ಕುಂದಾಪುರ ಮಿರರ್ ಸುದ್ದಿ…
ಕೋಟ: ಶ್ರೀ ಕ್ಷೇತ್ರ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನ ಇಲ್ಲಿ ವರ್ಷಂಪ್ರತಿಯಂತೆ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ವೇ.ಮೂ ಮಧುಸೂದನ್ ಬಾಯರಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು
ಸಾವಿರಾರು ಭಕ್ತರು ಶ್ರೀ ಅಮೃತೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಮಹಿಳಾ ಭಕ್ತರು ಶ್ರೀ ದೇವಿಗೆ ಕುಂಕುಮಾರ್ಚನೆ, ಹರಿವಾಣನೈವೆದ್ಯ, ಪಂಚಾಮೃತ ಅಭಿಷೇಕ,ಮಂಗಳಾರತಿ ನೀಡಿ ಪ್ರಸಾದ ಸ್ವೀಕರಿಸಿದರು.
ಶ್ರೀ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆನಂದ್ ಸಿ ಕುಂದರ್, ಸದ್ಯರಾದ ಸತೀಶ್ ಹೆಗ್ಡೆ,ಸುಶೀಲ ಸೋಮಶೇಖರ್, ಜ್ಯೋತಿ ಬಿ ಶೆಟ್ಟಿ, ಚಂದ್ರ ಪೂಜಾರಿ, ಸುಂದರ್,ಸುಬ್ರಾಯ ಆಚಾರ್, ದೇವಸ್ಥನಾದ ಅರ್ಚಕರಾದ ದಾಮೋದರ ಜೋಗಿ ಮತ್ತಿತರರು ಇದ್ದರು.











