ಕೊಂಕಣ್ ಎಕ್ಸ್ ಪ್ರೆಸ್ ಪ್ರೀಮಿಯರ್ ಲೀಗ್ 2024 ವಿಜೇತ ತಂಡ ಇರ್ವತ್ತೂರು ಸ್ಪೋರ್ಟ್ಸ್ ಕ್ಲಬ್ ಮಣಿಪಾಲ

0
337

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕೋಟ : ಕೊಂಕಣ್ ಸ್ಪೋರ್ಟ್ಸ್ ಹಾಗೂ ಕಲ್ಚರಲ್ ಅಸೋಸಿಯೇಷನ್ ಕೋಟೇಶ್ವರದ ವತಿಯಿಂದ ಜಿಎಸ್‍ಬಿ ಸಮಾಜ ಬಾಂಧವರಿಗೆ 40 ಗಜಗಳ ಕ್ರಿಕೆಟ್ ಪಂದ್ಯಾಟ ರೋಯ್ಸ್ ಯುಪಿವಿಸಿ ಡೋರ್ಸ್ ವಿಂಡೋಸ್ ಕೊಂಕಣ್ ಎಕ್ಸ್‍ಪ್ರೆಸ್ ಪ್ರೀಮಿಯರ್ ಲೀಗ್ 2024 ಪ್ರಥಮ ಸ್ಥಾನವನ್ನು ಇರ್ವತ್ತೂರು ಸ್ಪೋರ್ಟ್ಸ್ ಕ್ಲಬ್ ಪಡೆದುಕೊಂಡಿದೆ.

ದ್ವಿತೀಯ ಸ್ಥಾನವನ್ನು ಟಿವಿಎನ್ ಸ್ಕ್ವಾಡ್ ಜಿಎಸ್‍ಬಿ ತೆಕ್ಕಟ್ಟೆ ಪಡೆದುಕೊಂಡಿದೆ.

ಸಮಾರೋಪ ಸಮಾರಂಭದಲ್ಲಿ ಸಮಾಜದ ಯುವ ನಾಯಕ ನಂದನ್ ಮಲ್ಯ ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಮಟ್ಟದಲ್ಲಿ ಕ್ರಿಕೆಟ್ ಪಂದ್ಯಾಟ ಆಯೋಜಿಸುವುದು ಶ್ಲಾಘನೀಯ. ನಮ್ಮ ಸಮಾಜದ ಯುವಕರು ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈಯಲು ಅಗತ್ಯವಿರುವ ತರಬೇತಿ ಕೇಂದ್ರ ಸ್ಥಾಪಿಸಲು ಶ್ರಮಿಸುವುದಾಗಿ ಹೇಳಿದರು.

ಉದ್ಯಮಿ ಆಟಕೆರೆ ವಿಶ್ವನಾಥ ಪೈ ಮಾತನಾಡುತ್ತಾ ಕ್ರಿಕೆಟ್ ಆಟದ ತಮ್ಮ ಅನುಭವವನ್ನು ಮೆಲುಕು ಹಾಕುತ್ತಾ ಮುಂದಿನ ದಿನಗಳಲ್ಲಿ ಕ್ರೀಡೆ ಹಾಗೂ ಕಲೆಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

ಶ್ರೀ ರಾಮ ಸೇವಾ ಸಂಘದ ಅಧ್ಯಕ್ಷ ಶಂಕರ್ ಕಾಮತ್ ಇಂತಹ ಹಲವಾರು ಪಂದ್ಯಕೂಟ ಸಮಾಜದ ಪ್ರತಿ ಊರಿನಲ್ಲಿ ನಡೆಯಬೇಕು. ಜಿಎಸ್‍ಬಿ ಸಮಾಜದವರು ಪ್ರತಿಯೊಂದು ಕ್ಷೇತ್ರದಲ್ಲಿ ಪ್ರತಿನಿಧಿಸಬೇಕು ಎಂದು ಆಶಯಪಟ್ಟರು.

ವೇದಿಕೆಯಲ್ಲಿ ಉದ್ಯಮಿಗಳದ ಅರವಿಂದ ಕಾಮತ್, ಆಟಕೆರೆ ವಿವೇಕ ಪೈ, ಕೊಂಕಣ್ ಸ್ಪೋರ್ಟ್ಸ್ ಹಾಗೂ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಅನಂತ ಪೈ ಉಪಸ್ಥಿತರಿದ್ದರು.

Click Here

ತೃತೀಯ ತಂಡವಾಗಿ ಸೂಪರ್ ಎಸ್‍ವಿಎಸ್ ಕಟಪಾಡಿ ಹಾಗೂ ನಾಲ್ಕನೇ ಸ್ಥಾನವನ್ನು ರೋಷನ್ ಚಾಲೆಂಜರ್ಸ್ ಕುಂದಾಪುರ ಪಡೆದುಕೊಂಡಿದ್ದಾರೆ.

ಸರಣಿ ಶ್ರೇಷ್ಠ ನಾಗೇಶ್ ಪೈ, ಉತ್ತಮ ದಾಂಡಿಗನಾಗಿ ಶರತ್ ಪ್ರಭು, ಉತ್ತಮ ಎಸೆತಗಾರನಾಗಿ ದೀಪಕ್ ಬಾದಲ್, ಉತ್ತಮ ವಿಕೇಟ್ ಕೀಪರ್ ಸತೀಶ್ ಕಾಮತ್, ಉತ್ತಮ ಫೀಲ್ಡರ್ ಷಣ್ಮುಖ ಬಾಳಿಗಾ ಪ್ರಶಸ್ತಿಯನ್ನು ಪಡೆದುಕೊಂಡರು.

ನರೇಶ್ ಭಟ್ ಸ್ವಾಗತಿಸಿ, ಪ್ರಾಸ್ತಾವಿಸಿ, ನಿರೂಪಿಸಿದರು. ವಿನೀತ್ ಭಟ್ ಧನ್ಯವಾದಗೈದರು.

ಜಿಎಸ್‍ಬಿ ಸಮಾಜ ಬಾಂಧವರಿಗೆ ನಡೆದ ಎರಡು ದಿನಗಳ ಈ ಕ್ರಿಕೆಟ್ ಪಂದ್ಯಕೂಟದಲ್ಲಿ ಉಭಯ ಜಿಲ್ಲೆಗಳ 12 ತಂಡಗಳಲ್ಲಿ 120 ಆಟಗಾರರು ಲೀಗ್ ಮಾದರಿಯ ಪಂದ್ಯಾಟದಲ್ಲಿ ಭಾಗವಹಿಸಿದರು.

ಪರಿಸರ ಕಾಳಜಿಯ ದೃಷ್ಟಿಯಿಂದ ಹಾಗೂ ಪಂದ್ಯಾಟದ ಸವಿನೆನಪಿಗಾಗಿ 6 ಗಿಡಗಳನ್ನು ತಂಡದ ಮಾಲೀಕರಿಂದ ನೆಡಲಾಯಿತು. ಮುಂದಿನ ದಿನಗಳಲ್ಲಿ ಈ ಗಿಡದ ಸಂಪೂರ್ಣ ನಿರ್ವಹಣೆ ಪಂದ್ಯಾಟದ ಆಯೋಜಕರು ವಹಿಸಿಕೊಂಡಿದ್ದಾರೆ.

Click Here

LEAVE A REPLY

Please enter your comment!
Please enter your name here