ಕಾಸನಗುಂದು ಪೂರ್ಣಿಮಾ ನೆರವಿಗೆ ಧಾವಿಸಿದ ಕೋಟದ ಪಂಚವರ್ಣ ಸಂಘಟನೆ

0
530

Click Here

Click Here

ಮಾನವೀಯತೆ ಶ್ರೇಷ್ಠವಾದದ್ದು – ಭಾರತಿ ವಿ. ಮಯ್ಯ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಇಲ್ಲಿನ ಕೋಟದ ಕಾಸನುಗುಂದು ಪರಿಸರದ ಪೂರ್ಣಿಮಾ ಗಣೇಶ್ ಮೊಗವೀರ ಇತ್ತೀಚಿಗೆ ಮಂದಾರ್ತಿಯಿಂದ ತನ್ನ ಪತಿಯೊಂದಿಗೆ ಬೈಕ್‍ನಲ್ಲಿ ಹಿಂತಿರುಗುವಾಗ ವಾಹನದಿಂದ ಬಿದ್ದು ತಲೆಗೆ ತೀವ್ರ ತರಹದ ಗಾಯಗಳಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಹಿನ್ನಲ್ಲೆಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಸಂಘಟನೆ ನೆರವಿಗೆ ಧಾವಿಸಿದ್ದು ಸುಮಾರು 22ಸಾವಿರ ರೂಗಳನ್ನು ಒಗ್ಗೂಡಿಸಿ ಶನಿವಾರ ಹಸ್ತಾಂತರಿಸಿತು.

Click Here

ಈ ಸಂದರ್ಭದಲ್ಲಿ ಪಂಚವರ್ಣದ ಗೌರವ ಸಲಹೆಗಾರರಾದ ಭಾರತಿ ವಿ.ಮಯ್ಯ ಹಸ್ತಾಂತರಿಸಿ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯೂ ಮಾನವೀಯತೆ ಮೈಗೂಡಿಸಿಕೊಳ್ಳಬೇಕು ಆ ಮೂಲಕ ಸಮಾಜದಲ್ಲಿ ಅಶಕ್ತ ಅನಾರೋಗ್ಯ ಪೀಡಿತರ ನೆರವಿಗೆ ಸದಾ ಸ್ಪಂದಿಸುವ ಮನಸ್ಥಿತಿ ಸೃಷ್ಠಿಸಿಕೊಳ್ಳಬೇಕು, ಈ ನಿಟ್ಟಿನಲ್ಲಿ ಪಂಚವರ್ಣ ಸಂಘಟನೆ ಒಂದು ಹೆಜ್ಜೆ ಮುಂದಿರಿಸಿ ಕಾರ್ಯನಿರ್ವಹಿಸುತ್ತಿದೆ. ಸಂಘಸಂಸ್ಥೆಗಳು ಕ್ರಿಯಾಶೀಲತೆ ಇದ್ದಾಗ ಇಂಥಹ ಕೆಲಸಗಳಿಗೆ ಸಹಾಯ ಮಾಡುವ ಕೈಗಗಳುಕೈಜೋಡಿಸುತ್ತವೆ ಎಂದು ಪೂರ್ಣಿಮಾಗಳಿಗೆ ಶೀಘ್ರ ಗುಣ ಮುಖರಾಗಿ ಸಮಾಜದೊಂದಿಗೆ ಬೆರೆಯಲು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಪಂಚವರ್ಣ ಯುವಕಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ, ಪಂಚವರ್ಣ ಮಹಿಳಾಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಸಂಚಾಲಕ ಅಮೃತ್ ಜೋಗಿ, ಉಪಾಧ್ಯಕ್ಷರಾದ ಸಂತೋಷ್ ಪೂಜಾರಿ, ದಿನೇಶ್ ಆಚಾರ್, ಶಿಸ್ತು ಸಮಿತಿ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ, ಕಾರ್ಯದರ್ಶಿ ವಸಂತಿ ಹಂದಟ್ಟು, ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ, ಕೋಟ ಗ್ರಾ.ಪಂ ಮಾಜಿ ಸದಸ್ಯ ರವೀಂದ್ರ ಜೋಗಿ ಮತ್ತಿತರರು ಇದ್ದರು.

Click Here

LEAVE A REPLY

Please enter your comment!
Please enter your name here