ಕುಂದಾಪುರ ಮಿರರ್ ಸುದ್ದಿ…
ಕೋಟ: ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ವತಿಯಿಂದ ಗೋವಿಗಾಗಿ ಮೇವು ಕಾರ್ಯಕ್ರಮದಲ್ಲಿ ಒಂದು ಲೋಡು ಒಣಹುಲ್ಲನ್ನು ರೋಟರಿ ಕ್ಲಬ್ ಅಧ್ಯಕ್ಷರಾದ ಅರವಿಂದ ಶರ್ಮರ ಮನೆಯಿಂದ ನೀಲಾವರ ಗೋಶಾಲೆಗೆ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ಅರವಿಂದ ಶರ್ಮ ಗೋವಿಗಾಗಿ ಮೇವು ವಿಷಯದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಬಾಲಕೃಷ್ಣ ಪೂಜಾರಿ, ರತ್ನ ಜೆ.ರಾಜ್, ಕೃಷ್ಣ ಆಚಾರ್ , ಮಹಾದೇವ ಸುವರ್ಣ ಉಪಸ್ಥಿತರಿದ್ದರು.











