ತೆಕ್ಕಟ್ಟೆ- ಜ್ಞಾನ ವಿಜ್ಞಾನ, ಗಣಿತ, ಸಂಸ್ಕೃತಿ ಜ್ಞಾನ, ಯೋಗ ಮೇಳ ಕಾರ್ಯಕ್ರಮ

0
420

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ: ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾಗಿರಿ ತೆಕ್ಕಟ್ಟೆಯಲ್ಲಿ ಆ. 12 ರಂದು ಜ್ಞಾನ ವಿಜ್ಞಾನ, ಗಣಿತ, ಸಂಸ್ಕೃತಿ ಜ್ಞಾನ, ಯೋಗ ಮೇಳ ಕಾರ್ಯಕ್ರಮವನ್ನು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಘಟಕ ಸಂಯೋಗದೊಂದಿಗೆ ಆಯೋಜಿಸಲಾಯಿತು.

ಶಾಲಾ ಆಡಳಿತ ಮಂಡಳಿಯ ಸಂಚಾಲಕ ಟಿ. ರಮೇಶ್ ನಾಯಕ್ ರವರು ಆರನೇ ತರಗತಿ ವಿದ್ಯಾರ್ಥಿಯಾದ ತನ್ಮಯ್ ಇವನು ತಯಾರಿಸಿದ ಅಲೆಗಳಿಂದ ವಿದ್ಯುತ್ ಶಕ್ತಿ ವಿಜ್ಞಾನ ಮಾದರಿಯನ್ನು ಚಾಲನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

Click Here

ಸುಮಾರು 10 ವಿದ್ಯಾಭಾರತೀಯ ಶಾಲೆಗಳಿಂದ 252 ಮಂದಿ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾ ಭಾರತೀ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಪೈ ವಹಿಸಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿದ್ಯಾ ಭಾರತೀ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಹೇಶ್ ಹೈಕಾಡಿ, ಉಡುಪಿ ಜಿಲ್ಲಾ ಘಟಕದ ವಿಜ್ಞಾನ ಪ್ರಮುಖ ಸಂಧ್ಯಾ ಭಟ್, ಯೋಗ ಪ್ರಮುಖ ಸಂಜಯ್, ಸಂಸ್ಕೃತಿ ಜ್ಞಾನ ಪ್ರಮುಖ ಕುಮಾರಿ ಜ್ಯೋತಿ ಎಳ್ಳಾರೆ, ಗಣಿತ ಪ್ರಮುಖ ಜ್ಯೋತಿ ಅಡಿಗ , ಶಾಲಾ ಮುಖ್ಯೋಪಾಧ್ಯಾಯ ಟಿ. ವಿಷ್ಣುಮೂರ್ತಿ ಭಟ್ ಇವರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here