ಕುಂದಾಪುರ ಕಾಂಗ್ರೆಸ್ ಕಛೇರಿಯಲ್ಲಿ ಆಸ್ಕರ್ ಫರ್ನಾಂಡಿಸ್ ರವರ ಪುಣ್ಯಸ್ಮರಣೆ

0
421

Click Here

Click Here

ಕುಂದಾಪುರ ಮಿರರ್ ‌ಸುದ್ದಿ…

ಕುಂದಾಪುರ :ಕಾಂಗ್ರೆಸ್ ಪಕ್ಷದ ಹಿರಿಯ ನೇತಾರ ಕೇಂದ್ರ ಸರಕಾರದ ಮಾಜಿ ಸಚಿವ ದಿI ಆಸ್ಕರ್ ಫೆರ್ನಾಂಡಿಸ್ ರವರ 2 ನೇ ಪುಣ್ಯತಿಥಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಆಚರಿಸಲಾಯಿತು .

ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪ ಚಂದ್ರ ಶೆಟ್ಟಿಯವರು ಈ ಸಂದರ್ಭದಲ್ಲಿ ಆಸ್ಕರ್ ಫೆರ್ನಾಂಡಿಸರವರ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಮಾಡಿ ಸರಳ ವ್ಯಕ್ತಿತ್ವದ ಮೂಲಕ ಪಕ್ಷ , ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಕ್ಕೆ ಅವರು ಪ್ರಚಾರವಿಲ್ಲದೇ ಅನೇಕ ಕೆಲಸ ಮಾಡಿದ್ದರು ಮತ್ತು ಸಾಮಾನ್ಯ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯವಿಟ್ಟುಕೊಂಡ ರಾಜಕಾರಣಿಯೆಂದು ಸ್ಮರಿಸಿಕೊಂಡರು.

Click Here

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಪಕ್ಷದ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ , ಎಂ. ದಿನೇಶ ಹೆಗ್ಡೆ ಆಸ್ಕರ್ ರವರನ್ನು ಸ್ಮರಿಸಿಕೊಂಡರು.

ಪಕ್ಷದ ಮುಖಂಡರಾದ ಅಶೋಕ ಪೂಜಾರಿ ಬೀಜಾಡಿ , ದೇವಕಿ ಸಣ್ಣಯ್ಯ, ಗಂಗಾಧರ ಶೆಟ್ಟಿ , ಚಂದ್ರ ಕಾಂಚನ್ ಕಾಸನಕಟ್ಟೆ , ಪ್ರಭಾವತಿ ಶೆಟ್ಟಿ , ನಾರಾಯಣ ಆಚಾರ್ , ಶಶಿರಾಜ ಪೂಜಾರಿ , ರಮೇಶ ಶೆಟ್ಟಿ ವಕ್ವಾಡಿ , ಚಂದ್ರ ಅಮಿನ್ , ಅಶೋಕ , ಚಂದ್ರಶೇಖರ ಶೆಟ್ಟಿ , ಅಭಿಜಿತ್ ಪೂಜಾರಿ , ದರ್ಮಪ್ರಕಾಶ , ವಿವೇಕಾನಂದ , ಕೇಶವ ಭಟ್ , ಸುನೀಲ್ ಪೂಜಾರಿ , ಸುರೇಶ ಶೆಟ್ಡಿ , ಕಿಶೋರ್ ಮಂದಾರ್ತಿ , ವಿಜಯ ಪೂಜಾರಿ ಉಳ್ತೂರು , ಸದಾನಂದ ಖಾರ್ವಿ , ಸಂತೋಷ್ , ಸುರೇಶ್ ಶೆಟ್ಟಿ , ರಾದಾಕ್ರಷ್ಣ ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಉಪಾದ್ಯಕ್ಷ ಚಂದ್ರಶೇಖರ ಖಾರ್ವಿ ಸ್ವಾಗತಿಸಿ , ಕಾರ್ಯದರ್ಶಿ ಆಶಾ ಕರ್ವೆಲ್ಲೋ ವಂದಿಸಿದರು . ಅಶೋಕ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Click Here

LEAVE A REPLY

Please enter your comment!
Please enter your name here