ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸಾವಿರಾರು ಗಿಡಗಳನ್ನ ನೆಟ್ಟು ಮರವನ್ನಾಗಿಸಿದ ವೃಕ್ಷಮಾತೆ ಬಿರುದಾಂಕಿತರಾದ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಬೀಜಾಡಿಯಲ್ಲಿ ಪರಿಸರ ಪ್ರೇಮಿ ಭರತ್ ಬಂಗೇರ ನಿವಾಸಕ್ಕೆ ಭೇಟಿ ನೀಡಿ ಸವಿನೆನಪಿಗಾಗಿ ಗಿಡವೊಂದನ್ನು ನೆಟ್ಟರು. ಅವರನ್ನ ಪುಂಡಲೀಕ ಬಂಗೇರ ಕುಟುಂಬದವರು ಅತ್ಯಂತ ಗೌರವದಿಂದ ಸ್ವಾಗತಿಸಿ ಗೌರವಿಸಿದರು.
ಈ ಸಂದರ್ಭ ಗಣೇಶ್ ಪುತ್ರನ್, ಪುಂಡಲಿಕ್ ಬಂಗೇರ,ಹಿರಿಯರಾದ ಗುಲಾಬಿ ಸುವರ್ಣ, ಕಲ್ಪನಾ ಭಾಸ್ಕರ್, ಭರತ್ ಬಂಗೇರ, ಸರಸ್ವತಿ ಪುತ್ರನ್, ಮಾಲತಿ ಬಂಗೇರ ,ಲೋಹಿತ್ ಬಂಗೇರ, ಪ್ರಜ್ಞಾ ಲೋಹಿತ್, ಮೇಘ ಭರತ್ ಮತ್ತು ಕುಟುಂಭಸ್ತರು ಉಪಸ್ಥಿತರಿದ್ದರು.











