ಕುಂದಾಪುರ ಮಿರರ್ ಸುದ್ದಿ…
ಕೋಟ: ವಯೋ ನಿವೃತ್ತಿ ಹೊಂದಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಡ್ಡರ್ಸೆಯ ಹೇಮಲತಾ ಅವರನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಾಬಲ ಪೂಜಾರಿಯವರು ಸನ್ಮಾನಿಸಿ ನಿವೃತ್ತಿ ಜೀವನವು ಆಯುರಾರೋಗ್ಯ, ಸುಖ, ಸಂತೋಷ, ನೆಮ್ಮದಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ, ಹಳೆ ವಿದ್ಯಾರ್ಥಿಗಳಾದ ಸತೀಶ್ ವಡ್ಡರ್ಸೆ, ಸಚ್ಚಿದಾನಂದ ಅಡಿಗ, ರಾಜು ಶ್ರೀಯಾನ್, ಪದ್ಮನಾಭ ಆಚಾರ್ಯ, ಶಶಿಧರ್ ದೇವಾಡಿಗ, ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ, ಸಹ ಶಿಕ್ಷಕಿ ಯಶೋಧರವರು ಉಪಸ್ಥಿತರಿದ್ದರು.











