ಕುಂದಾಪುರ :ನರೇಂದ್ರ ಕುಮಾರ್ ಕೋಟ ಅವರಿಗೆ ಪ್ರೇರಣಾ ಪುರಸ್ಕಾರ

0
438

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ವ್ಯಕ್ತಿತ್ವ ವಿಕಸನ ಪುಸ್ತಕಗಳಾದ ‘ಸೋಲು ಅಂತಿಮವಲ್ಲ’ ‘ಪದಗಳೇ ಬಂಗಾರ’ ರೇಡಿಯೋ ಮಣಿಪಾಲದಲ್ಲಿ ನೂರಕ್ಕೂ ಮಿಕ್ಕಿದ ವ್ಯಕ್ತಿತ್ವ ಸರಣಿ ಬಾನುಲಿ ಕಾರ್ಯಕ್ರಮ, ಜಿಲ್ಲಾಧ್ಯಂತ ತರಬೇತಿ ಕಾರ್ಯಕ್ರಮಗಳು, ಸ್ಥಳೀಯ ಮಾಧ್ಯಮದ ಮೂಲಕ ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮಗಳು, ಪರೀಕ್ಷಾ ಹಬ್ಬ ತರಬೇತಿ, ಕಾರ್ಯಗಾರ ತರಬೇತಿ ಕಮ್ಮಟ, ಶಿಕ್ಷಕರಿಗೆ ಮಾರ್ಗದರ್ಶನ ಶಿಬಿರ, ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರ ಮೊದಲಾದ ಅಂಶಗಳನ್ನು ಗಮನಿಸಿ ಕೋಟ ವಿವೇಕ ಬಾಲಕಿಯರ ಶಿಕ್ಷಕರಾದ ಹಾಗೂ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನರೇಂದ್ರ ಕುಮಾರ್ ಕೋಟ ಅವರಿಗೆ ತರಬೇತಿ ಸಾಧನೆಗಾಗಿ ಪ್ರೇರಣಾ ಪುರಸ್ಕಾರ ನೀಡಲಾಗಿದೆ.

ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ಜೆಸಿ ತರಬೇತಿದಾರರ ಸಮ್ಮೇಳನದಲ್ಲಿ ಈ ಪುರಸ್ಕಾರ ನೀಡಿ ಗೌರವಿಸಲಾಗಿದೆ.

Click Here

LEAVE A REPLY

Please enter your comment!
Please enter your name here