ಕುಂದಾಪುರ ಮಿರರ್ ಸುದ್ದಿ…

ಕೋಟ: ಇಲ್ಲಿನ ಮಣೂರು ಶ್ರೀ ಚಿತ್ತಾರಿ ನಾಗ ಬ್ರಹ್ಮ ಪರಿವಾರ ದೇಗುಲದ ದೀಪೋತ್ಸವ ಕಾರ್ಯಕ್ರಮ ಇತ್ತೀಚಿಗೆ ವಿಜೃಂಭಣೆಯಿಂದ ಜರಗಿತು.
ವೇ. ಮೂ. ಮದುಸೂಧನ ಬಾಯರಿ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೆರಿತು.
ಹರಿಗುರು ಭಜನಾ ತಂಡ ಕೋಟ ಇವರಿಂದ ಭಜನಾ ಕಾರ್ಯಕ್ರಮ, ಭಕ್ತಾಧಿಗಳು ಹಣತೆಯಲ್ಲಿ ದೀಪ ಪ್ರಜ್ವಲಿಸಿದರು.
ದೇಗುಲದ ಆಡಳಿತ ಮಂಡಳಿಯ ಪ್ರಮುಖರಾದ ರಮೇಶ್ ಪ್ರಭು, ಗೋಪಾಲ್ ಪೈ, ವೆಂಕಟೇಶ ಪ್ರಭು, ಸುರೇಶ್ ಪ್ರಭು, ನಾಗಪಯ್ಯ ಪ್ರಭು, ನಿತ್ಯಾನಂದ ಪ್ರಭು ,ರಂಗನಾಥ ಪೈ, ಉಮಾನಾಥ್ ಪೈ, ಸ್ಥಳೀಯರಾದ ಸುರೇಶ್ ಆಚಾರ್ಯ, ದಿನೇಶ್ ಆಚಾರ್ಯ, ದಿವಾಕರ ಆಚಾರ್, ಜನಾರ್ದನ ಆಚಾರ್ ಮತ್ತಿತರರು ಇದ್ದರು. ನಂತರ ಭಕ್ತಾಧಿಗಳಿಗೆ ಪನ್ಯಾರ ವಿತರಿಸಲಾಯಿತು.











