ಬೈಂದೂರು: ಶಾಸಕ ಗಂಟಿಹೊಳೆ ಕ್ಷೇತ್ರದ ಜನತೆಯ ದಿಕ್ಕು ತಪ್ಪಿಸುವ ನಾಟಕ ನಿಲ್ಲಿಸಲಿ -ಕಿಶನ್ ಹೆಗ್ಡೆ

0
400

Click Here

Click Here

ಕುಂದಾಪುರ ಮಿರರ್ ಸುದ್ದಿ…

ಬೈಂದೂರು; ಶಾಸಕರಾದವರಿಗೆ ಕನಿಷ್ಟ ಸಾಂವಿಧಾನಿಕ ಮತ್ತು ಆಡಳಿತಾತ್ಮಕ ಜ್ಞಾನ ಹಾಗೂ ಅಗತ್ಯ ಕಾನೂನಿನ ಅರಿವಿಲ್ಲದೆ ಪ್ರಚಾರದ ಅಮಲಿನಲ್ಲಿ ಜನರನ್ನು ದಿಕ್ಕು ತಪ್ಪಿಸುವ ನಾಟಕವನ್ನು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ನಿಲ್ಲಿಸಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲು ಕಿವಿಮಾತು ಹೇಳಿದರು.

ಅವರು ಮಂಗಳವಾರ ಬೈಂದೂರು ಕಾಂಗ್ರೆಸ್‌ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಬೈಂದೂರು ಆಡಳಿತ ಸೌಧದ ಎದುರುಗಡೆ ಶಾಸಕ ಗುರುರಾಜ ಗಂಟಿಹೊಳೆ ಧರಣಿ ಕುಳಿತಿರುವುದು ಮತ್ತು ಕಾಂಗ್ರೆಸ್‌ ಪಕ್ಷ ಶಾಸಕರ ಅಧಿಕಾರವನ್ನು ಕಸಿಯುತ್ತಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಮಾತಾಡಿದರು.

Click Here

ಸಂವಿಧಾನದಲ್ಲಿ ಶಾಸಕರಿಗೆ ಕೆ.ಡಿ.ಪಿ ಸಭೆ ಹೊರತುಪಡಿಸಿದರೆ ಮತ್ಯಾವ ಸಭೆ ನಡೆಸಲು ಅಧಿಕಾರ ಇದೆ ಎಂದು ತಿಳಿದುಕೊಳ್ಳಬೇಕು. ಅದರಲ್ಲೂ ಸರ್ಕಾರಿ ಅಧಿಕಾರಿಗಳನ್ನು ಸಭೆಗೆ ಕರೆಯಬೇಕಾದರೆ ಅದರದ್ದೆ ಆದ ನಿಯಮಗಳಿವೆ. ನೋಟಿಸ್‌ ನೀಡುವ ಜೊತೆಗೆ ಕಡತ ನಿರ್ವಹಣೆ ಕೂಡ ಅಗತ್ಯ. ಆದರೆ ಯಾವುದೇ ನಿಯಮ ಅಗತ್ಯ.ಆದರೆ ಯಾವುದೇ ನಿಯಮ ಪಾಲಿಸದೆ ಕಾನೂನಿನಲ್ಲಿ ಅವಕಾಶವಿಲ್ಲ.ಖಾಸಗಿ ಕಛೇರಿಯಲ್ಲಿ ಅಧಿಕಾರಿಗಳನ್ನು ಕರೆದು ಸಭೆ ನಡೆಸುವ ಅಧಿಕಾರ ಸಂವಿಧಾನದಲ್ಲಿಲ್ಲ ಎನ್ನುವ ಸಾಮಾನ್ಯ ಜ್ಞಾನ ಶಾಸಕರಿಗಿಲ್ಲದಿರುವುದು ಆಶ್ಚರ್ಯ ತಂದಿದೆ.ಇಂತಹ ನಾಟಕಗಳ ಮೂಲಕ ಜನರನ್ನು ಮರಳು ಮಾಡುವುದು ಬಿಜೆಪಿ ಪಕ್ಷಕ್ಕೆ ಕರಗತವಾಗಿದೆ.ಸಾದ್ಯವಾದರೆ ವರಾಹಿ ಬಲದಂಡೆ ಕುರಿತು ಧರಣಿ ನಡೆಸಲಿ. ಕೃಷಿಕರ, ಬಡವರ ಪರ ಇರುವ ಯೋಜನೆಗಳ ಅನುಷ್ಟಾನಕ್ಕೆ ಧರಣಿ ನಡೆಸಿ ಜನರ ವಿಶ್ವಾಸಗಳಿಸಲಿ.ಶಾಸಕರು ಇಂತಹ ಗೊಂದಲ ಸೃಷ್ಟಿಸುವ ಪ್ರಯತ್ನ ನಿಲ್ಲಿಸಲಿ ಎಂದರು.

ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಪೂಜಾರಿ ಮಾತನಾಡಿ ಬೈಂದೂರು ಶಾಸಕರು ಸಾಂವಿಧಾನಿಕ ನಿಯಮ ತಿಳಿಯದೆ ಕಾರ್ಯಾಂಗದ ಎದುರು ಧರಣಿ ಕುಳಿತಿರುವುದು ಅವರ ಅನುಭವದ ಕೊರತೆಯನ್ನು ತೋರಿಸುತ್ತಿದೆ.ಮಾಜಿ ಶಾಸಕರ ಬಗ್ಗೆ ಆರೋಪಿಸುವ ನೈತಿಕತೆ ಅವರಿಗಿಲ್ಲ.ಮಾಜಿ ಶಾಸಕರು ಭ್ರಷ್ಟಾಚಾರ ಅಥವಾ ವರ್ಗಾವಣೆ ದಂಧೆ ಮಾಡಿದ್ದಾರೆ ಎನ್ನುವ ಆರೋಪ ಮಾಡುವ ಬಿಜೆಪಿ ಶಾಸಕರು ದಾಖಲೆ ಕೊಟ್ಟು ಮಾತಾಡಲಿ.ನಾಲ್ಕು ಬಾರಿ ಬೈಂದೂರು ಕ್ಷೇತ್ರದ ಶಾಸಕರಾದ ಕೆ.ಗೋಪಾಲ ಪೂಜಾರಿಯವರ ಬಗ್ಗೆ ಹಗುರವಾಗಿ ಮಾತನಾಡುವುದು ಕಾಂಗ್ರೆಸ್‌ ಪಕ್ಷ ಸಹಿಸೋದಿಲ್ಲ ಎಂದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಬಾಬು ಶೆಟ್ಟಿ,ಶಂಕರ ಪೂಜಾರಿ,ನಾಗರಾಜ ಶೆಟ್ಟಿ,ಪ್ರಕಾಶ್ಚಂದ್ರ ಶೆಟ್ಟಿ,ಸದಾಶಿವ ಡಿ.ಪಡುವರಿ,ನಾಗರಾಜ ಗಾಣಿಗ,ಮಾಜಿ ಜಿ.ಪಂ ಸದಸ್ಯೆ ಗೌರಿ ದೇವಾಡಿಗ,ಮದನ್ ಕುಮಾರ್ ಉಪ್ಪುಂದ ಮೊದಲಾದವರು ಹಾಜರಿದ್ದರು.

Click Here

LEAVE A REPLY

Please enter your comment!
Please enter your name here