ಕುಂದಾಪುರ :ದಿನೇಶ್ ಹೆಗ್ಡೆ ಟ್ರಸ್ಟ್ ನಿಂದ ಹದಿಹರೆಯದ ತರಬೇತಿ

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ‘ಎಂ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್’ ಇವರ ಆಶ್ರಯದಲ್ಲಿ ಗೋಳಿಯಂಗಡಿ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮಕ್ಕಳ ಪೋಷಕರಿಗೆ “ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ” ಹಾಗೂ ಹದಿಹರೆಯದ ವಯಸ್ಸು ಮತ್ತು ವರ್ತನೆ ಎಂಬ ವಿಷಯದ ಕುರಿತಾಗಿ ಕಾರ್ಯಾಗಾರವನ್ನು ನಡೆಸಿಕೊಡಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ರಾಘವೇಂದ್ರ ಗಾಣಿಗ, ಎಸ್. ಡಿ. ಎಂ .ಸಿ .ಅಧ್ಯಕ್ಷ ಸುಧಾ ಪ್ರಭು, ಎಸ್ ಡಿ ಎಂ ಸಿ ಸದಸ್ಯರಾದ ಬಾಬಣ್ಣ, ಗೋವಿಂದ, ದಿನಕರ ಪೂಜಾರಿ, ಸರೋಜ, ರತ್ನ, ಪ್ರೇಮ, ಸಹ ಶಿಕ್ಷಕರು ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಗಿರೀಶ್ ಎಂ ಎನ್. ಕಾರ್ಯಗಾರ ನಡೆಸಿಕೊಟ್ಟರು.

Comments

Leave a Reply

Your email address will not be published. Required fields are marked *

More posts