾಪುರ ಎಸಿ ರಶ್ಮಿ ನೇಮಕ

    ಕುಂದಾಪುರ: ಕೊಲ್ಲೂರು ಆಡಳಿತಾಧಿಕಾರಿಯಾಗಿ ಕುಂದಾಪುರ ಎಸಿ ರಶ್ಮಿ ನೇಮಕ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನೂತನ ಆಡಳಿತ ಅಧಿಕಾರಿಯಾಗಿ ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಎಸ್ಆರ್ ಅಧಿಕಾರ ಸ್ವೀಕರಿಸಿದ್ದಾರೆ. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ನೂತನ ಆಡಳಿತ ಅಧಿಕಾರಿ ರಶ್ಮಿಯವರಿಗೆ ಅಧಿಕಾರ ಹಸ್ತಾಂತರಿಸಿ ಸನ್ಮಾನಿಸಲಾಯಿತು.

    ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅವಧಿ ಮುಕ್ತಾಯಗೊಂಡಿದ್ದು ಈ ಹಿಂದೆ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿದ್ದ ಕೆರಾಡಿ ಚಂದ್ರಶೇಖರ್ ಶೆಟ್ಟಿ ಅವರ ಅಧಿಕಾರವನ್ನು ಈಗ ಸರ್ಕಾರ ಮತ್ತು ಮುಜರಾಯಿ ಇಲಾಖೆ ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್ಆರ್ ಅವರಿಗೆ ವಹಿಸಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಕೆರಾಡಿ ಚಂದ್ರಶೇಖರ ಶೆಟ್ಟಿ, ಕೊಲ್ಲೂರು ದೇವಸ್ಥಾನದ ಹಿಂದಿನ ಆಡಳಿತ ಸಮಿತಿ ಆರು ತಿಂಗಳ ತಡವಾಗಿ ರಚನೆಗೊಂಡಿದ್ದು ಅದರ ಪ್ರಕಾರ ವ್ಯವಸ್ಥಾಪನ ಸಮಿತಿಯ ಅವಧಿಯನ್ನು ಇನ್ನು ಆರು ತಿಂಗಳ ಅವಧಿಗೆ ಸರ್ಕಾರ ವಿಸ್ತರಿಸಬೇಕಿತ್ತು. ಗೋಳಿಹೊಳೆಯಲ್ಲಿ ಗೋಶಾಲೆ ನಿರ್ಮಾಣಕ್ಕೆ ಭೂಮಿ ಮಂಜೂರಾಗಿದ್ದು ಅದನ್ನು ವ್ಯವಸ್ಥಿತವಾಗಿ ನಿರ್ಮಾಣಗೊಳಿಸಲು ಅವಕಾಶ ಸಿಕ್ಕಿದಂತಾಗುತ್ತಿತ್ತು. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾರೆ.

  • ಕೋಟ – ಶಾಂತಿಮತೀ ಪ್ರತಿಷ್ಠಾನದ ದಶಮಾನೋತ್ಸವ ಸಂಭ್ರಮ

    ಕೋಟ – ಶಾಂತಿಮತೀ ಪ್ರತಿಷ್ಠಾನದ ದಶಮಾನೋತ್ಸವ ಸಂಭ್ರಮ

    ಕೋಟಿ ಗಾಯತ್ರೀ ಮಹಾಯಾಗ ಮತ್ತು ಲಕ್ಷ ಲಲಿತಾ ಸಹಸ್ರನಾಮ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಪುರಾಣ ಪ್ರಸಿದ್ಧ ಕೋಟದ ಮಹತೋಭಾರ ಹಿರೇ ಮಹಾಲಿಂಗೇಶ್ವರ ಸನ್ನಿದಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಶಾಂತಿಮತೀ ಪ್ರತಿಷ್ಠಾನ ಹಂದಾಡಿ ಬ್ರಹ್ಮಾವರ ಇವರು ದಶಮಾನೋತ್ಸವದ ಅಂಗವಾಗಿ ಹಮ್ಮಿಕೊಂಡ ಕೋಟಿ ಗಾಯತ್ರೀ ಮಹಾಯಾಗ ಮತ್ತು ಲಕ್ಷ ಲಲಿತಾ ಸಹಸ್ರನಾಮ ಧಾರ್ಮಿಕ ಕಾರ್ಯಕ್ರಮ ಗುರುವಾರ ವಿದ್ಯುಕ್ತವಾಗಿ ಚಾಲನೆಗೊಂಡಿತು.

    ನೂರಾರು ಬ್ರಹ್ಮ ಸಮುದಾಯ ಹಾಗೂ ನೆರದಿದ್ದ ಭಕ್ತಮಹಾಶಯರ ನಡುವೆ ದೇವತಾ ಪ್ರಾರ್ಥನೆಯೊಂದಿಗೆ ದ್ವಾದಶ ನಾಳೀಕೆರ, ಮಹಾಗಣಪತಿ ಹೋಮ,ನವಗ್ರಹ ಹೋಮ,ಮುಲ್ಲೆ ಮಹಾಗಣಪತಿ ದೇವರಿಗೆ ರಂಗಪೂಜೆ, ದುರ್ಗಾಪರಮೇಶ್ವರಿಗೆ ದುರ್ಗಾಹೋಮ ಮಹಾಲಿಂಗೇಶ್ವರ ದೇವರಿಗೆ ಶತರುದ್ರಾಭಿಷೇಕ ಮಹಾಪೂಜೆ ಪ್ರಸಾದ ವಿತರಣೆ , ಸಂಜೆ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗಲದಿಂದ ಸ್ತಬ್ದ ಚಿತ್ರಗಳೊಂದಿಗೆ ಕುಣಿತ ಭಜನೆ, ಡೊಳ್ಳು ಕುಣಿತ, ಚಂಡೆವಾದ್ಯಗಳೊಂದಿಗೆ ಗಾಯಿತ್ರೀ ದೇವಿಯ ಪುರಮೆರವಣಿಗೆ ಶೋಭಾಯಾತ್ರೆ ವಿಶೇಷವಾಗಿ ಗಮನ ಸೆಳೆಯಿತು. ಇದಾದ ನಂತರ ಯಾಗಶಾಲೆ ಪ್ರವೇಶ ಮಂಟಪ ಸಂಸ್ಕಾರ,ಅರಣಿ ಮಥನ ಪೂರ್ವಕ ಅಗ್ನಿ ಜನನಹೋಮ, ಯಂತ್ರಾರಾಧನೆ, ಕಲಶಸ್ಥಾಪನೆ ಮಹಾಪೂಜೆ, ಅಷ್ಟಾವಧಾನ ಸೇವೆ ಪ್ರಸಾದ ವಿತರಣಾ ಕಾರ್ಯಕ್ರಮಗಳು ಜರಗಿದವು.

    ವೇ.ಮೂ.ಸೌಕೂರು ಚಂದ್ರಶೇಖರ್ ಅಡಿಗ ನೇತ್ರತ್ವದಲ್ಲಿ ಗುರುವಾರದ ಧಾರ್ಮಿಕ ಕೈಂಕರ್ಯಗಳು ನೆರವೆರಿತು. ಧಾರ್ಮಿಕ ವಿಧಿವಿಧಾನದಲ್ಲಿ ಮಹಾಯಾಗ ಸಮಿತಿಯ ಅಧ್ಯಕ್ಷ ವಿದ್ವಾನ್ ಡಾ. ವಿಜಯ್ ಮಂಜರ್ ದಂಪತಿಗಳು ಭಾಗಿಯಾದರು.

    ಶ್ರೀ ಶಾಂತಿಮತೀ ಪ್ರತಿಷ್ಠಾನದ ಅಧ್ಯಕ್ಷ ಸಚ್ಚಿದಾನಂದ ಅಡಿಗ, ಬ್ರಹ್ಮಸಮುದಾಯದ ಶಿವರಾಮ ಉಡುಪ, ರಾಜರಾಮ್ ಐತಾಳ್, ಶ್ರೀನಿವಾಸ್ ಅಡಿಗ, ಗಣೇಶ್ ಭಟ್, ದಯಾನಂದ ವಾರಂಬಳ್ಳಿ, ರಾಮಚಂದ್ರ ಉಡುಪ, ಉಮೇಶ್ ಬಾಯರಿ, ನಾಗಭೂಷಣ ಐತಾಳ್, ಮಂಜುನಾಥ್ ಉಡುಪ, ಹರೀಶ್ ಅಡಿಗ, ಪ್ರವೀಣ್ ಉಡುಪ, ಸುಬ್ರಹ್ಮಣ್ಯ ಭಟ್ ಸಾಸ್ತಾನ, ಪ್ರಸನ್ನ ಭಟ್ ಮತ್ತಿತರರು ಉಪಸ್ಥಿತರಿದರು.

  • ಕುಂದಾಪುರ :ಗೋಪಾಡಿಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

    ಕುಂದಾಪುರ :ಗೋಪಾಡಿಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: 2047ಕ್ಕೆ ಭಾರತ ಸ್ವಾತಂತ್ರ್ಯ ಬಂದು 100 ವರ್ಷವಾಗುತ್ತಿದೆ. ಈ ಸಂದರ್ಭ ಪ್ರತಿಯೊಬ್ಬ ಪ್ರಜೆಯೂ ಸ್ವಾಭಿಮಾನ, ಸ್ವಾತಂತ್ರ್ಯದಿಂದ ಬದುಕಬೇಕು ಎನ್ನುವ ಕಲ್ಪನೆಯಲ್ಲಿ ಪ್ರಧಾನಿ ನರೇಂದ್ರ ಮೊದಿಯವರು ವಿಕಸಿತ ಭಾರತದ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ್ದಾರೆ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

    ಅವರು ಗೋಪಾಡಿ ಗ್ರಾ.ಪಂ. ಆವರಣದಲ್ಲಿ ನಡೆದ 8ನೇಯ ದಿನದ ವಿಕಸಿತ ಭಾರತ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.

    ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕನಾಗಿ ಆಯ್ಕೆಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನರೆಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಳೆದ 70 ವರ್ಷಗಳಿಮದ ಮಾಡಲಾಗದ ಅಭಿವೃದ್ಧಿ ಕಾರ್ಯವನ್ನು ಮೋದಿಜಿಯವರು ಮಾಡಿರುವುದು ಹೆಮ್ಮೆಯ ಸಂಗತಿ. ಈ ನಿಟ್ಟಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾಥ್ರೆ ಮಹತ್ವಪೂರ್ಣವಾಗಿದೆ ಎಂದರು.

    ಗೋಪಾಡಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಶೆಟ್ಟಿ ಸಂಕಲ್ಪದ ಪ್ರತಿಜ್ಞಾ ವಿಧಿಯನ್ನು ವಾಚಿಸಿದರು, ಲೀಡ್ ಬ್ಯಾಂಕಿನ ಮ್ಯಾನೇಜರ್ ಅವರು ಜನಕಲ್ಯಾಣಕ್ಕಾಗಿ ಬ್ಯಾಂಕ್ ಕಡೆಯಿಂದ ಸಿಗುವ ವಿವಿಧ ಸಬ್ಸಿಡಿ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಪಾಡಿ ಗ್ರಾ.ಪಂ.ಅಧ್ಯಕ್ಷ ಸುರೇಶ್ ಶೆಟ್ಟಿ ವಹಿಸಿದ್ದರು. ಕುಂದಾಪುರ ಅಂಚೆ ನಿರೀಕ್ಷಕ ರಾಮಚಂದ್ರ ಡಿ.ಎಮ್.,ಬ್ರಹ್ಮಾವರ ಕೃಷಿ ಕೇಂದ್ರದ ಹಿರಿಯ ವಿಜ್ಞಾನಿಗ ಮತ್ತು ಮುಖ್ಯಸ್ಥ ಡಾ.ಧನಂಜಯ, ಗೋಪಾಡಿ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್, ಉಡುಪಿ ಜಿಲ್ಲಾಸ್ಪತ್ರೆ ಆರೋಗ್ಯ ಮಿತ್ರ ಸುಜನಮಾಲಾ, ಗೋಪಾಡಿ ಪಂ. ಉಪಾಧ್ಯಕ್ಷೆ, ವಿಕಸಿತ ಭಾರತ ಅಭಿಯಾನದ ರಥದಲ್ಲಿ ನರೇಂದ್ರ ಮೋದಿಜಿ ಅವರ ಜನಪರ ಯೋಜನೆಗಳ ನೇರ ಸಂಭಾಷಣೆಯನ್ನು ವೀಕ್ಷಿಸಿ ತದನಂತರ ಕೃಷಿಗೆ ಸಂಬಂಧಪಟ್ಟ, ಕೀಟನಾಶಕಗಳನ್ನು ಸಿಂಪಡಿಸುವ, ಸಾಮರ್ಥ್ಯದ ಡ್ರೋನ್ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಲಾಯಿತು.

    ಗೋಪಾಡಿ ಗ್ರಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಗಣೇಶ್ ಪಿ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಉಡುಪಿ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿಂಜರಾ ಪ್ರಾಸ್ತಾವಿಕ ಮಾತನಾಡಿದರು. ಗೋಪಾಡಿ ಗ್ರಾ.ಪಂ.ಅಧ್ಯಕ್ಷ ಸುರೇಶ್ ಶೆಟ್ಟಿ ಸ್ವಾಗತಿಸಿದರು.

  • ಕುಂದಾಪುರ :ನಮ್ಮ ಕರ್ಮವೇ ನಮ್ಮ ಬದುಕಿನ ದಿಕ್ಸೂಚಿ : ಶ್ರೀ ಈಶಪ್ರಿಯ ತೀರ್ಥ ಶ್ರೀಪಾದ

    ಕುಂದಾಪುರ :ನಮ್ಮ ಕರ್ಮವೇ ನಮ್ಮ ಬದುಕಿನ ದಿಕ್ಸೂಚಿ : ಶ್ರೀ ಈಶಪ್ರಿಯ ತೀರ್ಥ ಶ್ರೀಪಾದ

    ಬಸ್ರೂರಿನಲ್ಲಿ ಬಿ.ಅಪ್ಪಣ್ಣ ಹೆಗ್ಡೆಯವರ 89ನೆ ಹುಟ್ಟುಹಬ್ವ: ಕೃಷಿ ಪ್ರಶಸ್ತಿ ಪ್ರದಾನ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಉತ್ತಮ ಕರ್ಮಗಳ ಜೊತೆಗೆ ಪೂರ್ಣಾಯುಷ್ಯವನ್ನು ಬದುಕಬೇಕು ಎನ್ನುವುದು ಉಪನಿಷತ್‌ನ ವಾಕ್ಯ. ನಾವು ಕರ್ತವ್ಯ ಪ್ರಜ್ಞೆಯುಳ್ಳವರಾಗಿ, ದೇಶದ ಸಂಪತ್ತು ಆಗಿ, ಒಳ್ಳೆಯ ಚಿಂತನೆಗಳೊಂದಿಗೆ ಬದುಕಬೇಕು ಎಂದು ಉಡುಪಿಯ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚಿಸಿದರು.

    ಅವರು ರವಿವಾರ ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ನಡೆದ ಧಾರ್ಮಿಕ ಮುಂದಾಳು, ಮಾಜಿ ಶಾಸಕ, ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಅವರ ೮೯ನೇ ಜನುಮ ದಿನದ ಪ್ರಯುಕ್ತ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಕೃಷಿ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ವಿತರಣಾ ಸಮಾರಂಭದಲ್ಲಿ ಆಶೀರ್ವಚಿಸಿದರು.

    ಅಪ್ಪಣ್ಣ ಹೆಗ್ಡೆಯವರೆಗೆ ೮೯ ವರ್ಷ ಆಗಿದೆ ಅನ್ನುವುದೇ ಗೊತ್ತಾಗುವುದಿಲ್ಲ. ಈಗಲೂ ಅವರು ಸಮಾಜದ ಉದ್ದಾರಕ್ಕೆ, ಮಕ್ಕಳಿಗೆ ಶಿಕ್ಷಣದ ಮೂಲಕ ಅಷ್ಟೊಂದು ಕ್ರಿಯಾಶೀಲರಾಗಿ, ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಯುವಕರಿಗೆ ಮಾರ್ಗದರ್ಶಕರಾಗಿ ಬದುಕಿದ್ದಾರೆ. ಇವರು ಎಲ್ಲರಿಗೂ ಪ್ರೇರಣಾದಾಯಿಗಳು ಎಂದರು.

    ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ನಮಗೆಲ್ಲರಿಗೂ ಭಾರತೀಯ ಧರ್ಮ, ಸಂಸ್ಕೃತಿಯ ಬಗ್ಗೆ ವಿಶೇಷವಾದ ಗೌರವ ಇರಬೇಕು. ಸಾಮಾಜಿಕ ಸೇವೆ, ದೇವರ ಮೇಲಿನ ವಿಶ್ವಾಸವೇ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ನನ್ನ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ ಅನ್ನುವ ತೃಪ್ತಿಯಿದೆ. ಇದು ನಿಮ್ಮೆಲ್ಲರ ಸಹಕಾರ, ಭಗವಂತನ ಕೃಪೆ, ಹಿರಿಯರ ಆಶೀರ್ವಾದಿಂದ ಸಾಧ್ಯವಾಗಿದೆ ಎಂದ ಅವರು, ಆಸ್ಮಾ ಬಾನು ಅವರು ಕೃಷಿ ಕಾಯಕದ ಮೂಲಕ ಸಾರ್ಥಕ ಜೀವನದೊಂದಿಗೆ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು ಶ್ಲಾಘಿಸಿದರು.

    ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಅನುಪಮಾ ಎಸ್. ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಪ್ರತಿಷ್ಠಾನದ ರಾಮಕಿಶನ್ ಹೆಗ್ಡೆ ಸ್ವಾಗತಿಸಿ, ಪತ್ರಕರ್ತ ಕೆ.ಸಿ. ರಾಜೇಶ್ ನಿರೂಪಿಸಿದರು.

    ಪ್ರಶಸ್ತಿ ಪ್ರದಾನ
    ಇದೇ ವೇಳೆ ದೇಶದ ಬೇರೆ ಬೇರೆ ರಾಜ್ಯಗಳಿಂದ ಅಳಿವಿನಂಚಿನಲ್ಲಿರುವ ಭತ್ತದ ಬೀಜ ಸಂಗ್ರಹಿಸುವ ವಿಶೇಷ ಕೆಲಸ ಮಾಡುತ್ತಿರುವ, ಈ ವರ್ಷ ೮೪೦ಕ್ಕೂ ಹೆಚ್ಚಿನ ಭತ್ತದ ತಳಿಗಳನ್ನು ಸಂಗ್ರಹಿಸಿರುವ ಕೃಷಿ ಸಾಧಕಿ ಕಾರ್ಕಳದ ಆಸ್ಮಾ ಬಾನು ಅವರಿಗೆ ಬಿ. ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

  • ಕುಂದಾಪುರ: ಅಮೂಲ್ಯ ಗಿಡಮರಗಳು ವಿನಾಶದಂಚಿನಲ್ಲಿವೆ – ಮಂಗಳೂರು ಎಸಿಎಫ್ ಶ್ರೀಧರ ಪಿ.

    ಕುಂದಾಪುರ: ಅಮೂಲ್ಯ ಗಿಡಮರಗಳು ವಿನಾಶದಂಚಿನಲ್ಲಿವೆ – ಮಂಗಳೂರು ಎಸಿಎಫ್ ಶ್ರೀಧರ ಪಿ.

    ಗುರುಕುಲದಲ್ಲಿ ಸಾಂಪ್ರದಾಯಿಕ ಸಸ್ಯರಾಶಿ ಅಮೃತವನ ಉದ್ಘಾಟನೆ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಅನಾದಿ ಕಾಲದಿಂದ ಮನುಷ್ಯರಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಆರೋಗ್ಯ ಭಾಗ್ಯ ನೀಡಿದ್ದ ಅದೆಷ್ಟೋ ಅಮೂಲ್ಯ ಗಿಡ ಮರಗಳು ಇಂದು ವಿನಾಶದಂಚಿನಲ್ಲಿದ್ದು, ಗುರುಕುಲದಂತಹಾ ಶಿಕ್ಷಣ ಸಂಸ್ಥೆಗಳು ಅಮೂಲ್ಯ ಗಿಡ ಮರಗಳನ್ನು ಉಳಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಹೋರಾಟ ಶ್ಲಾಘನೀಯ ಎಂದು ಮಂಗಳೂರು ವಿಭಾಗ ಎಸಿಎಫ್ ಶ್ರೀಧರ ಪಿ ಹೇಳಿದರು.

    ಅವರು ಭಾನುವಾರ ಬೆಳಿಗ್ಗೆ ಕುಂದಾಪುರ ತಾಲೂಕಿನ ವಕ್ವಾಡಿಯಲ್ಲಿರುವ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ಬಿ. ಅಪ್ಪಣ್ಣ ಹೆಗ್ಡೆ ಅವರ 89ನೇ ಹುಟ್ಟು ಹಬ್ಬ ಪ್ರಯುಕ್ತ ಹಮ್ಮಿಕೊಳ್ಳಲಾದ ಅಮೃತವನ್ನು ಉದ್ಘಾಟಿಸಿ ಮಾತನಾಡಿದರು.

    ಗ್ರಾಮೀಣ ಭಾಗದಲ್ಲಿ ಈ ಹಿಂದೆ ಇದ್ದ ಕೋಳಿ ಜುಟ್ಟು ಎನ್ನುವ ಕಾಡಿನ ತಳಿ, ಎಬೋನಿ ಎನ್ನುವ ಪಶ್ಚಿಮ ಘಟ್ಟಗಳಲ್ಲಿ ಬೆಳೆಯುವ ಎಬೋನಿ ಮುಂತಾದ ಮರಗಳು ಅಳಿವಿನಂಚಿನಲ್ಲಿದೆ. ಅಂತಹಾ ಗಿಡಗಳನ್ನೂ ಇಲ್ಲಿ ಬೆಳೆಸಲಾಗುತ್ತಿರುವುದು ಸಂತಸದ ವಿಚಾರ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಬಿ. ಅಪ್ಪಣ್ಣ ಹೆಗ್ಡೆ, ನಮಗೆ ಉಸಿರಾಡುವ ಆಮ್ಲಜನಕ ನೀಡುವ ಸಸ್ಯರಾಶಿಯನ್ನು ಇಂದು ನಾವು ಕಡೆಗಣಿಸುತ್ತಿದ್ದೇವೆ. ಮರಗಿಡಗಳನ್ನು ನಿರ್ಲಕ್ಷ್ಯ ಮಾಡಿದರೆ ನಮ್ಮನ್ನು ನಾವು ನಿರ್ಲಕ್ಷ್ಯ ಮಾಡಿದಂತೆ. ಯಾರೋ ಬೆಳಿಸಿದ, ಕಡಿಯದೇ ಬಿಟ್ಟ ಮರಗಳಿಂದ ನಾವು ಉಸಿರಾಡುತ್ತಿದ್ದೇವೆ, ಅದೇ ರೀತಿ ನಾವು ನಮ್ಮ ಮುಂದಿನ ಪೀಳಿಗೆಗೆ ಮರಗಳನ್ನು ನೆಡುವುದರ ಜೊತೆಗೆ ಬೆಳೆಸುವ ಪಣ ತೊಡಬೇಕಿದೆ ಎಂದರು.

    ಈ ಸಂದರ್ಭ ಗುರುಕುಲ ಪಬ್ಲಿಕ್ ಸ್ಕೂಲಿನ ಮುಖ್ಯಸ್ಥ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಆಡಳಿತಾಧಿಕಾರಿ ಅನುಪಮಾ ಶೆಟ್ಟಿ, ಸಮಾಜ ಸೇವಕ ಮಾಧವ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.

    ಸಹಶಿಕ್ಷಕಿ ವಿಶಾಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸೀತಾ ಅಶೋಕ(ಶೋಕ ನಿವಾರಕ), ಹಲಸು, ಹೆಬ್ಬಲಸು, ರೋಹಿತಕ್ಕ (ಬಂಟ ಕೆಂಪುಳ), ಕಿರಾಲು ಬೋಗಿ, ಕಕ್ಕೆ ಮರ, ಅಂಟುವಾಳ, ಮಾವು (ಬೇರೆ ಬೇರೆ ಜಾತಿಯ ಮಾವು), ಲಕ್ಷ್ಮಿ ತರು, ನಾಗಸಂಪಿಗೆ (ಒರಿಜಿನಲ್), ರಾಮಪತ್ರೆ, ಕೋಳಿ ಕೊಕ್ಕು, ಬೀಟೆ, ಬೇಂಗ, ರುದ್ರಾಕ್ಷಿ, ಕದಂಬ, ಹೊಳೆ ದಾಸವಾಳ, ನೇರಳೆ ಗಿಡ(ನೀಲಿ), ವಾಟೆ ಹುಳಿ, ಜಾರಿಗೆ, ಬೆಟ್ಟದ ನೆಲ್ಲಿ, ರಕ್ತ ಚಂದನ ಮೊದಲಾದ ಗಿಡಗಳನ್ನು ಅಮೃತವನದಲ್ಲಿ ನೆಡಲಾಗಿದೆ.

  • ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ಆಶ್ರಯದಲ್ಲಿ ರೈತ ದಿನಾಚರಣೆಯ ಅಂಗವಾಗಿ ಸಾಧಕ ಕೃಷಿಕ ಸದಸ್ಯರಿಗೆ ಸನ್ಮಾನ

    ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ಆಶ್ರಯದಲ್ಲಿ ರೈತ ದಿನಾಚರಣೆಯ ಅಂಗವಾಗಿ ಸಾಧಕ ಕೃಷಿಕ ಸದಸ್ಯರಿಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘ ಇದರ ಆಶ್ರಯದಲ್ಲಿ ರೈತ ದಿನಾಚರಣೆಯ ಅಂಗವಾಗಿ ಸಾಧಕ ಕೃಷಿಕ ಸದಸ್ಯರಿಗೆ ಸನ್ಮಾನ ಹಾಗೂ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರ ಕಾರ್ಯಕ್ರಮ ಶನಿವಾರ ಕೋಟ ಸಿ.ಎ ಬ್ಯಾಂಕ್ ಬಿ.ಸಿ ಹೊಳ್ಳ ಸಭಾಂಗಣದಲ್ಲಿ ಜರಗಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ವ್ಯವಸಾಯಕ ಸಂಘದ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ವಹಿಸಿದ್ದರು.

    ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಟಿ ಸೀತಾರಾಮ ಸೋಮಯಾಜಿ ಉದ್ಘಾಟಿಸಿ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿ ಕೋಟ ಸಹಕಾರಿ ಸಂಘ ಸಾಕಷ್ಟು ದೊಡ್ಡ ಸಾಧನೆಗಳನ್ನು ಮಾಡಿದೆ. ಈ ಸಂಘದಲ್ಲಿ ಜನಸಾಮಾನ್ಯರದೊಂದಿಗೆ ವ್ಯವಹರಿಸುವ ರೀತಿ ಇತರ ಸಂಘಗಳಿಗೆ ಮಾದರಿಯಾಗಿದೆ. ಜನಸ್ನೇಹಿ ಕೃಷಿ ಪತ್ತಿನ ಸಹಕಾರಿ ಸಂಘ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ರೈತ ದಿನಾಚರಣೆಯನ್ನು ಅರ್ಥಪೂರ್ಣವಾಗಿಸಿ ಸಾಕಷ್ಟು ಜನೋಪಯೋಗಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ ಇದು ಶ್ಲಾಘನಾರ್ಹ ಸಂಘವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದ ಸಾಧಕರಾದ ಪ್ರಕಾಶ್ ಶೆಟ್ಟಿ, ನರಸಿ ಪೂಜಾರಿ, ಸೀತಾರಾಮ ಶೆಟ್ಟಿ, ಸುಲೋಚನಾ,ಶೇಖರ್ ಪೂಜಾರಿ, ಕಾವೇರಿ, ರವಿ ಮಯ್ಯ, ಉಮೇಶ್ ಕಾರ್ಕಡ, ಶೋಭಾ ಐತಾಳ್, ಗೋಪಾಲ್ ಪಡುಕರೆ, ಗೋಪಿ ದೇವಾಡಿಗ, ಸುಶೀಲ ಶೆಡ್ತಿ, ವಿವಿಧ ಕ್ಷೇತ್ರದ ಸಾಧಕರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಜಯರಾಮ ಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಕೃಷ್ಣಮೂರ್ತಿ ಉರಾಳ, ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನರೇಂದ್ರ ಕುಮಾರ್ ಕೋಟ ಇವರುಗನ್ನು ಸನ್ಮಾನಿಸಲಾಯಿತು.

    ಮುಖ್ಯ ಅಭ್ಯಾಗತರಾಗಿ ಕೋಟ ಸಿ ಎ ಬ್ಯಾಂಕ್ ಮಾಜಿ ನಿರ್ದೇಶಕ ಸುರೇಂದ್ರ ಹೆಗ್ಡೆ, ನಿವೃತ್ತ ಮುಖ್ಯ ಶಿಕ್ಷಕ ಸೀತಾರಾಮ ಶೆಟ್ಟಿ ಕೊಯ್ಕೂರು ಸಾಧಕರನ್ನು ಗೌರವಿಸಿದರು.

    ಸಂಘದ ಉಪಾಧ್ಯಕ್ಷ ರಾಜೀವ ದೇವಾಡಿಗ, ನಿರ್ದೇಶಕರಾದ ರವೀಂದ್ರ ಕಾಮತ್ , ಪ್ರೇಮ, ಗೀತಾ ಎಸ್ ಪೂಜಾರಿ, ಮಹೇಶ್ ಶೆಟ್ಟಿ, ನಾಗರಾಜ್ ಹಂದೆ, ರಾಜೇಶ್ ಉಪಾಧ್ಯ, ರಂಜೀತ್ ಕುಮಾರ್, ಅಚ್ಯುತ್ ಪೂಜಾರಿ ಮತ್ತಿತರರು ಇದ್ದರು.

    ನಿರ್ದೇಶಕ ಟಿ ಮಂಜುನಾಥ್ ಗಿಳಿಯಾರ್ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಬ್ಯಾಂಕ್ ಸಿಬ್ಬಂದಿ ಸಂಧ್ಯಾ ನಿರೂಪಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ವಂದಿಸಿದರು.

  • ಕುಂದಾಪುರ :ಕೃಷಿ ಮಾಡುವುದೆಂದರೆ ರಾಷ್ಟ್ರಕ್ಕೆ ಗೌರವ ಸಲ್ಲಿಸುವುದೆಂದೇ ಅರ್ಥ – ರಾಜೇಂದ್ರ ಬೆಚ್ಚಳ್ಳಿ

    ಕುಂದಾಪುರ :ಕೃಷಿ ಮಾಡುವುದೆಂದರೆ ರಾಷ್ಟ್ರಕ್ಕೆ ಗೌರವ ಸಲ್ಲಿಸುವುದೆಂದೇ ಅರ್ಥ – ರಾಜೇಂದ್ರ ಬೆಚ್ಚಳ್ಳಿ

    ಉಡುಪಿ ಜಿಲ್ಲಾ ರೈತ ಸಂಘದಿಂದ ರಾಷ್ಟ್ರೀಯ ರೈತರ ದಿನಾಚರಣೆ, ಸಾಧಕ ರೈತರಿಗೆ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…


    ಕುಂದಾಪುರ :ಉಡುಪಿ ಜಿಲ್ಲಾ ರೈತ ಸಂಘದ ವತಿಯಿಂದ ಕುಂದಾಪುರದ ಆರ್.ಎನ್.ಶೆಟ್ಟಿ ಮಿನಿ ಸಭಾ ಭವನದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮ, ಸಾಧಕ ರೈತರಿಗೆ ಸನ್ಮಾನ ಕಾರ್ಯಕ್ರಮ ಡಿಸೆಂಬರ್ 23ರಂದು ನಡೆಯಿತು.

    ರಾಷ್ಟ್ರೀಯ ರೈತರ ದಿನಾಚರಣೆ ಕಾರ್ಯಕ್ರಮವನ್ನು ಪ್ರಗತಿಪರ ಯುವ ಕೃಷಿಕ ರಾಜೇಂದ್ರ ಬೆಚ್ಚಳ್ಳಿ ಉದ್ಘಾಟಿಸಿದರು.

    ಉದ್ಘಾಟನಾ ಮಾತುಗಳನ್ನಾಡಿದ ಅವರು ಭಾರತ ದೇಶದಲ್ಲಿ ಶೇ.70ರಷ್ಟು ಕೃಷಿಕರು ಕೃಷಿಯನ್ನೇ ಅವಲಂಬಿಸಿಕೊಂಡಿದ್ದಾರೆ. ಕೃಷಿ ಪ್ರಧಾನವಾದ ಭಾರತದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವುದೆಂದರೆ ರಾಷ್ಟ್ರಗೌರವ ಸಲ್ಲಿಸುವುದೆಂದೇ ಅರ್ಥ. ಕೃಷಿಕರು ಆರ್ಥಿಕವಾಗಿ ಪ್ರಗತಿಯನ್ನು ಸಾಧಿಸಲು ಏಕರೂಪದ ಕೃಷಿ ಪದ್ದತಿಯಿಂದ ಹೊರಬಂದು ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಮಿಶ್ರ ಬೇಸಾಯ ಪದ್ದತಿಯನ್ನು ವೈಜ್ಞಾನಿಕ ಮಾದರಿಯಲ್ಲಿ ಅನುಷ್ಟಾನಿಸಿದಾಗ ಯಶಸ್ಸು ಸಾಧ್ಯವಾಗುತ್ತದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ರಾಷ್ಟ್ರೀಯ ಬಿಲಿಯನೇರ್ ರೈತ ಪ್ರಶಸ್ತಿ ಪುರಸ್ಕೃತರಾದ ಕೆದೂರು ಕಾಮಾಕ್ಷಿ ಫಾರಂನ ರೂವಾರಿ ಟಿ.ಗಣೇಶ ನಾಯಕ್ ಅವರನ್ನು ಸನ್ಮಾನಿಸಲಾಯಿತು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ. ಗಣೇಶ ನಾಯಕ್ ಅವರು, ಕೃಷಿಯಲ್ಲಿ ಅಧ್ಯಯನಶೀಲತೆ, ಪ್ರಯೋಗಶೀಲತೆ, ಸುಧಾರಿತ ಕೃಷಿ ಪದ್ದತಿಗಳ ಅಳವಡಿಕೆಯ ಬಗ್ಗೆ ಸದಾ ಕೃಷಿಕರು ಆಸಕ್ತರಾಗಿದ್ದಲ್ಲಿ ಕೃಷಿಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿದೆ. ಹೊಸದಾಗಿ ಕೃಷಿ ಮಾಡುವ ಮೊದಲು ಯಶಸ್ವಿ ತೋಟಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಬೇಕು. ಅನುಭವಿ ಕೃಷಿಕರು, ಕೃಷಿ ತಜ್ಞರ ಮಾರ್ಗದರ್ಶನ ಪಡೆದುಕೊಳ್ಳಬೇಕು. ವೈಜ್ಞಾನಿಕ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು. ಸಮಗ್ರ ನೀರು ನಿರ್ವಹಣೆ, ಸಸ್ಯ ಸಂರಕ್ಷಣೆ, ಸಸ್ಯಗಳ ಬೆಳವಣಿಗೆಯ ಬಗ್ಗೆ ಸತತ ಆಸಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.

    ರೈತ ಮುಖಂಡರಾದ ಸಂಪಿಗೇಡಿ ಸಂಜೀವ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ತೋಟಗಾರಿಕಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಮಧುಕರ, ಉಡುಪಿ ಜಿಲ್ಲಾ ರೈತ ಸಂಘದ ಹಂಗಾಮಿ ಅಧ್ಯಕ್ಷ ಕೆದೂರು ಸದಾನಂದ ಶೆಟ್ಟಿ, ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ವಿಕಾಸ್ ಹೆಗ್ಡೆ, ಹಾಪ್ ಕಾಮ್ಸ್ ಅಧ್ಯಕ್ಷ ಸೀತರಾಮ ಗಾಣಿಗ ಹಾಲಾಡಿ, ಉಡುಪಿ ಜಿಲ್ಲಾ ರೈತ ಸಂಘದ ಖಜಾಂಚಿ ಭೋಜ ಕುಲಾಲ ಹಾಗೂ ವಲಯಾಧ್ಯಕ್ಷರು ಉಪಸ್ಥಿತರಿದ್ದರು.

    ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸತೀಶ ಕಿಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೈತ ಸಂಘದ ಕಾವ್ರಾಡಿ ವಲಯಾಧ್ಯಕ್ಷ ಶರತ್ಚಂದ್ರ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ವಂಡ್ಸೆ ವಲಯಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು.

  • ಬೈಂದೂರು :ಕೃಷಿ ಹೈನುಗಾರಿಕೆ ಬಲಪಡಿಸಲು ರೈತೋತ್ಥಾನ ಅಗತ್ಯ : ಶಾಸಕ ಗಂಟಿಹೊಳೆ

    ಬೈಂದೂರು :ಕೃಷಿ ಹೈನುಗಾರಿಕೆ ಬಲಪಡಿಸಲು ರೈತೋತ್ಥಾನ ಅಗತ್ಯ : ಶಾಸಕ ಗಂಟಿಹೊಳೆ

    ನಾಗೂರಿನಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ, ರೈತ ಸನ್ಮಾನ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ರೈತರ ಬಲವರ್ಧನೆಯಾದಾಗ ದೇಶದ ಕೃಷಿ ಮತ್ತು ಹೈನುಗಾರಿಕಾ ಕ್ಷೇತ್ರ ಹೆಚ್ಚು ಸಶಕ್ತವಾಗುತ್ತದೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

    ಅವರು ನಾಗೂರು ಶ್ರೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ನಡೆದ ರೈತರ ಸೇವಾ ಸಹಕಾರಿ ಸಂಘ ನಿ., ಉಪ್ಪುಂದ ಹಾಗೂ ರೈತ ಸಿರಿ, ರೈತ ಸೇವಾ ಒಕ್ಕೂಟ ಉಪ್ಪುಂದ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಹಾಗೂ ಹಿರಿಯ ರೈತರ ಸಮ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ರೈತರಿಗೆ ಮಾದರಿ ಸಂಸ್ಥೆಯಾಗಿ ಸೇವೆ ನೀಡುತ್ತಿರುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ. ಇದಕ್ಕೆ ಸಂಘದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಯವರ ಅನನ್ಯ ಕೊಡುಗೆ ಕಾರಣವಾಗಿದೆ. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ರೈತ ಪರ ಕಾರ್ಯಕ್ರಮಗಳು ಮಾದರಿಯಾಗಿ ಗುರುತಿಸಿಕೊಂಡಿದೆ ಎಂದರು.

    ಸಮಾರಂಭದ ಅಧ್ಯಕ್ಷತೆವಹಿಸಿದ್ದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಸರಕಾರ ಕೃಷಿ ಇಲಾಖೆಯನ್ನು ಬಲಪಡಿಸಿ ರೈತರ ಜೊತೆಗೆ ನಿಲ್ಲುವ ಅಗತ್ಯವಿದೆ. ರೈತರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ರೈತರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಇನ್ನಷ್ಟು ಆದ್ಯತೆಗಳು ಸರಕಾರದ ಮಟ್ಟದಲ್ಲಿ ದೊರಕುವಂತಾದಾಗ ಕೃಷಿ ಕ್ಷೇತ್ರದ ಉಳಿವಿಗೆ ಸಹಕಾರಿಯಾಗಲಿದೆ ಎಂದರು.

    ಇದೇ ಸಂದರ್ಭ ಹಿರಿಯ ಪ್ರಗತಿಪರ ಕೃಷಿಕರಾದ ವೆಂಕಟ ಪೂಜಾರಿ ಉಬ್ಜೇರಿ ಯವರನ್ನು ಸಮ್ಮಾನಿಸಲಾಯಿತು ಹಾಗೂ ಅತೀ ಹೆಚ್ಚು ಹಾಲು ಮಾರಾಟ ಮಾಡಿದ ಹಾಲು ಉತ್ಪಾದಕರನ್ನು ಗೌರವಿಸಲಾಯಿತು.

    ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಅಧ್ಯಕ್ಷ ಕೆ.ಪಿ ಸುಚರಿತ ಶೆಟ್ಟಿ, ಕಿರಿಮಂಜೇಶ್ವರ ಗ್ರಾ.ಪಂ ಅಧ್ಯಕ್ಷ ಶೇಖರ ಖಾರ್ವಿ, ಕುಂದಾಪುರ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕೆ.ಜೆ. ನಿತೀಶ್ ಹೊಳ್ಳ, ಕುಂದಾವುರ ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕರು ರೂಪಾ ಜೆ. ಮಾಡ, ಹಿರಿಯ ವಿಜ್ಞಾನಿಗಳು ಡಾ. ಬಿ. ಧನಂಜಯ, ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ನಿರ್ದೇಶಕರಾದ ಬಿ.ರಘುರಾಮ ಶೆಟ್ಟಿ, ಕೆ.ಮೋಹನ ಪೂಜಾರಿ, ಬಿ.ಎಸ್.ಸುರೇಶ ಶೆಟ್ಟಿ, ಗುರುರಾಜ ಹೆಬ್ಬಾರ್, ವೀರೇಂದ್ರ ಶೆಟ್ಟಿ, ಮಂಜು ದೇವಾಡಿಗ, ನಾಗರಾಜ ಖಾರ್ವಿ, ಭರತ್ ದೇವಾಡಿಗ, ಹೂವ ನಾಯ್ಕ, ದಿನೀತಾ ಶೆಟ್ಟಿ, ಜಲಜಾಕ್ಷಿ ಪೂಜಾರಿ ಉಪಸ್ಥಿತರಿದ್ದರು.

    ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್. ಪೈ ಸ್ವಾಗತಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರು. ಉಪಾಧ್ಯಕ್ಷ ಈಶ್ವರ ಹಕ್ಷತೋಡ್ ವಂದಿಸಿದರು.

  • ಕೋಟ :ಲೋಕ ಕಲ್ಯಾಣಾರ್ಥವಾಗಿ ಶಾಂತಿಮತೀ ಪ್ರತಿಷ್ಠಾನದ ನೇತೃತ್ವದಲ್ಲಿ ಕೋಟಿ ಗಾಯತ್ರೀ, ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗ

    ಕೋಟ :ಲೋಕ ಕಲ್ಯಾಣಾರ್ಥವಾಗಿ ಶಾಂತಿಮತೀ ಪ್ರತಿಷ್ಠಾನದ ನೇತೃತ್ವದಲ್ಲಿ ಕೋಟಿ ಗಾಯತ್ರೀ, ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತನ್ನದೆ ಆದ ಕಾರ್ಯಕ್ರಮಗಳನ್ನು ನೀಡಿ ಸಮಾಜದ ಹಾಗೂ ಸಮುದಾಯ ಸಾಧಕರನ್ನು ಗುರುತಿಸಿ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸುತ್ತಾ ಬಂದಿರುವಾ ಶ್ರೀ ಶಾಂತಿ ಮತೀ ಪ್ರತಿಷ್ಠಾನ ಇದೀಗ ಉಡುಪಿ ಜಿಲ್ಲೆಯಲ್ಲೆ ಮೊಟ್ಟ ಮೊದಲ ಬಾರಿಗೆ ಕೋಟಿ ಗಾಯತ್ರೀ ಮಹಾಯಾಗ ಹಾಗೂ ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗ ಹಮ್ಮಿಕೊಂಡಿದ್ದು ಇದೇ ಬರುವ ಡಿ.28, 29, 30ರಂದು ಮೂರು ದಿನಗಳ ಕಾಲ ಸಾಂಸ್ಕೃತಿಕ ನಗರಿ ಕೋಟದ ಮಹತೋಭಾರ ಹಿರೇ ಮಹಾಲಿಂಗೇಶ್ವರನ ಸಾನಿಧ್ಯದಲ್ಲಿ ನಡೆಸಲಿದೆ.

    ಇದಕ್ಕಾಗಿ ಸಾಕಷ್ಟು ಪೂರ್ವಭಾವಿ ಸಭೆಗಳನ್ನು ಆಯೋಜಿಸಿ ಕಾರ್ಯಕ್ರಮದ ರೂಪುರೇಖೆಗಳನ್ನು ಸಿದ್ಧಪಡಿಸಿಕೊಂಡಿದೆ.

    ಮಹಾಯಾಗದ ಅಧ್ಯಕ್ಷ ಡಾ.ವಿದ್ವಾನ್ ವಿಜಯ ಮಂಜರ್ ಪಾಂಡೇಶ್ವರ ಹಾಗೂ ಶ್ರೀ ಶಾಂತಿಮತೀ ಪ್ರತಿಷ್ಠಾನದ ಅಧ್ಯಕ್ಷ ಸಚ್ಚಿದಾನಂದ ಅಡಿಗ ವಡ್ಡರ್ಸೆ ಇವರ ಸಾರಥ್ಯದಲ್ಲಿ ಈ ಧಾರ್ಮಿಕ ಪ್ರಜ್ಞಾ ಕಾರ್ಯಕ್ರಮ ನೆರವೆರಲಿದೆ.

    ದಶಮಾನೋತ್ಸವಕ್ಕೆ ಹೊಸ ಮೆರುಗು
    ಶ್ರೀ ಶಾಂತಿಮತೀ ಪ್ರತಿಷ್ಠಾನ ಸಂಸ್ಥೆ ತನ್ನ ಸಾಮಾಜಿಕ ,ಧಾರ್ಮಿಕ ಕಾರ್ಯಕ್ರಮಗಳ ನಡುವೆ ಇತ್ತೀಚಿಗಿನ ದಿನಗಳಲ್ಲಿ ಮರೆಯಾಗುತ್ತಿರುವ ಗಾಯತ್ರೀ ಮಂತ್ರ, ವಿಷ್ಣು ಸಹಸ್ರನಾಮ,ಲಲಿತಾ ಸಹಸ್ರನಾಮ ಹೀಗೆ ಹಲವು ಬಗೆಯ ಮಂತ್ರಘೋಷಗಳನ್ನು ಇಂದಿನ ಯುವ ಸಮುದಾಯದಲ್ಲಿ ನೆಲೆಯೂರಲು ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಂಡು ಯಶಸ್ಸಿನ ತೇರಾಗಿಸಿಕೊಂಡಿದ್ದಾರೆ.

    ಇದೀಗ ಈ ಸಂಸ್ಥೆಗೆ ದಶಮಾನೋತ್ಸವ ಸಂಭ್ರಮ ಈ ಹಿನ್ನಲೆಯನ್ನು ಮನದಲ್ಲಿಟ್ಟುಕೊಂಡು ವಿವಿಧ ರೀತಿಯ ಧಾರ್ಮಿಕ ಮಹಾಯಾಗಗಳನ್ನು ಆಯೋಜಿಸಿಕೊಂಡಿದೆ.

    ಕಾರ್ಯಕ್ರಮದ ಕರಿತು ಪ್ರತಿಕಾಘೋಷ್ಠಿ
    ಇದೇ ಬರುವ ಡಿ.28, 29, 30 ಮೂರು ದಿನಗಳ ಕಾಲ ಕೋಟದ ಮಹತೋಭಾರ ಹಿರೇ ಮಹಾಲಿಂಗೇಶ್ವರ ದೇವಸ್ಥಾನ ಸನ್ನಿಧಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು 28ರಂದು ಪೂರ್ವಾಹ್ನ ದೇವತಾ ಪ್ರಾರ್ಥನೆ,ಸ್ವಸ್ತಿ ವಾಚನ,ಮೂಲಕ ಮುಲ್ಲೆ ಮಹಾಗಣಪತಿಗೆ ರಂಗಪೂಜೆ,ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ದುರ್ಗಾಹೋಮ,ಮಹಾಲಿಂಗೇಶ್ವರನಿಗೆ ಶತರುದ್ರಾಭಿಷೇಕ, ಮಹಾಪೂಜೆ , ಅಪರಾಹ್ನ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಿಂದ ಕುಣಿತ ಭಜನೆ,ಸ್ತಬ್ಧ ಚಿತ್ರ,ಚಂಡೆ ವಾದ್ಯಗಳೊಂದಿಗೆ ಗಾಯತ್ರೀ ದೇವಿಯ ಪುರಮೆರವಣಿಗೆ ದಿವ್ಯ ಶೋಭಯಾತ್ರೆ , ಸಂಜೆ, ಯಾಗಶಾಲೆ ಪ್ರವೇಶ, ಕಲಶಸ್ಥಾಪನೆ, ಮಹಾಪೂಜೆ, ಅಷ್ಟಾವಧಾನ ಸೇವೆ ಪ್ರಸಾದ ವಿತರಣೆ , 29ರಂದು ಪೂರ್ವಾಹ್ನ ನವಕುಂಡಗಳಲ್ಲಿವ ಕೋಟಿ ಗಾಯತ್ರೀ ಮಹಾಯಾಗ ಮತ್ತು ಲಲಿತಾ ಸಹಸ್ರನಾಮ ಮಹಾಯಾಗ ವೇ.ಮೂ. ಹೃಷಿಕೇಶ್ ಬಾಯರಿ ಬಾರಕೂರು ಹಾಗೂ ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲ್ ಇವರ ನೇತೃತ್ವದಲ್ಲಿ ಯಾಗಗಳು ನೆರವೆರಲಿದೆ.

    8.ಗ ಯಿಂದ ಒಂದು ಸಾವಿರ ಅಧಿಕ ವಿಪ್ರ ಮಹಿಳೆಯರಿಂದ ಲಕ್ಷ ಲಿಲಿತಾ ಸಹಸ್ರನಾಮ ಅಭಿಯಾನ,ಲಲಿತಾ ಸಹಸ್ರನಾಮ ಕುಂಕುಮಾರ್ಚನೆ ನಡೆಯಲಿದೆ.10ಗ ಇದರ ಪೂರ್ಣಾಹುತಿ,ಧಾರ್ಮಿಕ ಸಭಾಕಾರ್ಯಕ್ರಮ ಜರಗಲಿದೆ.
    30ರಂದು ಪೂರ್ವಾಹ್ನ 6ರಿಂದ ಕೋಟಿ ಗಾಯತ್ರೀ ಮಹಾಯಾಗ,9.30ಕ್ಕೆ ಕೋಟಿ ಗಾಯತ್ರೀ ಮಹಾಯಾಗದ ಪೂರ್ಣಾಹುತಿ,ಪ್ರಸಾದ ವಿತರಣೆ,ಮಹಾ ಮಂತ್ರಾಕ್ಷತೆ, 10ಕ್ಕೆ ಸಮಾರೋಪಸಮಾರಂಭ ಅಪರಾಹ್ನ ಸಾರ್ವಜನಿಕ ಮಹಾಅನ್ನಸಂತರ್ಪಣೆ ಕಾರ್ಯಕ್ರಮಗಳು,ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಪ್ರಮುಖರಾಗಿವ ಆಧ್ಯಾತ್ಮ ಚಿಂತಕ ವಿದ್ಯಾಚಸ್ಪತಿ ವಿದ್ವಾನಗ ಉಮಾಕಾಂತ್ ಭಟ್ ಕೆರಕೈ ,ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಅಧ್ಯಕ್ಷ ಅಶೋಕ್ ಹಾರನಹಳ್ಳಿ,ಕರ್ಣಾಟಕ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್,ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಮಹಾಯಾಗದ ಸಮಿತಿ ಅಧ್ಯಕ್ಷ ವಿದ್ವಾನ್ ವಿಜಯ್ ಮಂಜರ್ ತಿಳಿಸಿದರು.

  • ಮಣೂರು – ಚಿತ್ತಾರಿ ದೇಗುಲದ ದೀಪೋತ್ಸವ

    ಮಣೂರು – ಚಿತ್ತಾರಿ ದೇಗುಲದ ದೀಪೋತ್ಸವ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಇಲ್ಲಿನ ಮಣೂರು ಶ್ರೀ ಚಿತ್ತಾರಿ ನಾಗ ಬ್ರಹ್ಮ ಪರಿವಾರ ದೇಗುಲದ ದೀಪೋತ್ಸವ ಕಾರ್ಯಕ್ರಮ ಇತ್ತೀಚಿಗೆ ವಿಜೃಂಭಣೆಯಿಂದ ಜರಗಿತು.

    ವೇ. ಮೂ. ಮದುಸೂಧನ ಬಾಯರಿ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೆರಿತು.
    ಹರಿಗುರು ಭಜನಾ ತಂಡ ಕೋಟ ಇವರಿಂದ ಭಜನಾ ಕಾರ್ಯಕ್ರಮ, ಭಕ್ತಾಧಿಗಳು ಹಣತೆಯಲ್ಲಿ ದೀಪ ಪ್ರಜ್ವಲಿಸಿದರು.

    ದೇಗುಲದ ಆಡಳಿತ ಮಂಡಳಿಯ ಪ್ರಮುಖರಾದ ರಮೇಶ್ ಪ್ರಭು, ಗೋಪಾಲ್ ಪೈ, ವೆಂಕಟೇಶ ಪ್ರಭು, ಸುರೇಶ್ ಪ್ರಭು, ನಾಗಪಯ್ಯ ಪ್ರಭು, ನಿತ್ಯಾನಂದ ಪ್ರಭು ,ರಂಗನಾಥ ಪೈ, ಉಮಾನಾಥ್ ಪೈ, ಸ್ಥಳೀಯರಾದ ಸುರೇಶ್ ಆಚಾರ್ಯ, ದಿನೇಶ್ ಆಚಾರ್ಯ, ದಿವಾಕರ ಆಚಾರ್, ಜನಾರ್ದನ ಆಚಾರ್ ಮತ್ತಿತರರು ಇದ್ದರು. ನಂತರ ಭಕ್ತಾಧಿಗಳಿಗೆ ಪನ್ಯಾರ ವಿತರಿಸಲಾಯಿತು.