ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಇಲ್ಲಿನ ಸುಧೀರ ನೈಲಾಡಿ ಹಾಗೂ ಸಾಲಿಗ್ರಾಮ ಕೃಷ್ಣಮೂರ್ತಿ ಮರಕಾಲ ಇವರ ನೇತೃತ್ವದ ಯಕ್ಷ ಬ್ರಹ್ಮಶ್ರೀ ಸಂಘಟನೆ ಆಶ್ರಯದಲ್ಲಿ ಸಾಲಿಗ್ರಾಮ ಯಕ್ಷಗಾನ ಮೇಳದ ಯಕ್ಷ ಪ್ರದರ್ಶನದ ಮೂಲಕ ಅಶಕ್ತರಿಗೆ ನೆರವಿನ ಹಸ್ತ ಚಾಚಿದ್ದಾರೆ.
ಸುಮಾರು 50ಸಾವಿರ ರೂ. ಆರ್ಥಿಕ ನೆರವನ್ನು ಇರ್ವರ ಕುಟುಂಬಗಳಿಗೆ ಸಹಾಯಹಸ್ತ ನೀಡಿದ್ದಾರೆ.
ಹಸ್ತಾಂತರ ಕಾರ್ಯಕ್ರಮದಲ್ಲಿ ಸಾಲಿಗ್ರಾಮ ದೇಗುಲದ ಅಧ್ಯಕ್ಷ ಡಾ.ಕೆ ಎಸ್ ಕಾರಂತ,ಸದಸ್ಯರಾದ ಕೆ.ಅನಂತಪದ್ಮನಾಭ ಐತಾಳ್, ವೈದ್ಯರಾದ ಗಣೇಶ್, ಸಂಘಟಕರಾದ ಸುಧೀರ್ ನೈಲಾಡಿ, ಕೃಷ್ಣಮೂರ್ತಿ ಮರಕಾಲ, ರಾಜು ಉಪಸ್ಥಿತರಿದ್ದರು.











