ದೇಶದ ಶಿಲ್ಪಕಲಾ ವೈಭವಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ – ಅಪರ ಜಿಲ್ಲಾಧಿಕಾರಿ

0
366

Click Here

Click Here

ಕುಂದಾಪುರ ಮಿರರ್ ಸುದ್ದಿ…
ಉಡುಪಿ:
ವಿಶ್ವಕರ್ಮರು ಭಾರತೀಯ ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ ಜಗದ್ಗುರುಗಳು, ಭಾರತದಲ್ಲಿ ಇಂದು ಕಾಣುತ್ತಿರುವ ಶಿಲ್ಪಕಲಾ ವೈಭವಕ್ಕೆ ವಿಶ್ವಕರ್ಮರು ಹಾಕಿಕೊಟ್ಟ ಮಾರ್ಗವೇ ಕಾರಣವೆಂದು ಅಪರ ಜಿಲ್ಲಾಧಿಕಾರಿ ಬಿ. ಸದಾಶಿವ ಪ್ರಭು ಹೇಳಿದರು.

ಅವರು ಇಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸರಳವಾಗಿ ಆಯೋಜಿಸಿದ್ದ ಭಗವಾನ್ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದಲ್ಲಿ ಸಾವಿರಾರು ವರ್ಷಗಳಿಂದಲೂ ದೇವಸ್ಥಾನಗಳು, ಅರಮನೆ, ಕೋಟೆ ಕೊತ್ತಲುಗಳ ನಿರ್ಮಾಣ ಮಾಡಿದವರು, ಶಿಲ್ಪಕಲಾಕೃತಿಗಳು ಮತ್ತು ಪಂಚಲೋಹಕಲಾಕೃತಿಗಳಿಗೆ ಬುನಾದಿ ಹಾಕಿಕೊಟ್ಟವರು ವಿಶ್ವಕರ್ಮರು. ಇಂದಿಗೂ ದೇವಸ್ಥಾನಗಳ ನಿರ್ಮಾಣ, ಗೋಪುರಗಳು, ಮೂರ್ತಿ ನಿರ್ಮಾಣ, ಬೃಹತ್ ರಥಗಳ ನಿರ್ಮಾಣದಲ್ಲಿ ತೊಡಗಿಕೊಂಡಿರವ ವಿಶ್ವಕರ್ಮ ಸಮಾಜದವರು ನಮ್ಮ ಸಂಸ್ಕೃತಿಗೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ಅದಕ್ಕಾಗಿ ಅವರನ್ನು ದೇವರ ಮಕ್ಕಳು ಎಂದು ಕರೆಯುತ್ತೇವೆ ಎಂದ ಅವರು ಸಾವಿರಾರು ವರ್ಷಗಳ ಹಿಂದೆಯೇ ಭಾರತದಲ್ಲಿ ವಿಶ್ವಕರ್ಮ ಸಮಾಜದವರು ವಿಜ್ಞಾನ ಮತ್ತು ಪುರಾತನಶಾಸ್ತ್ರ ಪರಿಣಿತಿ ಹೊಂದಿದ್ದರು ಎಂದು ಹೇಳಿದರು.
ಆದಿಯಲ್ಲಿ ಜಗದ್ಗುರು ವಿಶ್ವಕರ್ಮ ಹಾಕಿಕೊಟ್ಟ ಭದ್ರ ಬುನಾದಿಯಿಂದಲೇ ಭಾರತದಲ್ಲಿ ಶಿಲ್ಪಕಲೆ ವ್ಯಾಪಕವಾಗಿ ಬೆಳೆಯಲು ಸಾಧ್ಯವಾಯಿತು. ಪುರಿ, ಮಧುರೈ, ಬೇಲೂರು-ಹಳೆಬೀಡು, ಬಾದಾಮಿ, ಐಹೊಳೆ-ಪಟ್ಟದಕಲ್ಲು, ಹಂಪೆ, ಎಲ್ಲೋರಾದ ಶಿಲ್ಪಕಲೆಯ ರಚನೆಗಳು ವಿಶ್ವಕರ್ಮ ಸಮಾಜದವರು ಭಾರತ ದೇಶಕ್ಕೆ ಕೊಟ್ಟ ಅಮೂಲ್ಯ ಕೊಡುಗೆಗಳು ಎಂದು ಹೇಳಿದರು.

Click Here

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ನ ಉಪ ಕಾರ್ಯದರ್ಶಿ, ಕಿರಣ್ ಪಡ್ನೇಕರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ, ಅಖಿಲ ಕರ್ನಾಟಕದ ವಿಶ್ವಕರ್ಮ ಮಹಾಸಭಾದ ಜಿಲ್ಲಾಧ್ಯಕ್ಷ ರಮೇಶ ಆಚಾರ್ಯ, ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸೇವಾ ಸಂಘದ ಕಾರ್ಯದರ್ಶಿ ವಿಶ್ವನಾಥ್ ಆಚಾರ್ಯ, ಶಿಲ್ಪಿ ಗಣಪತಿ ಆಚಾರ್ಯ ಶಂಕರಪುರ, ಕೆ.ಜೆ. ಗಣೇಶ್ ಆಚಾರ್ಯ, ಬಿ.ಎ. ಆಚಾರ್ಯ, ದಾಮೋದರ ಆಚಾರ್ಯ ಹಾಗೂ ಸಮಾಜದ ಮುಖಂಡರು ಮತ್ತು ಅಧಿಕಾರಿ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Click Here

LEAVE A REPLY

Please enter your comment!
Please enter your name here