ಕುಂದಾಪುರ ಮಿರರ್ ಸುದ್ದಿ…
ಕೋಟ: ಇಲ್ಲಿನ ಪುರಾತ ಇತಿಹಾಸವುಳ್ಳ ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆ ಬಾಳೆಕುದ್ರು ಶ್ರೀ ಮಠದ ಶ್ರೀ ಶ್ರೀ ನೃಸಿಮಹಾಶ್ರಮ ಶ್ರೀಪಾದಂಗಳರವರು ಚಾತುರ್ಮಾಸ್ಯ ಅಂಗವಾಗಿ ಜು.21ರಿಂದ ಸೆ.18ರ ವರೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಆಚರಿಸುತ್ತಿದ್ದಾರೆ. ದಿನಂಪ್ರತಿ ನಿತ್ಯ ಪೂಜೆ ಪೂರ್ವಾಹ್ನ 9.ಗ ಇಂದ ಅಪರಾಹ್ನ 12.30ರ ತನಕ ಸಂಜೆ 5.30 ರಿಂದ ರಾತ್ರಿ 8ಗ ವರೆಗೆ ಮಹಾಪೂಜೆ ಇತ್ಯಾದಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ ಎಂದು ಶ್ರೀ ಮಠದ ವ್ಯವಸ್ಥಾಪಕರಾದ ಮಂಜುನಾಥ್ ಭಟ್ ತಿಳಿಸಿದ್ದಾರೆ.











